ಇದೇ ಜನವರಿ 10 ರಂದು 102 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ ಆರೆಸ್ಸೆಸ್ ಹಿರಿಯ ಪ್ರಚಾರಕ ಶ್ರೀ ಧನಪ್ರಕಾಶ ತ್ಯಾಗಿಜೀ ರಾಜಸ್ಥಾನದ ಜಯಪುರದಲ್ಲಿನ ಸಂಘ ಕಾರ್ಯಾಲಯ ಭಾರತ ಭವನದಲ್ಲಿ ನಿನ್ನೆ ಸ್ವರ್ಗಸ್ಥರಾಗಿದ್ದಾರೆ.
ಜೀವನ ಪರಿಚಯ:
ಶ್ರೀ ಧನಪ್ರಕಾಶ ತ್ಯಾಗಿ ಜೀ ಅವರು ಜನವರಿ 10, 1918 ರಂದು ಉತ್ತರ ಪ್ರದೇಶದ ಮುಜಾಫರ್ ನಗರ ಜಿಲ್ಲೆಯ ಮಹೇಪುರ ಗ್ರಾಮದಲ್ಲಿ ಜನಿಸಿದರು. ಅವರ ತಂದೆ ಪಂ.ಸಾಲಿಗ್ರಾಮ ತ್ಯಾಗಿ ಓರ್ವ ಧರ್ಮನಿಷ್ಠ ವ್ಯಕ್ತಿಯಾಗಿದ್ದರು. ಸಹಜವಾಗಿ ಅವರ ಪ್ರಭಾವ ಧನಪ್ರಕಾಶ ಅವರ ಮೇಲೆ ಇದ್ದೇ ಇತ್ತು.
ಶ್ರೀ ಧನಪ್ರಕಾಶಜೀ ಆ ಸಮಯದಲ್ಲಿ ವಿಜ್ಞಾನ ವಿಭಾಗದಿಂದ ಹೈಯರ್ ಸೆಕೆಂಡರಿಗೆ ಶಿಕ್ಷಣ ಪಡೆದು, ದೆಹಲಿಯಲ್ಲಿ ಕೇಂದ್ರ ಸರ್ಕಾರದಲ್ಲಿ ಗುಮಾಸ್ತರಾಗಿ ದೆಹಲಿಯಲ್ಲಿ ಕೆಲಸ ಮಾಡಿದರು.
ಅದೇ ಸಮಯದಲ್ಲಿ ಸಂಘದ ಸಂಪರ್ಕಕ್ಕೆ ಬಂದು, ಅವರು ಸಂಘದ ಸ್ವಯಂಸೇವಕರಾದರು. ಅವರು 1942 ರಲ್ಲಿ ಸಂಘದ ಪ್ರಾಥಮಿಕ ಶಿಕ್ಷಾ ವರ್ಗ ದೆಹಲಿಯಿಂದ, 1943 ರಲ್ಲಿ ಪ್ರಥಮ ವರ್ಷದ ಸಂಘ ಶಿಕ್ಷಾ ವರ್ಗ, 1944 ರಲ್ಲಿ ಎರಡನೇ ವರ್ಷದ ಸಂಘ ಶಿಕ್ಷಾ ವರ್ಗ ಹಾಗೂ 1947 ರಲ್ಲಿ – ತೃತೀಯ ವರ್ಷದ ಸಂಘ ಶಿಕ್ಷಾ ವರ್ಗ ಮುಗಿಸಿದರು.
ಕೇಂದ್ರ ಸರ್ಕಾರದಲ್ಲಿ ಗುಮಾಸ್ತನಾಗಿ ಕೆಲಸ ಮಾಡಿದ ನಂತರವೂ ಮಾತೃ ಭಾರತದ ಸೇವೆಯಲ್ಲಿ ಮುಂದುವರಿಯಬೇಕೆಂಬುದು ಅವರ ಆಸೆ. ಈ ಆಸೆಯಿಂದಾಗಿ ಅವರು ಸರಕಾರಿ ನೌಕರಿಯನ್ನು ತೊರೆದು ಪ್ರಚಾರಕರಾದರು. ತಮ್ಮ ಇಡೀ ಜೀವನವನ್ನು ತಾಯಿ ಭಾರತಿಯ ಪಾದಗಳಿಗೆ ಅರ್ಪಿಸಿದರು.
ಧನಪ್ರಕಾಶಜೀ ತ್ಯಾಗಿ 1943 ರಲ್ಲಿ ದೆಹಲಿಯಲ್ಲಿ ಸಂಘದ ವಿಸ್ತಾರಕರಾಗಿ ತಮ್ಮ ಪ್ರಚಾರಕ ಜೀವನ ಪ್ರಾರಂಭಿಸಿದರು. ನಂತರ ಸಹಾರನಪುರ್ ಹಾಗೂ ಅಲಿಘಡನಲ್ಲಿ ನಗರ ಪ್ರಚಾರಕರಾಗಿ ಕಾರ್ಯ. ನಂತರ ಅವರು ಅಂಬಾಲಾ, ಹಿಸಾರ್, ಗುರುಗ್ರಾಮ್, ಶಿಮ್ಲಾ ಮತ್ತು ಹೋಶಿಯಾರ್ಪುರದ ಜಿಲ್ಲಾ ಪ್ರಚಾರಕರಾಗಿ ಸೇವೆ ಸಲ್ಲಿಸಿದರು.
1948ರ ಸಂಘದ ಮೊದಲ ಪ್ರತಿಬಂಧದ ಸಮಯದಲ್ಲಿ ಅವರು ಜೈಲುವಾಸ ಅನುಭವಿಸಿದ್ದರು. 1962 ರಿಂದ 1965 ರವರೆಗೆ ಜಮ್ಮು ವಿಭಾಗ ಪ್ರಚಾರಕರಾಗಿ ಕಾರ್ಯ. ಇದರ ನಂತರ, ಕಾರ್ಯವಿಸ್ತಾರಕ್ಕಾಗಿ ಅವರ ಕೇಂದ್ರ ರಾಜಸ್ಥಾನದ ಜೈಪುರಕ್ಕೆ ಬದಲಾಯಿತು. ಅಲ್ಲಿ 1965 ರಿಂದ 1971 ರವರೆಗೆ ಜೈಪುರ ವಿಭಾಗ ಪ್ರಚಾರಕ್ ಆಗಿ ಕಾರ್ಯನಿರ್ವಹಿಸಿದರು.
1971 ರಿಂದ 1986 ರವರೆಗೆ ಅವರು ಭಾರತೀಯ ಮಜ್ದೂರ ಸಂಘದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. 2000 ರಿಂದ 2005 ರವರೆಗೆ ಸೇವಾ ಭಾರತಿಯ ಜಾಗರಣ ಪತ್ರಿಕೆಯ ಪ್ರಕಟಣೆಯ ಉಸ್ತುವಾರಿ ವಹಿಸಿಕೊಂಡರು.
ಜೀವನದ ಕೊನೆಯ ಕ್ಷಣದವರೆಗೂ ತಮ್ಮ ಕೆಲಸಗಳನ್ನು ಸ್ವತಃ ನಿರ್ವಹಿಸುತ್ತ ಹೆಚ್ಚಿನ ಸಮಯವನ್ನು ಅಧ್ಯಯನ ಹಾಗೂ ಬರವಣಿಗೆಯಲ್ಲಿ ಕಳೆಯುತ್ತಿದ್ದರು.
ಇಂದಿನ ತಾಂತ್ರಿಕ ಯುಗದಲ್ಲೂ ವೈಯಕ್ತಿಕ ಸಂಪರ್ಕ ಹಾಗೂ ಮಾತುಕತೆ ಬಗ್ಗೆ ಸ್ವಯಂಸೇವಕರಲ್ಲಿ ಸದಾ ಅಗ್ರಹ ಮಾಡುತ್ತಿದ್ದ ಶ್ರೀ ಧನಪ್ರಕಾಶಜೀ, ಒಂದು ರೀತಿಯಲ್ಲಿ ಸಂಘ ಕಾರ್ಯದ ವಿಶ್ವಕೋಶವೇ ಆಗಿದ್ದರು ಎಂದರೆ ತಪ್ಪಾಗಲಿಕ್ಕಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.