ನವದೆಹಲಿ: ಗಣರಾಜ್ಯೋತ್ಸವದಂದು ತಮ್ಮ ಮಾಸಿಕ ರೇಡಿಯೊ ಕಾರ್ಯಕ್ರಮ ‘ಮನ್ ಕಿ ಬಾತ್’ನಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಖೇಲೋ ಇಂಡಿಯಾ ಕ್ರೀಡಾಕೂಟದ ಮೂರನೇ ಆವೃತ್ತಿಯಲ್ಲಿ ಭಾಗವಹಿಸಿದವರನ್ನು ಅಭಿನಂದಿಸಿದರು. ತಳಮಟ್ಟದಲ್ಲಿ ಕ್ರೀಡಾಪಟುಗಳನ್ನು ಉತ್ತೇಜಿಸುವ ಉದ್ದೇಶದಿಂದ ಸರ್ಕಾರವು ಪ್ರಾರಂಭಿಸಿದ ಖೇಲೋ ಇಂಡಿಯಾ ಕಾರ್ಯಕ್ರಮದಲ್ಲಿ 6000 ಕ್ರೀಡಾಪಟುಗಳು ಭಾಗವಹಿಸಿದ್ದರು, ಜನವರಿ 22 ರಂದು ಇದು ಮುಕ್ತಾಯಗೊಂಡಿದೆ.
ತಮ್ಮ ಮಾತಿನ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಹಲವಾರು ಉದಯೋನ್ಮುಖ ಕ್ರೀಡಾಪಟುಗಳ ಬಗ್ಗೆ ಅನೇಕ ಉಲ್ಲೇಖಗಳನ್ನು ನೀಡಿದರು, ಇದರಲ್ಲಿ ‘ಡೇವಿಡ್ ಬೆಕ್ಹ್ಯಾಮ್’ ಹೆಸರು ಸಹ ಒಳಗೊಂಡಿತ್ತು. ಆತ ಅಂಡಮಾನಿನ ಉದಯೋನ್ಮುಖ ಸೈಕ್ಲಿಸ್ಟ್ ಆಗಿದ್ದಾರೆ.
“ನಾನು ಡೇವಿಡ್ ಬೆಕ್ಹ್ಯಾಮ್ ಹೆಸರನ್ನು ಉಲ್ಲೇಖಿಸಲು ಬಯಸುತ್ತೇನೆ, ಈ ಹೆಸರು ಅಂತಾರಾಷ್ಟ್ರೀಯ ಫುಟ್ಬಾಲ್ ಆಟಗಾರನದೆಂದು ನೀವು ಯೋಚಿಸುತ್ತಿರುವಿರಾ?. ಅಲ್ಲ, ನಮ್ಮ ಮಧ್ಯೆಯೇ ಡೇವಿಡ್ ಬೆಕ್ಹ್ಯಾಮ್ ಇದ್ದಾರೆ ಮತ್ತು ಗುವಾಹಟಿಯಲ್ಲಿ ನಡೆದ ಯುವ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಸೈಕ್ಲಿಂಗ್ನಲ್ಲಿ 200 ಮೀಟರ್ ಸ್ಪ್ರಿಂಟ್ ಸ್ಪರ್ಧೆಯಲ್ಲಿ ಅವರು ಜಯ ಗಳಿಸಿದ್ದಾರೆ ”ಎಂದು ಪ್ರಧಾನಿ ಹೇಳಿದ್ದಾರೆ.
ಗುವಾಹಟಿಯಲ್ಲಿ ನಡೆದ ಯುವ ಕ್ರೀಡಾಕೂಟದಲ್ಲಿ 200 ಮೀಟರ್ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಬೆಕ್ಹ್ಯಾಮ್ 17 ವರ್ಷದ ಯುವಕ. ಬೆಕ್ಹ್ಯಾಮ್ ತನ್ನ ಅಜ್ಜನ ಒತ್ತಾಯದ ಮೇರೆಗೆ ಸೈಕ್ಲಿಂಗ್ ಕೈಗೆತ್ತಿಕೊಂಡೆ ಎಂದು ಹೇಳಿದ್ದಾರೆ.
“ನನ್ನ ಕುಟುಂಬವು ಡೇವಿಡ್ ಬೆಕ್ಹ್ಯಾಮ್ ಅವರ ಅಪಾರ ಅಭಿಮಾನಿ, ಆದ್ದರಿಂದ ಅವರು ನನಗೆ ಅವರ ಹೆಸರನ್ನು ನೀಡಿದರು. ನಾನು ಡೇವಿಡ್ ಬೆಕ್ಹ್ಯಾಮ್ ಅಭಿಮಾನಿಯಾಗಿದ್ದೇನೆ. ನಾನು ಫುಟ್ಬಾಲ್ ಆಡುತ್ತಿದ್ದೆ. ನಾನು ಸುಬ್ರೋಟೊ ಕಪ್ ಪಂದ್ಯಾವಳಿಯಲ್ಲಿ ಆಡಿದ್ದೇನೆ. ನಂತರ ನನ್ನ ಅಜ್ಜ ಸೈಕ್ಲಿಂಗ್ ತೆಗೆದುಕೊಳ್ಳಲು ನನ್ನನ್ನು ಕೇಳಿಕೊಂಡರು, ”ಎಂದು ಖೇಲೋ ಇಂಡಿಯಾ ಸೈಟ್ನಲ್ಲಿನ ವರದಿಯಲ್ಲಿ ಬೆಕ್ಹ್ಯಾಮ್ ಉಲ್ಲೇಖಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.