ನವದೆಹಲಿ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ (ಐಐಟಿ-ಎಂ) ಶುಕ್ರವಾರ ತನ್ನ ಹೊಸ ಸಂಶೋಧನೆಯನ್ನು ಬಹಿರಂಗಗೊಳಿಸಿದೆ. ಜೇಡಿ ಮಣ್ಣು, ಬೂದಿಯಿಂದ ಮಾಡಿದ ಕಾಂಕ್ರೀಟ್ ಮತ್ತು ಸುಣ್ಣದಕಲ್ಲನ್ನು ಸಿಮೆಂಟ್ಗೆ ಬದಲಿಯಾಗಿ ಬಳಸಬಹುದು ಎಂಬುದನ್ನು ತೋರಿಸಿಕೊಟ್ಟಿದೆ.
ಐಐಟಿ-ಎಂ ಸಂಶೋಧಕರು ಮೈಕ್ರೊಸ್ಟ್ರಕ್ಚರಲ್ ಅಭಿವೃದ್ಧಿ ಮತ್ತು ಕಾಂಕ್ರೀಟ್ನ ಬಾಳಿಕೆ ಕಾರ್ಯಕ್ಷಮತೆಯ ನಡುವಿನ ಸಂಪರ್ಕದ ಬಗ್ಗೆ ತಮ್ಮ ಸಂಶೋಧನೆಯ ಮೂಲಕ ಸ್ಪಷ್ಟತೆಯನ್ನು ನೀಡಿದ್ದಾರೆ. ಇದು ನಿರ್ಮಾಣ ಉದ್ಯಮವಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ ಮತ್ತು ಇದು ಪರಿಸರ ಸ್ನೇಹಿ ಕೂಡ ಆಗಿದೆ.
ಕಾಂಕ್ರೀಟ್ ಎಂಬುದು ನಿರ್ಮಾಣದಲ್ಲಿ ಹೆಚ್ಚು ಬಳಕೆಯಾಗುವ ವಸ್ತುವಾಗಿದೆ. ಪ್ರತಿ ವರ್ಷ ಏಳು ಕ್ಯೂಬಿಕ್ ಕಿಲೋಮೀಟರ್ ಕಾಂಕ್ರೀಟ್ ತಯಾರಿಸಲಾಗುತ್ತದೆ. ಸಾಂಪ್ರದಾಯಿಕ ಕಾಂಕ್ರೀಟ್ ಅನ್ನು ಸಿಮೆಂಟ್ ನಿಂದ ತಯಾರಿಸಲಾಗುತ್ತದೆ. ಅದಕ್ಕೆ ಕಲ್ಲು ಇತ್ಯಾದಿಗಳನ್ನು ಮಿಶ್ರಣ ಮಾಡಲಾಗುತ್ತದೆ.
ಇದೀಗ ಐಐಟಿ-ಎಂ ಜೇಡಿ ಮಣ್ಣು, ಬೂದಿ ಮತ್ತು ಸುಣ್ಣದ ಕಲ್ಲನ್ನು ಬಳಸಿ ಕಾಂಕ್ರೀಟ್ ತಯಾರಿಸಿದೆ. ಇದು ಹೆಚ್ಚು ಪರಿಸರ ಸ್ನೇಹಿ ಮತ್ತು ಪ್ರಯೋಜನಕಾರಿಯೂ ಆಗಿದೆ. ಸಿಮೆಂಟಿಗೆ ಪರ್ಯಾಯವಾಗಿ ಇದನ್ನು ಬಳಕೆ ಮಾಡಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.