ನವದೆಹಲಿ: ಭಯೋತ್ಪಾದನೆಯನ್ನು ಬೆಂಬಲಿಸುವ ರಾಷ್ಟ್ರಗಳನ್ನು ಮೂಲೆಗುಂಪು ಮಾಡುವ ಸಲುವಾಗಿ ಎಲ್ಲಾ ರಾಷ್ಟ್ರಗಳು ಒಂದಾಗಬೇಕು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಕರೆ ನೀಡಿದ್ದಾರೆ.
ಭಯೋತ್ಪಾದನಾ ವಿರೋಧಿ ದಿನದಂದು ಸಂದೇಶವನ್ನು ರವಾನೆ ಮಾಡಿರುವ ಅವರು, ಭಯೋತ್ಪಾದನೆಯು ಮಾನವೀಯತೆಯ ಅತಿದೊಡ್ಡ ಶತ್ರು ಮತ್ತು ಜಾಗತಿಕ ಶಾಂತಿಗೆ ದೊಡ್ಡ ಬೆದರಿಕೆ ಎಂದು ಅಭಿಪ್ರಾಯಿಸಿದರು.
ಭಯೋತ್ಪಾದನಾ ವಿರೋಧಿ ದಿನದ ಅಂಗವಾಗಿ ಅವರು, ತಾಯಿನಾಡನ್ನು ರಾಕ್ಷಸಿ ಭಯೋತ್ಪಾದನೆಯಿಂದ ರಕ್ಷಿಸುವ ಸಲುವಾಗಿ ಪ್ರಾಣತ್ಯಾಗ ಮಾಡಿದ ಎಲ್ಲಾ ಧೀರ ಪುರುಷ ಮತ್ತು ಮಹಿಳೆಯರಿಗೆ ವಂದನೆಗಳನ್ನು ಅರ್ಪಣೆ ಮಾಡಿದರು.
“ಭಯೋತ್ಪಾದನೆಯು ಮಾನವೀಯತೆಯ ಅತಿ ದೊಡ್ಡ ಶತ್ರು ಮತ್ತು ಜಾಗತಿಕ ಶಾಂತಿಗೆ ದೊಡ್ಡಮಟ್ಟದ ಬೆದರಿಕೆ. ಭಯೋತ್ಪಾದನೆಯನ್ನು ಬೆಂಬಲಿಸುವ ಮತ್ತು ಪ್ರೋತ್ಸಾಹಿಸುವ ದೇಶಗಳನ್ನು ಮೂಲೆಗುಂಪು ಮಾಡುವ ನಿಟ್ಟಿನಲ್ಲಿ ಎಲ್ಲ ರಾಷ್ಟ್ರಗಳು ಒಂದಾಗಬೇಕು” ಎಂದಿದ್ದಾರೆ.
“ಭಯೋತ್ಪಾದನೆಯ ವಿರುದ್ಧ ಹೋರಾಟ ನಡೆಸುವುದು ಕೇವಲ ಭದ್ರತಾಪಡೆಗಳ ಜವಾಬ್ದಾರಿ ಮಾತ್ರವಲ್ಲ, ದುಷ್ಟ ತನದ ವಿರುದ್ಧ ಹೋರಾಡಿದ ಪ್ರತಿಯೊಬ್ಬ ನಾಗರಿಕರು ಜವಾಬ್ದಾರಿಯೂ ಆಗಿರುತ್ತದೆ. ಭಯೋತ್ಪಾದನೆಯನ್ನು ಸೋಲಿಸಲು ಪ್ರತಿಯೊಬ್ಬ ಭಾರತೀಯನು ಒಗ್ಗಟ್ಟಾಗಿರಬೇಕು” ಎಂದಿದ್ದಾರೆ.
1991ರಲ್ಲಿ ಹತ್ಯೆಗೀಡಾದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪುಣ್ಯ ತಿಥಿಯಂದು ಭಯೋತ್ಪಾದನಾ ವಿರೋಧಿ ದಿನವನ್ನು ಆಚರಣೆ ಮಾಡಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.