ನವದೆಹಲಿ: ಇಂದು ದೇಶದಲ್ಲಿ ‘ಜನೌಷಧಿ ದಿವಸ್’ ಅನ್ನು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನ ಮಂತ್ರಿ ಭಾರತಿಯ ಜನೌಷಧಿ ಪರಿಯೋಜನೆಯ ಫಲಾನುಭವಿಗಳು ಮತ್ತು ಜನೌಷಧಿ ಕೇಂದ್ರಗಳ ಮಾಲೀಕರೊಂದಿಗೆ ಸಂವಾದ ನಡೆಸಿದರು.
ಸಂವಾದದ ವೇಳೆ ಮಹಿಳೆಯೊಬ್ಬರು ತನಗೆ ಜೆನರಿಕ್ ಔಷಧಿಯಿಂದ ಎಷ್ಟೊಂದು ಲಾಭವಾಗುತ್ತಿದೆ ಎಂಬುದನ್ನು ವಿವರಿಸುವಾಗ ಮೋದಿ ಭಾವುಕರಾದರು.
‘ನನಗೆ ಪಾರ್ಶ್ವವಾಯು ಆಗಿದೆ. ವಾರ ವಾರ ಚಿಕಿತ್ಸೆ ನಡೆಯುತ್ತಿತ್ತು, ಔಷಧಿಗಳು ತುಂಬಾ ದುಬಾರಿಯಾಗಿದ್ದವು. ಹೀಗಾಗಿ ಮನೆ ನಡೆಸುವುದೇ ಕಷ್ಟಕರವಾಯಿತು. ಆಗ ನನಗೆ ನಿಮ್ಮ ಮೂಲಕ ಜನೌಷಧಿ ಸಿಕ್ಕಿತು. ಸಾವಿರಾರು ರೂಪಾಯಿ ವ್ಯಯಿಸಿ ಪಡೆಯುತ್ತಿದ್ದ ಔಷಧಿ ಈಗ ನನಗೆ ಕಡಿಮೆ ಬೆಲೆಯಲ್ಲಿ ಸಿಗುತ್ತಿದೆ. ಇದರಿಂದ ನನಗೆ ಸಾಕಷ್ಟು ಹಣ ಉಳಿತಾಯವಾಗುತ್ತಿದೆ. ಮನೆ ಖರ್ಚು ಮತ್ತು ಹಣ್ಣುಗಳನ್ನು ಸೇವಿಸಲು ನಾನಿದನ್ನು ಬಳಸುತ್ತೇನೆ. ನಾನು ದೇವರನ್ನು ನೋಡಿಲ್ಲ, ಆದರೆ ನಿಮ್ಮಲ್ಲಿ ದೇವರನ್ನು ಖಂಡಿತಾ ನೋಡಿದ್ದೇನೆ” ಎಂದು ಡೆಹ್ರಾಡೂನಿನ ಮಹಿಳೆಯೊಬ್ಬರು ಮೋದಿಗೆ ಭಾವುಕರಾಗಿ ಜನೌಷಧಿಯಿಂದ ತಮಗಾದ ಪ್ರಯೋಜನವನ್ನು ವಿವರಿಸಿದ್ದಾರೆ. ಮಹಿಳೆಯ ಮಾತು ಮೋದಿಯವರೂ ಭಾವುಕರಾದರು.
ಸಂವಾದದ ವೇಳೆ ಮಾತನಾಡಿದ ಮೋದಿ, “ಜನೌಷಧಿಗಳಿಂದ ಜನಸಾಮಾನ್ಯರ ರೂ.12,500 ಕೋಟಿಗಳು ಉಳಿತಾವಾಗಿದೆ. ಸುಮಾರು 1,000 ಔಷಧಿಗಳ ಬೆಲೆಯನ್ನು ನಿಯಂತ್ರಿಸಲಾಗಿದೆ, ಇದರಿಂದ ದೇಶದಾದ್ಯಂತದ ಬಡವರಿಗೆ ಪ್ರಯೋಜನವಾಗಿದೆ. ಜನ ಸಾಮಾನ್ಯರು ಇದರಿಂದಾಗಿ ಸುಮಾರು ಆಯುಷ್ಮಾನ್ ಭಾರತ್ ಯೋಜನೆಯಡಿ ಸುಮಾರು 90 ಲಕ್ಷ ಬಡವರಿಗೆ ಉಚಿತ ಆರೋಗ್ಯ ಸೇವೆ ಮತ್ತು ಚಿಕಿತ್ಸೆಯನ್ನು ನೀಡಲಾಗಿದೆ. ಪ್ರಧಾನಮಂತ್ರಿ ಜನೌಷಧಿಯ ಪ್ರಯೋಜನ ಸಮಾಜದ ಪ್ರತಿ ವರ್ಗಕ್ಕೂ ಸಿಗುತ್ತಿದೆ. ಬಡ ಮತ್ತು ಮಧ್ಯಮ ವರ್ಗದವರಿಗೆ ಇದರ ಲಾಭ ಸಿಗುತ್ತಿದೆ. ವಿಶೇಷವಾಗಿ ನಮ್ಮ ಮಹಿಳೆಯರು ಮತ್ತು ಸಹೋದರಿಯರಿಗೂ ಇದರಿಂದ ಪ್ರಯೋಜನವಾಗುತ್ತಿದೆ. ದೇಶದ ಜನರು ವೈದ್ಯಕೀಯ ಸೌಲಭ್ಯಕ್ಕಾಗಿ ದೂರ ಹೋಗಬಾರದು ಎಂಬುದು ನಮ್ಮ ಸರ್ಕಾರ ಪ್ರಯತ್ನವಾಗಿದೆ. ಹೀಗಾಗಿ ದೇಶದಾದ್ಯಂತ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಮೆಡಿಕಲ್ ಕಾಲೇಜುಗಳನ್ನು ನಿರ್ಮಾಣ ಮಾಡಲಾಗುತ್ತಿದೆ, ಇದರಿಂದ ದೇಶದಲ್ಲಿ ಮೆಡಿಕಲ್ ಸೀಟುಗಳಲ್ಲಿ ಏರಿಕೆಯಾಗುತ್ತಿದೆ” ಎಂದರು.
ಸಂವಾದ ಕಾರ್ಯಕ್ರಮದಲ್ಲಿ ಒಟ್ಟ 7 ಭಾರತೀಯ ಜನೌಷಧಿ ಪರಿಯೋಜನಾ ಕೇಂದ್ರಗಳು ಪ್ರಧಾನಿಯೊಂದಿಗೆ ಸಂವಾದ ನಡೆಸಿದವು.
ಜೆನೆರಿಕ್ ಔಷಧಿಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅದರ ಬಳಕೆಯನ್ನು ಉತ್ತೇಜಿಸಲು ಕೇಂದ್ರವು ಮಾರ್ಚ್ 7, 2019 ಅನ್ನು ಭಾರತದಾದ್ಯಂತ ‘ಜನ ಔಷಧಿ ದಿವಸ್’ ಅನ್ನು ಆಚರಿಸುತ್ತದೆ.
700 ಜಿಲ್ಲೆಗಳಲ್ಲಿ ಸುಮಾರು 6,200 ಮಳಿಗೆಗಳನ್ನು ಹೊಂದಿರುವ ಜನೌಷಧಿ ಕೇಂದ್ರಗಳನ್ನು ವಿಶ್ವದ ಅತಿದೊಡ್ಡ ಚಿಲ್ಲರೆ ಫಾರ್ಮಾ ಸರಪಳಿ ಎಂದು ಪರಿಗಣಿಸಲಾಗಿದೆ. ಈ ಯೋಜನೆಯು ಸುಸ್ಥಿರ ಮತ್ತು ನಿಯಮಿತ ಗಳಿಕೆಯೊಂದಿಗೆ ಸ್ವ-ಉದ್ಯೋಗದ ಉತ್ತಮ ಮೂಲವನ್ನು ಒದಗಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.