ನವದೆಹಲಿ: ಯಾವುದೇ ದೇಶವನ್ನು ನಾಶಪಡಿಸಬಲ್ಲಂತಹ ಸಮುದಾಯದಿಂದ ನಾವು ಬಂದಿದ್ದೇವೆ ಎಂಬುದಾಗಿ ಅಲಿಘಢ ಮುಸ್ಲಿಂ ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ನಾಯಕ ಫೈಝಲ್ ಹಸನ್ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾನೆ.
ವಿಶ್ವವಿದ್ಯಾಲಯದ ಹೊರಗಡೆ ನಡೆಸಲಾದ ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿ ಭಾಗಿಯಾದ ಆತ, “ಬಯಸಿದರೆ ನಾವು ದೇಶವನ್ನೇ ಸರ್ವ ನಾಶ ಮಾಡಬಲ್ಲೆವು, ಯಾವುದೇ ದೇಶವನ್ನು ನಾಶಪಡಿಸಬಲ್ಲಂತಹ ಸಮುದಾಯಕ್ಕೆ ನಾವು ಸೇರಿದ್ದೇವೆ” ಎಂದಿದ್ದಾನೆ.
ಅಮಿತ್ ಶಾ ವಿರುದ್ಧ ಮಾತನಾಡಿರುವ ಆತ, “ಸಿಎಎ-ಎನ್ ಆರ್ ಸಿ ನಮಗೆ ಮಾತ್ರವಲ್ಲ ನಿಮಗೆ ಕೂಡ. ಇವತ್ತು ನೀವು ಅಧಿಕಾರದಲ್ಲಿದ್ದೀರಿ, ನಾಳೆ ನಾವು ಅಧಿಕಾರದಲ್ಲಿರುತ್ತೇವೆ. ನಾವು ಅಧಿಕಾರಕ್ಕೆ ಬಂದ ಕೂಡಲೇ ಮೊದಲು ಮಾಡುವ ಕಾರ್ಯ ನಿಮ್ಮ ಬಳಿ ದಾಖಲೆ ಕೇಳುವುದು. ಪ್ರತಿಭಟನೆ ಸ್ಥಳಕ್ಕೆ ಬಂದು ಮಕ್ಕಳೊಂದಿಗೆ ಮಾತುಕತೆ ನಡೆಸಿ, ಅವರ ಮಾತನ್ನು ಕೇಳಿ” ಎಂದಿದ್ದಾರೆ.
ಅಲ್ಲದೇ, “ನೀವು ತಾಳ್ಮೆಯ ಮಿತಿಯನ್ನು ನೋಡಲು ಬಯಸಿದರೆ, 1947 ರ ನಂತರ 2020 ರವರೆಗೆ ಭಾರತೀಯ ಮುಸ್ಲಿಮರ ತಾಳ್ಮೆಯ ಮಿತಿಯನ್ನು ನೋಡಿ. ನಾವು ಎಂದಿಗೂ ಭಾರತವನ್ನು ಒಡೆಯಲು ಪ್ರಯತ್ನಿಸಲಿಲ್ಲ. ಆದರೆ ಒಂದು ವೇಳೆ ನಾವು ನಾಶಮಾಡಲು ನಿರ್ಧರಿಸಿದರೆ, ನಾವು ಯಾವುದನ್ನೂ ಬಿಡುವುದಿಲ್ಲ. ಯಾವುದೇ ದೇಶವನ್ನು ನಾಶಪಡಿಸಬಲ್ಲಂತಹ ಸಮುದಾಯದಿಂದ ನಾವು ಬಂದಿದ್ದೇವೆ” ಎಂದಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.