ನವದೆಹಲಿ: ಇನ್ಫೋಸಿಸ್ ಸಂಸ್ಥೆಯ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಖ್ಯಾತ ಉದ್ಯಮಿ ರತನ್ ಟಾಟಾ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮುಂಬಯಿಯಲ್ಲಿ ನಡೆದ TiE ಕಾರ್ಯಕ್ರಮದಲ್ಲಿ ಈ ಇಬ್ಬರು ದಿಗ್ಗಜ ಉದ್ಯಮಿಗಳು ಪರಸ್ಪರ ಭೇಟಿಯಾಗಿದ್ದಾರೆ.
ಈ ವಿಡಿಯೋವನ್ನು ರತನ್ ಟಾಟಾ ಅವರು ತಮ್ಮ ಅಧಿಕೃತ ಇನ್ಸ್ಟಾ ಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, “ನಾರಾಯಣ ಮೂರ್ತಿ ಅವರ ನಡೆಯಿಂದ ಮೂಕವಿಸ್ಮಿತನಾದೆ” ಎಂದಿದ್ದಾರೆ. “ಉತ್ತಮ ಸ್ನೇಹಿತ ನಾರಾಯಣ ಮೂರ್ತಿ ಅವರ ಕೈಯಲ್ಲಿ TIEcon ಪ್ರಶಸ್ತಿ ಪಡೆಯುವುದು ಗೌರವ ತಂದುಕೊಟ್ಟಿದೆ” ಎಂದಿದ್ದಾರೆ.
ಕಾರ್ಯಕ್ರಮ ಸಂಘಟಕರಾದ ಟಿಇ ಮುಂಬೈ ಈ ಫೋಟೋಗಳನ್ನು ಟ್ವಿಟರಿನಲ್ಲಿ ಹಂಚಿಕೊಂಡಿದೆ, “ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಟಾಟಾ ಸನ್ಸ್ ಅಧ್ಯಕ್ಷ ರತನ್ ಟಾಟಾ ಅವರಿಂದ TIEcon ಮುಂಬೈನಲ್ಲಿ ಆಶೀರ್ವಾದ ಪಡೆದಿದ್ದಾರೆ. ನಮ್ರತೆಯ ಸ್ಪರ್ಶ ಇದಾಗಿದೆ ಮತ್ತು ಒಂದು ಐತಿಹಾಸಿಕ ಕ್ಷಣವೂ ಆಗಿದೆ” ಎಂದಿದೆ.
ಈ ದೃಶ್ಯ ಭಾರೀ ವೈರಲ್ ಆಗಿದ್ದು, ಸಂಸ್ಕೃತಿ ಸಂಕೇತ ಎಂದು ಹಲವರು ಬಣ್ಣಿಸಿದ್ದಾರೆ. ಒಬ್ಬ ದಿಗ್ಗಜ ಉದ್ಯಮಿ ಇನ್ನೊಬ್ಬ ದಿಗ್ಗಜ ಉದ್ಯಮಿಯ ಕಾಲು ಮುಟ್ಟಿ ನಮಸ್ಕರಿಸಿದ್ದು ನಿಜಕ್ಕೂ ಅದ್ಭುತವಾದ ಕ್ಷಣವಾಗಿದೆ.
Infosys co-founder, Narayana Murthy seeks blessings from TATA sons, Chairman Emeritus, @RNTata2000 at #TiEconMumbai.
A touching gesture of humility & a historic moment indeed. #WednesdayWisdom #narayanamurthy #ratantata pic.twitter.com/MmwNPm4SY4— TiE Mumbai (@TiEMumbai) January 29, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.