ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪುಣ್ಯ ಸ್ಮರಣೆಯನ್ನು ಪ್ರತಿವರ್ಷ ಜನವರಿ 30 ರಂದು ಆಚರಿಸಲಾಗುತ್ತದೆ. ತಮ್ಮ 78ನೇ ವಯಸ್ಸಿನಲ್ಲಿ 1948ರ ಜನವರಿ 30ರಂದು ಇವರು ಇಹಲೋಕವನ್ನು ತ್ಯಜಿಸಿದರು. ನಾಥುರಾಮ್ ಗೋಡ್ಸೆ ಎಂಬಾತ ಅವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದ.
ಗಾಂಧೀಜಿ ಪುಣ್ಯತಿಥಿಯಾದ ಜನವರಿ 30 ಅನ್ನು ಭಾರತದಲ್ಲಿ ‘ಹುತಾತ್ಮ ದಿನ’ವನ್ನಾಗಿ ಆಚರಿಸಲಾಗುತ್ತಿದೆ. ಗಾಂಧೀಜಿ ಪ್ರಾಣತ್ಯಾಗದ ಸ್ಮರಣಾರ್ಥ ಈ ದಿನವನ್ನು ಆಚರಿಸಲಾಗುತ್ತದೆ.
ಟ್ವಿಟ್ ಮಾಡಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್, “ಗಾಂಧೀಜಿಯವರು ತಮ್ಮ ಅಂತಿಮ ತ್ಯಾಗದಲ್ಲಿ, ನಮಗೆ ನಿರಂತರ ಜ್ಞಾಪನೆಯನ್ನು ನೀಡಿದ್ದರು, ಅದೇನೆಂದರೆ ಬೇಷರತ್ತಾದ ಪ್ರೀತಿ, ಅದರಲ್ಲೂ ವಿಶೇಷವಾಗಿ ಇತರರಿಗೆ. ನನಗೆ ವಿಶ್ವಾಸವಿದೆ, ನಮ್ಮಲ್ಲಿ ಹೆಚ್ಚಿನವರು ಗಾಂಧೀಜಿಯವರ ನಿಜವಾದ ಸಂದೇಶವನ್ನು ಕಂಡುಕೊಳ್ಳುತ್ತಾರೆ ಎಂದು” ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟ್ ಮಾಡಿ, “ರಾಷ್ಟ್ರಪತಿ ಮಹಾತ್ಮ ಗಾಂಧಿ ಅವರ ಪುಣ್ಯತಿಥಿಯಂದು ಅವರಿಗೆ ಕೋಟಿ ಕೋಟಿ ನಮನಗಳು. ಪೂಜ್ಯ ಬಾಪು ಅವರ ವ್ಯಕ್ತಿತ್ವಗಳು, ವಿಚಾರ ಮತ್ತು ಆದರ್ಶ ನಮ್ಮನ್ನು ಸಶಕ್ತ, ಸಕ್ಷಮ ಮತ್ತು ಸಮೃದ್ಧ ನಮ ಭಾರತ ನಿರ್ಮಾಣಕ್ಕೆ ಪ್ರೇರಣೆಯನ್ನು ನೀಡುತ್ತದೆ” ಎಂದಿದ್ದಾರೆ.
राष्ट्रपिता महात्मा गांधी की पुण्यतिथि पर उन्हें कोटि-कोटि नमन। पूज्य बापू के व्यक्तित्व, विचार और आदर्श हमें सशक्त, सक्षम और समृद्ध न्यू इंडिया के निर्माण के लिए प्रेरित करते रहेंगे।
— Narendra Modi (@narendramodi) January 30, 2020
On #MartyrsDay, President Kovind’s homage to #MahatmaGandhi: “In his final sacrifice, Gandhiji left a constant reminder for us: Unconditional love, especially for The Other. I am confident, more and more of us will discover Gandhiji’s true message”https://t.co/w9Ikr7sOV8
— President of India (@rashtrapatibhvn) January 30, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.