ನವದೆಹಲಿ: ರಾಷ್ಟ್ರದ ಸೇವೆ ಮಾಡುವ ಸಂದರ್ಭದಲ್ಲಿ ವೀರರಂತೆ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಭಾರತದ ಮಿಲಿಟರಿ ಪ್ರಾಣಿಗಳಿಗೂ ಶೀಘ್ರದಲ್ಲೇ ಯುದ್ಧ ಸ್ಮಾರಕ ನಿರ್ಮಾಣವಾಗಲಿದೆ. ಮೀರತ್ನಲ್ಲಿ ಈ ಯುದ್ಧ ಸ್ಮಾರಕ ಸ್ಥಾಪನೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಸ್ಮಾರಕವು ಮುಖ್ಯವಾಗಿ ಮಿಲಿಟರಿ ಶ್ವಾನಗಳನ್ನು ಗೌರವಿಸಲಿದೆ, ಅದರ ಜೊತೆಗೆ ಕತ್ತೆ ಮತ್ತು ಕುದುರೆಗಳನ್ನು ಸಹ ಗೌರವಿಸಲಿದೆ. ಕರ್ತವ್ಯದ ಮೇಲಿನ ಭಕ್ತಿ ಮತ್ತು ಮಿಲಿಟರಿ ಸೇವೆಗೆ ಅತ್ಯುತ್ತಮ ಕೊಡುಗೆ ನೀಡಿ ಯುದ್ಧಭೂಮಿಯಲ್ಲಿ ವೀರರಂತೆ ಹುತಾತ್ಮರಾದ ಪ್ರಾಣಿಗಳನ್ನು ಕೂಡ ಗೌರವಿಸುವುದು, ಸ್ಮರಿಸುವುದು ಮತ್ತು ಅವುಗಳ ಕೊಡುಗೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಈ ಸ್ಮಾರಕದ ಉದ್ದೇಶ.
ಮೀರತ್ನ ಎಲೈಟ್ ರಿಮೌಂಟ್ ಮತ್ತು ಪಶುವೈದ್ಯಕೀಯ ದಳ (ಆರ್ವಿಸಿ) ಕೇಂದ್ರ ಮತ್ತು ಕಾಲೇಜಿನಲ್ಲಿ ಸ್ಮಾರಕವನ್ನು ಸ್ಥಾಪನೆ ಮಾಡಲಾಗುತ್ತದೆ. ಶ್ವಾನಗಳ, ಕತ್ತೆಗಳ ಮತ್ತು ಕುದುರೆಗಳ ಸಂತಾನೋತ್ಪತ್ತಿ, ಪಾಲನೆ ಮತ್ತು ತರಬೇತಿಗಾಗಿ ಆರ್ವಿಸಿಯನ್ನು ಭಾರತೀಯ ಸೇನೆಯು ಬಳಸುತ್ತದೆ.
ರಕ್ಷಣಾ ಸಚಿವಾಲಯವು ಶೀಘ್ರದಲ್ಲೇ ಆರ್ವಿಸಿ ಪ್ರಾಣಿಗಳ ಮತ್ತು ಮನುಷ್ಯರ ಸ್ಮರಣಾರ್ಥ ಯುದ್ಧ ಸ್ಮಾರಕವನ್ನು ನಿರ್ಮಿಸುವ ನಿರೀಕ್ಷೆಯಿದೆ. ಈ ಸ್ಮಾರಕವನ್ನು ನವದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದ ಮಾದರಿಯಲ್ಲಿ ರೂಪಿಸುವ ನಿರೀಕ್ಷೆಯಿದೆ.
ಇದು 300 ಶ್ವಾನಗಳು, 350 ಹ್ಯಾಂಡ್ಲರ್ಗಳು ಮತ್ತು ಕೆಲವು ಕುದುರೆಗಳು ಮತ್ತು ಕತ್ತೆಗಳ ಹೆಸರನ್ನು ಒಳಗೊಂಡಿರುತ್ತದೆ. ಎಲ್ಲಾ ಹೆಸರುಗಳನ್ನು ಗ್ರಾನೈಟ್ ಗೋಡೆಗಳ ಮೇಲೆ ಕೆತ್ತಲಾಗುವುದು.
ಉತ್ತರ ಕಾಶ್ಮೀರದಲ್ಲಿ 2016 ರ ಉಗ್ರ ವಿರೋಧಿ ಕಾರ್ಯಾಚರಣೆಯ ಸಂದರ್ಭದಲ್ಲಿ ಹುತಾತ್ಮವಾದ ಸೇವಾ ಶ್ವಾನ ಮಾನ್ಸಿಯನ್ನು ಸ್ಮಾರಕದ ಗೋಡೆಗಳಲ್ಲಿ ಪ್ರಮುಖವಾಗಿ ಉಲ್ಲೇಖಿಸಲಾಗುತ್ತದೆ ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.