ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ವಾರ್ಷಿಕ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್ಸಿಸಿ) ರ್ಯಾಲಿಯಲ್ಲಿ ಮಾತನಾಡುತ್ತಾ, ನೆರೆಯ ರಾಷ್ಟ್ರಗಳಲ್ಲಿನ ಅಲ್ಪಸಂಖ್ಯಾತರಿಗೆ ನೀಡಲಾದ “ಐತಿಹಾಸಿಕ ಅನ್ಯಾಯ” ವನ್ನು ಸರಿಪಡಿಸಲು ಸರ್ಕಾರವು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತರಲಾಗಿದೆ ಎಂದು ಹೇಳಿದ್ದಾರೆ.
ವರದಿಗಳ ಪ್ರಕಾರ, ಪ್ರಧಾನಿ ಮೋದಿ ಅವರು ಕಾರ್ಯಕ್ರಮದಲ್ಲಿ ಮಾತನಾಡುವಾಗ ಅಲ್ಪಸಂಖ್ಯಾತರಿಗೆ ಆಗಿರುವ ಅನ್ಯಾಯಕ್ಕೆ ಉದಾಹರಣೆಯನ್ನು ನೀಡಿದರು. ಈ ಮೂಲಕ ಪಾಕಿಸ್ಥಾನದಲ್ಲಿ ಮುಸ್ಲಿಮೇತರರು ಹೇಗೆ ತಾರತಮ್ಯ ಮಾಡುತ್ತಾರೆಂದು ಸಭಿಕರಿಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ.
“ಸ್ವಲ್ಪ ಸಮಯದ ಹಿಂದೆ, ಪಾಕಿಸ್ಥಾನದ ಸೈನ್ಯವು ಜಾಹೀರಾತನ್ನು ಹೊರಡಿಸಿತ್ತು. ಅದು ಸ್ವಚ್ಛತಾ ಕಾರ್ಮಿಕರು ಬೇಕು ಎಂಬ ಜಾಹೀರಾತಾಗಿತ್ತು. ಮುಸ್ಲಿಮೇತರರು ಮಾತ್ರ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು ಎಂದು ಆ ಜಾಹೀರಾತಿನಲ್ಲಿ ಹೇಳಲಾಗಿತ್ತು. ಅಂದರೆ ಅದು ದಲಿತರು ಮತ್ತು ಅಲ್ಲಿನ ಅಲ್ಪಸಂಖ್ಯಾತರನ್ನು ನೇಮಿಸಿಕೊಳ್ಳಲು ಹಾಕಿದ ಜಾಹೀರಾತು ಆಗಿತ್ತು ”ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಹಾಗಾದರೆ ಪಾಕಿಸ್ಥಾನ ಸೇನೆಯು ಮುಸ್ಲಿಮೇತರರನ್ನು ಅಪಹಾಸ್ಯ ಮಾಡುವ ಇಂತಹ ಜಾಹೀರಾತನ್ನು ನಿಜವಾಗಿಯೂ ಪ್ರಕಟಿಸಿತ್ತೇ? ಹೌದು, ಅಂತಹ ಜಾಹೀರಾತನ್ನು ಪಾಕಿಸ್ಥಾನದ ಅರೆಸೈನಿಕ ಪಡೆ ನಿಜವಾಗಿಯೂ ಪೋಸ್ಟ್ ಮಾಡಿದೆ.
ವರದಿಗಳ ಪ್ರಕಾರ, ಆಗಸ್ಟ್ 26, 2018 ರಂದು ಪಾಕಿಸ್ಥಾನದ ಡಾನ್ ಪತ್ರಿಕೆಯಲ್ಲಿ ಈ ಜಾಹೀರಾತನ್ನು ಪಾಕಿಸ್ಥಾನ ರೇಂಜರ್ಸ್ (ಸಿಂಧ್) ಪ್ರಕಟಿಸಿತ್ತು. ಯುದ್ಧೇತರ ವಿಭಾಗದಲ್ಲಿ ವಿವಿಧ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಕೋರಿತ್ತು.
ಈ ಒಂದು ಜಾಹೀರಾತು ಪಾಕಿಸ್ಥಾನದ ನಿಜಮುಖ ಎಂತಹುದು ಎಂಬುದನ್ನು ತೋರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.