ನವದೆಹಲಿ: ‘ಆಪರೇಶನ್ ವೆನಿಲ್ಲಾ’ ಕಾರ್ಯಾಚರಣೆಯನ್ನು ಪ್ರಾರಂಭಿಸುವ ಮೂಲಕ ಪ್ರವಾಹದಿಂದ ಸಂಕಷ್ಟಕ್ಕೀಡಾಗಿರುವ ಮಡಗಾಸ್ಕರ್ಗೆ ನೆರವಿನ ಹಸ್ತ ನೀಡಲು ತಲುಪಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಬಟ್ಟೆಬರೆ, ನೌಕಾ ಪಡಿತರ, ಔಷಧಗಳನ್ನು ಭಾರತ ಹಡಗಿನ ಮೂಲಕ ಅಲ್ಲಿಗೆ ಹೊತ್ತೊಯ್ದಿದೆ.
ನಾಲ್ಕು ದೊಡ್ಡ ಮತ್ತು ಎರಡು ಮಧ್ಯಮ ಗಾತ್ರದ ಹಡಗುಗಳು ಬಟ್ಟೆ, ತುರ್ತು ಆಹಾರ, ತಾತ್ಕಾಲಿಕ ಆಶ್ರಯ ಸಾಮಾಗ್ರಿ, ವೈದ್ಯಕೀಯ ನೆರವು, ಸಾರಿಗೆ ಮತ್ತು ರಕ್ಷಣಾ ಸಿಬ್ಬಂದಿಯನ್ನು ಹೊತ್ತು ಬುಧವಾರ ಆ ದೇಶವನ್ನು ತಲುಪಲಿದೆ.
ಆ ದೇಶದಲ್ಲಿ ಸುಮಾರು 92,000 ಜನರು ಪ್ರವಾಹದಿಂದ ಪೀಡಿತರಾಗಿದ್ದಾರೆ ಮತ್ತು ಅನೇಕರು ಪ್ರಾಣ ಭಯದಿಂದ ಸ್ಥಳಾಂತರಗೊಂಡಿದ್ದಾರೆ. ಈ ಸಂಕಷ್ಟದ ಸಂದರ್ಭದಲ್ಲಿ ಮಡಗಾಸ್ಕರ್ ಅಧ್ಯಕ್ಷರು ಅಂತಾರಾಷ್ಟ್ರೀಯ ಬೆಂಬಲವನ್ನು ಕೋರಿದ್ದಾರೆ. ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ಕಾರ್ಯಾಚರಣೆಗಾಗಿ ಉತ್ತರ ಮಡಗಾಸ್ಕರ್ನ ಬಂದರಿನ ಆಂಸಿರಾನಾನದಲ್ಲಿ ಭಾರತ ಐಎನ್ಎಸ್ ಐರಾವತ್ ಅನ್ನು ನಿಯೋಜನೆಗೊಳಿಸುತ್ತಿದೆ.
ಮಡಗಾಸ್ಕರ್ ಭಾಗವಾಗಿರುವ “ವೆನಿಲ್ಲಾ” ದ್ವೀಪದ ಹೆಸರನ್ನು ಭಾರತೀಯ ಕಾರ್ಯಾಚರಣೆಗೆ ಇಡಲಾಗಿದೆ. ಮಡಗಾಸ್ಕರ್ ಜೊತೆಗೆ ಸೀಶೆಲ್ಸ್, ರಿಯೂನಿಯನ್, ಮಾರಿಷಸ್, ಕೊಮೊರೊಸ್, ಮಾಯೊಟ್ಟೆಗಳು ಇದನ್ನು ಹೇರಳವಾಗಿ ಬೆಳೆಯುವುದರಿಂದ ವೆನಿಲ್ಲಾ ದ್ವೀಪಗಳು ಎಂದು ಕರೆಯಲಾಗುತ್ತದೆ.
ಕಳೆದ ವರ್ಷ, ಭಾರತೀಯ ನೌಕಾಪಡೆಯು ತನ್ನ ಮೂರು ಹಡಗುಗಳನ್ನು ನೆರೆಯ ಮೊಜಾಂಬಿಕ್ಗೆ ಪರಿಹಾರಕ್ಕಾಗಿ ಕಳುಹಿಸಿತ್ತು, ಅಲ್ಲಿ ಇಡೈ ಎಂಬ ಭಯಾನ ಚಂಡಮಾರುತದಿಂದ ಅಪ್ಪಳಿಸಿತು. ಐಎನ್ಎಸ್ ಸುಜಾತಾ, ಐಎನ್ಎಸ್ ಶರತಿ ಮತ್ತು ಐಎನ್ಎಸ್ ಶಾರ್ದುಲ್ ಅನ್ನು ಆಗ್ನೇಯ ಆಫ್ರಿಕಾದ ದೇಶಕ್ಕೆ ಮಾನವೀಯ ಸಹಾಯಕ್ಕಾಗಿ ಕಳುಹಿಸಲಾಯಿತು ಮತ್ತು 200 ಕ್ಕೂ ಹೆಚ್ಚು ಜನರನ್ನು ರಕ್ಷಿಸಲು ಇದರಿಂದ ಸಾಧ್ಯವಾಯಿತು.
ಕಳೆದ ವಾರ ಭಾರತವು ನೆರೆಯ ಮಾಲ್ಡೀವ್ಸ್ಗೆ ಮೊದಲಿಗನಾಗಿ ಸಹಾಯ ಹಸ್ತ ಚಾಚಿ, ಆ ದೇಶದ ಕೋರಿಕೆಯಂತೆ 72 ಗಂಟೆಗಳ ಒಳಗೆ 30,000 ಡೋಸ್ ದಡಾರ ಲಸಿಕೆಗಳನ್ನು ಪೂರೈಸಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.