ನವದೆಹಲಿ: ಸಿಎಎ ವಿರುದ್ಧದ ಪ್ರತಿಭಟನೆಗಳ ಹಿಂದೂ ವಿರೋಧಿ ಮತ್ತು ರಾಷ್ಟ್ರ ವಿರೋಧಿ ಸ್ವರೂಪ ಈಗಾಗಲೇ ಬಹಿರಂಗಗೊಂಡಿದೆ. ಈಗ, ಸಿಎಎ ವಿರುದ್ಧ ಶಹೀನ್ ಭಾಗ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಹಿಂದಿನ ನಿಜವಾದ ಉದ್ದೇಶವು ಮುನ್ನೆಲೆಗೆ ಬಂದಿದೆ. ಪ್ರತಿಭಟನಾಕಾರರಿಗೆ ಸ್ಥಳಕ್ಕೆ ಬರಲು ಹಣ ನೀಡಲಾಗಿದೆ ಎಂಬ ಆರೋಪ ಈಗಾಗಲೇ ಇದೆ. ಶಹೀನ್ ಭಾಗ್ ಪ್ರತಿಭಟನೆಯನ್ನು ಇಸ್ಲಾಮಿಕ್ ಮೂಲಭೂತವಾದಿಗಳು ಆಕ್ರಮಿಸಿಕೊಂಡಿದ್ದಾರೆ. ಭಾರತವನ್ನು ಒಡೆಯುವುದಾಗಿ ಬಹಿರಂಗವಾಗಿ ಪ್ರತಿಪಾದಿಸುತ್ತಿದ್ದಾರೆ.
ವೈರಲ್ ಆಗಿರುವ ವೀಡಿಯೊವೊಂದರಲ್ಲಿ, ಜೆಎನ್ಯುನಲ್ಲಿ ಪಿಎಚ್ಡಿ ವಿದ್ಯಾರ್ಥಿ ಶಾರ್ಜೀಲ್ ಇಮಾಮ್, ಅಸ್ಸಾಂ ಅನ್ನು ಕತ್ತರಿಸುವುದು ನಮ್ಮ ಸಮುದಾಯದ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾನೆ. ಶಹೀನ್ ಬಾಗ್ ಪ್ರತಿಭಟನೆಯ ಮಾಸ್ಟರ್ ಮೈಂಡ್ ಆಗಿ ಕಾಣಿಸಿಕೊಂಡ ಶಾರ್ಜೀಲ್, ಈಶಾನ್ಯ ಭಾರತವನ್ನು ದೇಶದ ಉಳಿದ ಭಾಗಗಳಿಂದ ತುಂಡರಿಸಲು 5 ಲಕ್ಷ ಮುಸ್ಲಿಮರಿಗೆ ಕರೆ ನೀಡಿದ್ದಾನೆ.
“ಭಾರತದ ಕೊರಳ ಭಾಗವನ್ನು ನಾವು ಕಡಿಯುತ್ತೇವೆ. ಇದರಿಂದ ಭಾರತೀಯ ಸೇನೆಗೆ ಅಸ್ಸಾಂ ತಲುಪಲು ಸಾಧ್ಯವಾಗುವುದಿಲ್ಲ. ಕೊರಳ ಭಾಗದಲ್ಲಿ ವಾಸಿಸುವ ಜನರನ್ನು ಪ್ರಚೋದಿಸಲು ಕನ್ಹಯ್ಯ ಕುಮಾರ್ ಅನ್ನು ನಾವು ಬಳಸುತ್ತೇವೆ” ಎಂದಿದ್ದಾನೆ.
ಸಿಲಿಗುರಿ ಕಾರಿಡಾರ್ ಅನ್ನು ಭಾರತದ ಕೊರಳ ಭಾಗ (ಚಿಕನ್ ನೆಕ್ ಆಫ್ ಇಂಡಿಯಾ) ಎಂದು ಕರೆಯಲಾಗುತ್ತದೆ.
ನಮ್ಮ ವಿರೋಧವು ಸಿಎಎ ಅಲ್ಲ, 70 ವರ್ಷಗಳಿಂದ ಅನುಭವಿಸುತ್ತಿರುವ ದ್ರೋಹದ ವಿರುದ್ಧ ನಮ್ಮ ಹೋರಾಟ ಎಂಬುದಾಗಿ ಆತ ಆಡಿದ ಮಾತಿನಿಂದ ಆತನ ಉದ್ದೇಶ ಸ್ಪಷ್ಟವಾಗುತ್ತದೆ. ಭಾರತವನ್ನು ತುಂಡರಿಸುವ ಮತ್ತು ಈಶಾನ್ಯವನ್ನು ದೇಶದಿಂದ ಕತ್ತರಿಸಲು ಕರೆ ನೀಡಿರುವ ಆತನನ್ನು ಬಂಧನಕ್ಕೊಳಪಡಿಸಬೇಕು ಎಂದು ಹಲವಾರು ಆಗ್ರಹಿಸುತ್ತಿದ್ದಾರೆ.
ಈಶಾನ್ಯವನ್ನು ದೇಶದ ಇತರ ಭಾಗಗಳಿಂದ ತುಂಡರಿಸುವುದಾಗಿ ಆತ ನೀಡಿರುವ ಹೇಳಿಕೆಯಿಂದ ಇಸ್ಲಾಮಿಕ್ ಉಗ್ರರ ಮತ್ತು ತುಕ್ಡೇ ತುಕ್ಡೇ ಗ್ಯಾಂಗಿನ ನಿಜವಾದ ಉದ್ದೇಶ ಬಹಿರಂಗಗೊಂಡಿದೆ.
ಸಿಲಿಗುರಿ ಕಾರಿಡಾರ್ ಅನ್ನು ಭಾರತದ ಚಿಕನ್ ನೆಕ್ ಎಂದು ಕರೆಯಲಾಗುತ್ತದೆ, ಇದು ಈಶಾನ್ಯ ಭಾರತವನ್ನು ಭಾರತದ ಉಳಿದ ಭಾಗಗಳೊಂದಿಗೆ ಸಂಪರ್ಕಿಸುತ್ತದೆ. ಕಿರಿದಾದ ಕಾರಿಡಾರ್ ಪಶ್ಚಿಮ ಬಂಗಾಳದಲ್ಲಿ ಸುಮಾರು 22 ಕಿಲೋಮೀಟರ್ ವಿಸ್ತೀರ್ಣದಲ್ಲಿದೆ. ಇದು ಭಾರತದ ಈಶಾನ್ಯ ರಾಜ್ಯಗಳನ್ನು ಭಾರತದ ಉಳಿದ ಭಾಗಗಳೊಂದಿಗೆ ಸಂಪರ್ಕಿಸುತ್ತದೆ, ನೇಪಾಳ ಮತ್ತು ಬಾಂಗ್ಲಾದೇಶವು ಕಾರಿಡಾರ್ನ ಎರಡೂ ಬದಿಗಳಲ್ಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.