ನವದೆಹಲಿ: ಭಾರತೀಯ ಸೇನೆಯು ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ 22 ಭಯೋತ್ಪಾದಕರನ್ನು ಕಳೆದ ತಿಂಗಳಿನಿಂದ ಯಶಸ್ವಿಯಾಗಿ ಸಂಹಾರ ಮಾಡಿದೆ ಎಂದು ವರದಿಗಳು ತಿಳಿಸಿವೆ.
ಸೈನ್ಯವು ಏಕಕಾಲದಲ್ಲಿ COVID-19 ಸಾಂಕ್ರಾಮಿಕ ರೋಗದ ವಿರುದ್ಧ ರಾಷ್ಟ್ರದೊಂದಿಗೆ ಯುದ್ಧವನ್ನು ಎದುರಿಸುತ್ತಿದೆ ಮತ್ತು ಅದರ ಹರಡುವಿಕೆಯನ್ನು ತಡೆಗಟ್ಟಲು ಸಹಾಯ ಮಾಡುತ್ತಿದೆ. ಇನ್ನೊಂದೆಡೆ ದೇಶಕ್ಕೆ ಕಂಟಕವಾಗಿರುವ ಭಯೋತ್ಪಾದಕರ ವಿರುದ್ಧವೂ ಹೋರಾಟವನ್ನು ಮುಂದುವರಿಸಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ, ಸೇನಾ ಪಡೆ ಎರಡು ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡಿದೆ, ಕಾಶ್ಮೀರ ಕಣಿವೆಯ ಅನಂತ್ನಾಗ್ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ನಾಲ್ಕು ಭಯೋತ್ಪಾದಕರನ್ನು ಸಂಹರಿಸಿದೆ ಎಂದು ಸೇನೆಯ ರಕ್ಷಣಾ ಪಿಆರ್ಒ (ಉಧಂಪುರ್) ಲೆಫ್ಟಿನೆಂಟ್ ಕರ್ನಲ್ ಅಭಿನವ್ ನವನೀತ್ ತಿಳಿಸಿದ್ದಾರೆ.
2020 ರ ಆರಂಭದಿಂದೀಚೆಗೆ, ಭಾರತೀಯ ಸೇನೆಯಿಂದ ಸಂಹರಿಸಲ್ಪಟ್ಟ ಒಟ್ಟು ಭಯೋತ್ಪಾದಕರ ಸಂಖ್ಯೆ 54 ಕ್ಕೆ ತಲುಪಿದೆ ಎಂಬುದು ಗಮನಾರ್ಹ.
ಕಣಿವೆಯಲ್ಲಿ ಸೈನ್ಯದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯ ಉಲ್ಬಣ ಮತ್ತು ಯಶಸ್ಸು ಸೂಕ್ಷ್ಮ ಪ್ರದೇಶದಲ್ಲಿನ ಭದ್ರತಾ ಗ್ರಿಡ್ ಅನ್ನು ಬಲಪಡಿಸಿದೆ ಮತ್ತು ಭಯೋತ್ಪಾದಕರ ಸಂಖ್ಯೆಯನ್ನು ಮತ್ತು ಅವರ ನಾಯಕತ್ವವನ್ನು ಕಡಿಮೆ ಮಟ್ಟದಲ್ಲಿ ಇರಿಸಿದೆ.
ಒಂದು ವರದಿಯ ಪ್ರಕಾರ, ಪಾಕಿಸ್ತಾನ ತನ್ನ 14 ಕಾರ್ಯಾಚರಣಾ ಉಡಾವಣಾ ಪ್ಯಾಡ್ಗಳಿಂದ ಕಾಶ್ಮೀರಕ್ಕೆ ನುಸುಳಲು ಕಾಯುತ್ತಿರುವ ಭಯೋತ್ಪಾದಕರ ಸಂಖ್ಯೆಯನ್ನು ದ್ವಿಗುಣಗೊಳಿಸಿದೆ.
ಕಳೆದ ತಿಂಗಳಲ್ಲಿ ಪಾಕಿಸ್ತಾನದಿಂದ ಲೈನ್ ಆಫ್ ಕಂಟ್ರೋಲ್ (ಎಲ್ಒಸಿ) ಯಲ್ಲಿ ಅನೇಕ ಒಳನುಸುಳುವಿಕೆ ಪ್ರಯತ್ನಗಳು ಮತ್ತು ಕದನ ವಿರಾಮ ಉಲ್ಲಂಘನೆಗಳು ನಡೆದಿವೆ.
ಆರ್ಮಿ ಚೀಫ್ ಜನರಲ್ ಎಂ. ಎಂ. ನಾರವಾನೆ, “ನಾವು ನಮ್ಮ ನಾಗರಿಕರಿಗೆ ಮಾತ್ರವಲ್ಲದೆ ವಿಶ್ವದ ಇತರ ಭಾಗಗಳಿಗೂ ವೈದ್ಯಕೀಯ ತಂಡಗಳನ್ನು ಕಳುಹಿಸುವ ಮೂಲಕ ಮತ್ತು ಔಷಧಿಗಳನ್ನು ರಫ್ತು ಮಾಡುವ ಮೂಲಕ ಕಾರ್ಯನಿರತವಾಗಿದ್ದೇವೆ. ಮತ್ತೊಂದೆಡೆ, ಪಾಕಿಸ್ತಾನ ಭಯೋತ್ಪಾದನೆಯನ್ನು ಮಾತ್ರ ರಫ್ತು ಮಾಡುತ್ತಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.