ನವದೆಹಲಿ: ಇಂದು ಆರಂಭವಾಗಲಿರುವ ಸಂಸತ್ತಿನ ಬಜೆಟ್ ಅಧಿವೇಶನಕ್ಕೂ ಮುನ್ನ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಆರ್ಥಿಕತೆ ಮತ್ತು ಜನರ ಸಬಲೀಕರಣದ ಬಗ್ಗೆ ವಿವರವಾದ ಚರ್ಚೆ ನಡೆಯುವ ಬಗ್ಗೆ ನನಗೆ ಭರವಸೆ ಇದೆ ಎಂದು ಹೇಳಿದ್ದಾರೆ.
“ನಾನು ಉಭಯ ಸದನಗಳಲ್ಲಿ ಆರ್ಥಿಕತೆಯ ಬಗ್ಗೆ ವ್ಯಾಪಕವಾದ, ಗುಣಾತ್ಮಕ ಚರ್ಚೆಯನ್ನು ಬಯಸುತ್ತೇನೆ. ನಮ್ಮ ಅಧಿವೇಶನವು ಆರ್ಥಿಕ ವಿಷಯಗಳ ಮೇಲೆ ಮತ್ತು ಪ್ರಸ್ತುತ ಜಾಗತಿಕ ಆರ್ಥಿಕ ಪರಿಸ್ಥಿತಿಯ ಲಾಭವನ್ನು ಭಾರತ ಹೇಗೆ ಪಡೆಯಬಹುದು ಎಂಬ ಮೇಲೆ ಕೇಂದ್ರೀಕರಿಸಬೇಕು” ಎಂದು ಮೋದಿ ಅಧಿವೇಶನದ ಆರಂಭದಲ್ಲಿ ಹೇಳಿದ್ದಾರೆ.
ಈ ದಶಕದ ಬಲಿಷ್ಠ ಉಜ್ವಲ ಭವಿಷ್ಯಕ್ಕೆ ಈ ಸದನ ಸಮರ್ಪಣೆಯಾಗಬೇಕು ಎಂದು ಹೇಳಿದ್ದಾರೆ.
ಇದು 2020ರ ಮತ್ತು ಈ ದಶಕದ ಮೊದಲ ಅಧಿವೇಶನ ಎಂದು ಹೇಳಿದ ಅವರು, “ದಶಕಕ್ಕೆ ಬಲವಾದ ಅಡಿಪಾಯವನ್ನು ಹಾಕುವ ಪ್ರಯತ್ನ” ಎಂದು ಬಣ್ಣಿಸಿದರು
“ನಮ್ಮ ಸರ್ಕಾರ ದಲಿತರು, ಮಹಿಳೆಯರು, ಶೋಷಣೆಯನ್ನು ಎದುರಿಸುತ್ತಿರುವವರಿಗೆ ಅಧಿಕಾರ ನೀಡುವ ಪ್ರಯತ್ನಗಳನ್ನು ಮುಂದುವರಿಸಲು ಬಯಸುತ್ತದೆ” ಎಂದಿದ್ದಾರೆ.
ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ನಾಳೆ ಬಜೆಟ್ ಮಂಡಿಸಲಿದ್ದಾರೆ. ಈ ಬಜೆಟ್ ಮೇಲೆ ದೇಶದ ಚಿತ್ತ ಹರಿದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.