ನವದೆಹಲಿ: ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ‘ಗಗನಯಾನ’ ಮಿಷನ್ 21 ನೇ ಶತಮಾನದಲ್ಲಿ ಭಾರತದ ಐತಿಹಾಸಿಕ ಸಾಧನೆಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.
2020 ರ ತನ್ನ ಮೊದಲ ‘ಮನ್ ಕಿ ಬಾತ್’ ನಲ್ಲಿ ಮಾತನಾಡದ ಮೋದಿ, “2022 ರಲ್ಲಿ ನಾವು 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸಲಿದ್ದೇವೆ ಮತ್ತು ಆ ಸಂದರ್ಭದಲ್ಲಿ, ಗಗನಯಾನ ಮಿಷನ್ ಮೂಲಕ ಭಾರತೀಯರನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯುವ ಪ್ರತಿಜ್ಞೆಯನ್ನು ನಾವು ಪೂರೈಸಬೇಕಾಗಿದೆ” ಎಂದು ಹೇಳಿದರು.
“ಗಗನಯಾನ ಮಿಷನ್ 21 ನೇ ಶತಮಾನದಲ್ಲಿ ಭಾರತಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಒಂದು ಐತಿಹಾಸಿಕ ಸಾಧನೆಯಾಗಲಿದೆ. ಇದು ಹೊಸ ಭಾರತಕ್ಕೆ ಒಂದು ಮೈಲಿಗಲ್ಲು ಎಂದು ಸಾಬೀತಾಗಲಿದೆ” ಎಂದು ಪ್ರಧಾನಿ ಹೇಳಿದರು.
ಈ ಕಾರ್ಯಾಚರಣೆಗೆ ಗಗನಯಾತ್ರಿಗಳಾಗಿ ಆಯ್ಕೆಯಾಗಿರುವ ಭಾರತೀಯ ವಾಯುಪಡೆಯ ನಾಲ್ಕು ಪೈಲಟ್ಗಳನ್ನು ಮತ್ತು ರಷ್ಯಾದಲ್ಲಿ ಅವರ ಮುಂಬರುವ ತರಬೇತಿಗಾಗಿ ಮೋದಿ ಶುಭಾಶಯಗಳನ್ನು ಕೋರಿದರು.
“ಈ ಭರವಸೆಯ ಯುವಕರು ಭಾರತದ ಕೌಶಲ್ಯ, ಪ್ರತಿಭೆ, ಸಾಮರ್ಥ್ಯ, ಧೈರ್ಯ ಮತ್ತು ಕನಸುಗಳನ್ನು ಸಂಕೇತಿಸುತ್ತಾರೆ. ನಮ್ಮ ನಾಲ್ವರು ಸ್ನೇಹಿತರು ತಮ್ಮ ತರಬೇತಿಗಾಗಿ ಕೆಲವೇ ದಿನಗಳಲ್ಲಿ ರಷ್ಯಾಕ್ಕೆ ಹೋಗಲಿದ್ದಾರೆ. ಇದು ಭಾರತ-ರಷ್ಯಾ ಸ್ನೇಹ ಮತ್ತು ಸಹಕಾರದಲ್ಲಿ ಮತ್ತೊಂದು ಸುವರ್ಣ ಅಧ್ಯಾಯವನ್ನು ಬರೆಯುತ್ತದೆ ಎಂದು ನನಗೆ ವಿಶ್ವಾಸವಿದೆ, ”ಎಂದು ಅವರು ಹೇಳಿದ್ದಾರೆ.
ಒಂದು ವರ್ಷದವರೆಗೆ ಅವರು ತರಬೇತಿಯನ್ನು ಪಡೆದ ನಂತರ, ರಾಷ್ಟ್ರದ ಆಶಯಗಳು ಮತ್ತು ಆಕಾಂಕ್ಷೆಗಳನ್ನು ಹೊತ್ತುಕೊಂಡು ಬಾಹ್ಯಾಕಾಶಕ್ಕೆ ಏರುವ ಜವಾಬ್ದಾರಿಯನ್ನು ಅವರು ವಹಿಸಿಕೊಳ್ಳುತ್ತಾರೆ ಎಂದು ಪ್ರಧಾನಿ ಹೇಳಿದರು.
“ಗಣರಾಜ್ಯೋತ್ಸವದ ಶುಭ ಸಂದರ್ಭದಲ್ಲಿ, ಈ ನಾಲ್ಕು ಯುವಕರನ್ನು ಮತ್ತು ಈ ಕಾರ್ಯಾಚರಣೆಗೆ ಸಂಬಂಧಿಸಿದ ಭಾರತೀಯ ಮತ್ತು ರಷ್ಯಾದ ವಿಜ್ಞಾನಿಗಳು ಮತ್ತು ಎಂಜಿನಿಯರ್ಗಳನ್ನು ನಾನು ಅಭಿನಂದಿಸುತ್ತೇನೆ” ಎಂದು ಅವರು ಹೇಳಿದ್ದಾರೆ.
ಆಗಸ್ಟ್ 15, 2018 ರಂದು ಮೋದಿಯವರು ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಗಗನಯಾನ ಯೋಜನೆಯನ್ನು ಘೋಷಣೆ ಮಾಡಿದ್ದರು. ಈ ಮಾನವಸಹಿತ ಮಿಷನ್ ನಂತರ, ರಷ್ಯಾ, ಯುಎಸ್ ಮತ್ತು ಚೀನಾದ ಬಳಿಕ ಬಾಹ್ಯಾಕಾಶಕ್ಕೆ ಮನುಷ್ಯರನ್ನು ಕಳುಹಿಸಿದ 4 ನೇ ದೇಶವಾಗಿ ಭಾರತ ಹೊರಹೊಮ್ಮಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.