ನವದೆಹಲಿ: ಭಾರತವು ತನ್ನ 71ನೇ ಗಣರಾಜ್ಯೋತ್ಸವದ ಅಂಗವಾಗಿ ನೆರೆಯ ಸ್ನೇಹಿತ ನೇಪಾಳಕ್ಕೆ 30 ಆಂಬುಲೆನ್ಸ್ ಮತ್ತು 6 ಬಸ್ಗಳನ್ನು ಉಡುಗೊರೆಯಾಗಿ ನೀಡಿದೆ. ನೇಪಾಳದ ವಿವಿಧ ಆಸ್ಪತ್ರೆ ಮತ್ತು ಎನ್ಜಿಓಗಳಲ್ಲಿ ಇದು ಬಳಕೆಯಾಗಲಿದೆ.
ಇಂದು ಕಟ್ಮಂಡುವಿನಲ್ಲಿ ಇರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಭಾರತದ ಗಣರಾಜ್ಯೋತ್ಸವ ಆಚರಣೆ ಮಾಡಲಾಯಿತು. ರಾಯಭಾರಿ ಅಜಯ್ ಕುಮಾರ್ ಅವರು ರಾಷ್ಟ್ರ ಧ್ವಜಾರೋಹಣವನ್ನು ನೆರವೇರಿಸುವ ಮೂಲಕ ಸಮಾರಂಭಕ್ಕೆ ಅಧಿಕೃತ ಚಾಲನೆಯನ್ನು ನೀಡಿದರು. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಭಾಷಣವನ್ನು ಇಲ್ಲಿ ಅವರು ಓದಿದರು.
ನೇಪಾಳದ ಸಾಮಾಜಿಕ ಆರ್ಥಿಕ ಅಭಿವೃದ್ಧಿಯ ಪಯಣದಲ್ಲಿ ಜೊತೆಗಾರನಾಗಿ ಇರುವ ಭಾರತದ ಬದ್ಧತೆಯನ್ನು ಪುನರುಚ್ಚರಿಸುವ ಸಲುವಾಗಿ ಭಾರತ ಅಂಬುಲೆನ್ಸ್ ಮತ್ತು ಬಸ್ಗಳನ್ನು ಆ ದೇಶಕ್ಕೆ ಉಡುಗೊರೆಯಾಗಿ ನೀಡಿದೆ.
ಈ ಬಗ್ಗೆ ಪ್ರಕಟನೆಯಲ್ಲಿ ಮಾಹಿತಿ ನೀಡಿರುವ ಭಾರತೀಯ ರಾಯಭಾರ ಕಚೇರಿ, “ರಾಯಭಾರ ಕಚೇರಿಯು 30 ಅಂಬುಲೆನ್ಸ್ ಮತ್ತು ಆರು ಬಸ್ಗಳನ್ನು ನೇಪಾಳದ ವಿವಿಧ ಆಸ್ಪತ್ರೆ ಮತ್ತು ಎನ್ಜಿಓ, ಶೈಕ್ಷಣಿಕ ಸಂಸ್ಥೆಗಳಿಗೆ ನೀಡಿದೆ. ನೇಪಾಳದ ಸಾಮಾಜಿಕ ಆರ್ಥಿಕ ಅಭಿವೃದ್ಧಿಯ ಪಯಣದಲ್ಲಿ ಜೊತೆಗಾರನ ಆಗಿರುವ ಭಾರತದ ಬದ್ಧತೆಯನ್ನು ಇದು ಪುನರುಚ್ಚರಿಸುತ್ತದೆ” ಎಂದಿದ್ದಾರೆ.
ಕುಮಾರ್ ಅವರು ಸೇನಾ ವಿಧವೆಯರಿಗೆ ವೀರನಾರಿ ಪ್ರಶಸ್ತಿಗಳನ್ನು ಹಂಚಿದರು. ಅಲ್ಲದೆ ಹುತಾತ್ಮ ಯೋಧರ ಸಂಬಂಧಿಗಳಿಗೆ 5.97 ಕೋಟಿ ನೇಪಾಳಿ ರೂ.ಗಳನ್ನು ಮತ್ತು ಬ್ಲ್ಯಾಂಕೆಟ್ಗಳನ್ನು ಹಂಚಿದರು.
ನೇಪಾಳದ ಶೈಕ್ಷಣಿಕ ಸಂಸ್ಥೆಗಳಿಗೆ 51 ಲೈಬ್ರರಿಗಳನ್ನು ಕೂಡ ಭಾರತ ಸ್ಥಾಪಿಸಿ ಕೊಟ್ಟಿದೆ.
ಭಾರತವು ಇದುವರೆಗೆ ನೇಪಾಳದ ವಿವಿಧ ಆಸ್ಪತ್ರೆ ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ, ಕಾರ್ಯಕಾರಿ ಸಂಸ್ಥೆಗಳಿಗೆ 782 ಆಂಬುಲೆನ್ಸ್ಗಳನ್ನು ಮತ್ತು 154 ಬಸ್ಸುಗಳನ್ನು ಉಡುಗೊರೆಯಾಗಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.