ನವದೆಹಲಿ: ತನ್ನನ್ನು ಕೋಡಂಗಿ ಎಂದು ಕರೆದಿರುವ ನಟ ನಾಸಿರುದ್ದೀನ್ ಶಾ ವಿರುದ್ಧ ಹಿರಿಯ ನಟ ಅನುಪಮ್ ಖೇರ್ ತೀವ್ರ ವಾಗ್ದಾಳಿಯನ್ನು ನಡೆಸಿದ್ದಾರೆ. ಜೀವನದಲ್ಲಿ ಇಷ್ಟು ಸಾಧನೆ ಮಾಡಿದರೂ ಅವರು “ನಿರಾಶೆಗೊಂಡಿದ್ದಾರೆ” ಎಂದು ಹೇಳಿದ್ದಾರೆ.
ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಷಾ, ಖೇರ್ ಅವರನ್ನು “ಸೈಕೋಫಾಂಟ್ ಮತ್ತು ಕೋಡಂಗಿ” ಎಂದು ಜರೆದಿದ್ದಾರೆ, ಅಲ್ಲದೇ, ಅವರನ್ನು ಗಂಭೀರವಾಗಿ ಪರಿಗಣಿಸಬಾರದು ಎಂದಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಚಲನಚಿತ್ರೋದ್ಯಮವು ಸರ್ಕಾರಕ್ಕೆ ನೀಡುವ ಬೆಂಬಲದ ಬಗೆಗಿನ ಪ್ರತಿಭಟನೆಗಳ ಬಗ್ಗೆ ಚರ್ಚಿಸುವಾಗ ಅವರು ಈ ಹೇಳಿಕೆ ನೀಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆಯಾಗಿ ಖೇರ್ ಅವರು, “ಜನಾಬ್ ನಸೀರುದ್ದೀನ್ ಷಾ ಅವರಿಗೆ ನನ್ನ ಆಳವಾದ ಪ್ರೀತಿ ತುಂಬಿದ ಸಂದೇಶ. ಅವರು ವಯಸ್ಸಿನಲ್ಲಿ ಮತ್ತು ಅನುಭವದಲ್ಲಿ ನನಗೆ ಹಿರಿಯರು” ಎಂಬ ಶೀರ್ಷಿಕೆಯೊಂದಿಗೆ ವೀಡಿಯೊ ಸಂದೇಶವನ್ನು ಟ್ವಿಟರಿನಲ್ಲಿ ಹಂಚಿಕೊಂಡಿದ್ದಾರೆ. ‘ನಾನು ಯಾವಾಗಲೂ ಅವರ ಕಲೆಯನ್ನು ಗೌರವಿಸುತ್ತಿದ್ದೇನೆ, ಆದರೆ ಕೆಲವು ಹೇಳಿಕೆಗಳಿಗೆ ಪ್ರತಿಕ್ರಿಯಿಸುವುದು ಬಹಳ ಅವಶ್ಯಕ. ಇದು ನನ್ನ ಪ್ರತಿಕ್ರಿಯೆ ಎನ್ನುತ್ತಾ ಷಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಿಡಿಯೋದಲ್ಲಿ, “ನೀವು ನನ್ನ ಬಗ್ಗೆ ನೀಡಿದ ಸಂದರ್ಶನವನ್ನು ನಾನು ನೋಡಿದೆ. ಧನ್ಯವಾದಗಳು. ನಾನು ನಿಮ್ಮ ಟೀಕೆಗಳನ್ನು ಎಂದಿಗೂ ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ನಾನು ನಿಮಗೆ ತಿಳಿಸಲು ಬಯಸುತ್ತೇನೆ. ನಾನು ನಿಮ್ಮ ಬಗ್ಗೆ ಎಂದಿಗೂ ಕೆಟ್ಟದಾಗಿ ಮಾತನಾಡಿಲ್ಲ, ಆದರೆ ಈಗ ನಾನು ಹೇಳುತ್ತೇನೆ – ನಿಮ್ಮ ಸಂಪೂರ್ಣ ಜೀವನವನ್ನು (ಯಶಸ್ಸನ್ನು ಸಾಧಿಸಿದ ನಂತರವೂ) ನೀವು ಹತಾಶೆಯಿಂದ ಕಳೆದಿದ್ದೀರಿ. ನೀವು ದಿಲೀಪ್ ಕುಮಾರ್, ಅಮಿತಾಬ್ ಬಚ್ಚನ್, ಶಾರುಖ್ ಖಾನ್, ರಾಜೇಶ್ ಖನ್ನಾ, ವಿರಾಟ್ ಕೊಹ್ಲಿಯನ್ನು ಟೀಕಿಸಲು ಸಾಧ್ಯವಾದರೆ… ನನಗೆ ಖಾತ್ರಿಯಿದೆ, ನಾನು ಉತ್ತಮ ಕಂಪನಿಯಲ್ಲಿದ್ದೇನೆ. ನನ್ನ ರಕ್ತದಲ್ಲಿ ಹಿಂದೂಸ್ಥಾನವಿದೆ” ಎಂದಿದ್ದಾರೆ.
जनाब नसीरुदिन शाह साब के लिए मेरा प्यार भरा पैग़ाम!!! वो मुझसे बड़े है। उम्र में भी और तजुर्बे में भी। मै हमेशा से उनकी कला की इज़्ज़त करता आया हूँ और करता रहूँगा। पर कभी कभी कुछ बातों का दो टूक जवाब देना बहुत ज़रूरी होता। ये है मेरा जवाब। 🙏 pic.twitter.com/M4vb8RjGjj
— Anupam Kher (@AnupamPKher) January 22, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.