ನವದೆಹಲಿ : ಸೇವ್ ಶಾರದಾ ಸಮಿತಿ ಕಾಶ್ಮೀರ್ (Regd.) ಇಂದು ನವದೆಹಲಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಿ, ಕಳೆದ ಅಕ್ಟೋಬರ್ನಲ್ಲಿ ಪಿಓಕೆಯಲ್ಲಿರುವ ಶಾರದಾ ಪೀಠದ ಬಳಿ ಪೂಜೆ ನಡೆಸಿದ ಹಾಂಕಾಂಗ್ ಮೂಲದ ದಂಪತಿ ವೆಂಕಟ್ರಮಣ ಮತ್ತು ಅವರ ಪತ್ನಿ ಸುಜಾತಾಗೆ ಸನ್ಮಾನವನ್ನು ನಡೆಸಿತು. ಸಮಾರಂಭದಲ್ಲಿ ಪಾಲ್ಗೊಳ್ಳಲು ದಂಪತಿಗಳು ನವದೆಹಲಿಗೆ ಆಗಮಿಸಿದ್ದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಮೋಸ್ ಅವರು ವಹಿಸಿದ್ದರು, ಪಂಪೋಷ್ ಎನ್ಕ್ಲೇವ್ನ ಕಾಶ್ಮೀರಿ ಸಂಸ್ಕೃತಿ ಕೇಂದ್ರದ ಜನತುಂಬಿದ ಹಾಲಿನಲ್ಲಿ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಜಿತೇಂದ್ರ ಸಿಂಗ್ ಅವರು, ಶಾರದಾ ಪೀಠದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಸೇವ್ ಶಾರದಾ ಸಮಿತಿಯ ಪ್ರಯತ್ನವನ್ನು ಶ್ಲಾಘಿಸಿದರು. ಅಲ್ಲದೇ, ಶಾರದಾ ಪೀಠ ಸೇರಿದಂತೆ ಪಿಒಜೆಕೆ ಭಾರತಕ್ಕೂ ಸೇರಿದೆ ಎಂಬ ನಿಲುವಿಗೆ ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದ್ದಾರೆ.
ಗಿಲ್ಗಿಟ್ ಬಲ್ತಿಸ್ಥಾನ ತಜ್ಞ ಕ್ಯಾಪ್ಟನ್ ಸಿಕಂದರ್ ರಿಜ್ವಿ, ಕಾಶ್ಮೀರ ತಜ್ಞ ಮತ್ತು ಲೇಖಕ ಕಾಮಂಡರ್ (ನಿವೃತ್ತ) ದಲ್ಬೀರ್ ಸಿಂಗ್ ಸೋಧಿ ಕೂಡ ಈ ಕಾರ್ಯಕ್ರಮಕ್ಕೆ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದರು.
“ನಾವು ಪ್ರತಿ ವೇದಿಕೆಯಲ್ಲಿಯೂ ಶಾರದಾ ಸಮಸ್ಯೆಯನ್ನು ಹೈಲೈಟ್ ಮಾಡಲು ಬಯಸುತ್ತೇವೆ ಮತ್ತು ಶಾರದಾ ನಾಗರಿಕತೆ ಮತ್ತು ಶಾರದಾ ಲಿಪಿಯ ಐತಿಹಾಸಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಅಂಶಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ನಾವು ಬಯಸುತ್ತೇವೆ” ಎಂದು ಕಾಶ್ಮೀರ ಸೇವ್ ಶಾರದಾ ಸಮಿತಿಯ ಮುಖ್ಯಸ್ಥ ರವೀಂದರ್ ಪಂಡಿತ ಹೇಳಿದರು. ಶಾರದಾ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಮತ್ತು ಅದರ ಸಂರಕ್ಷಣೆಗಾಗಿ ಪಿಒಜೆಕೆ ನಾಗರಿಕ ಸಮಾಜದ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಸಮಾಜದ ಸದಸ್ಯರಾದ ರಯೀಸ್ ಮೊಹಮ್ಮದ್, ತನ್ವೀರ್ ಅಹಮದ್, ಸಾದಿಯಾ ರೆಹಮಾನ್, ಹಾಜಿ ಶಬ್ಬೀರ್, ಅಫ್ಜಲ್ ಅಯೂಬ್, ಖವಾಜಾ ಅಬ್ದುಲ್ ಘನಿ ಮುಂತಾದವರ ಬಗ್ಗೆ ವಿಶೇಷವಾಗಿ ಉಲ್ಲೇಖಿಸಲಾಯಿತು.
ಪಿಒಕೆಯಲ್ಲಿನ ಶಾರದಾ ಪೀಠವನ್ನು ಮತ್ತೆ ತೆರೆಯಲು ಸೇವ್ ಶಾರದಾ ಸಮಿತಿಯು ಒತ್ತಡ ಹೇರುತ್ತಿದೆ ಮತ್ತು ಈ ನಿಟ್ಟಿನಲ್ಲಿ ಜಿಒಐ, ಪಾಕಿಸ್ಥಾನ ಮತ್ತು ಪಿಒಜೆಕೆ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ ಎಂಬುದು ಗಮನಿಸಬೇಕಾದ ವಿಷಯ. “ಸಮಸ್ಯೆಯನ್ನು ಎತ್ತಿ ಹಿಡಿಯಲು ಭಾರತ ಮತ್ತು ವಿದೇಶಗಳಲ್ಲಿ ಇಂತಹ ಹೆಚ್ಚಿನ ಕಾರ್ಯಕ್ರಮಗಳನ್ನು ನಡೆಸಲು ನಾವು ಉದ್ದೇಶಿಸಿದ್ದೇವೆ. ನವದೆಹಲಿ, ಬೆಂಗಳೂರು, ಈ ವರ್ಷ ನಡೆದ ಪ್ರಯಾಗರಾಜ್ ಕುಂಭಮೇಳದಲ್ಲೂ ಈ ರೀತಿಯ ಕಾರ್ಯಕ್ರಮವನ್ನು ನಡೆಸಲಾಗಿದೆ ಮತ್ತು ಮುಂದಿನ ಕಾರ್ಯಕ್ರಮವನ್ನು ಬಾಂಗ್ಲಾದೇಶದಲ್ಲಿ ಮಾಡಲು ಉದ್ದೇಶಿಸಿದ್ದೇವೆ” ಎಂದು ರವೀಂದರ್ ಪಂಡಿತ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.