ನವದೆಹಲಿ: ಪೆರಿಯಾರ್ ಅವರ 1971ರ ಹಿಂದೂ ವಿರೋಧಿ ಸಮಾವೇಶದ ಬಗ್ಗೆ ಸೂಪರ್ ಸ್ಟಾರ್ ರಜನೀಕಾಂತ್ ಇತ್ತೀಚಿಗೆ ನೀಡಿದ ಹೇಳಿಕೆ ಭಾರೀ ಸುದ್ದಿಯನ್ನು ಮಾಡಿತ್ತು. ಪೆರಿಯಾರ್ ಎಂದು ಕರೆಯಲ್ಪಡುವ ಇ.ವಿ.ರಾಮಸ್ವಾಮಿ ಬಗ್ಗೆ ಈಗ ದೇಶದಲ್ಲಿ ಚರ್ಚೆ ಆರಂಭಗೊಂಡಿದೆ. 1971 ರಲ್ಲಿ ಶ್ರೀರಾಮ ಮತ್ತು ಸೀತಾ ದೇವಿಯ ಚಿತ್ರವನ್ನು ನಗ್ನವಾಗಿ ಬಿಡಿಸಿ ಅದಕ್ಕೆ ಚಪ್ಪಲಿ ಹಾರ ಹಾಕಿದ ಬಗ್ಗೆ ರಜನೀಕಾಂತ್ ಅವರು ಮಾತನಾಡಿದ್ದು ಪೆರಿಯಾರ್ ಅಭಿಮಾನಿಗಳನ್ನು ಕಂಗೆಡಿಸಿದೆ.
ರಜನೀಕಾಂತ್ ಅವರು ಕ್ಷಮೆಯಾಚನೆ ಮಾಡಬೇಕು ಎಂದು ಪೆರಿಯಾರ್ ಅಭಿಮಾನಿಗಳು ಬೊಬ್ಬಿಡುತ್ತಿದ್ದಾರೆ, ಆದರೆ ರಜನೀಕಾಂತ್ ಖಂಡಾತುಂಡವಾಗಿ ಕ್ಷಮೆಯಾಚಿಸುವುದಿಲ್ಲ ಎಂದು ಹೇಳಿದ್ದಾರೆ. ಜನಪ್ರಿಯ ಪತ್ರಿಕೆ ತುಘಲಕ್ ವರದಿ ಮಾಡಿದ ಸಂಗತಿಗಳನ್ನು ತಾನು ಉಲ್ಲೇಖಿಸಿದ್ದಾಗಿ ಅವರು ಪುನರುಚ್ಚರಿಸಿದ್ದಾರೆ.
ಮಾಧ್ಯಮವೊಂದರ ಚರ್ಚೆಯ ಸಂದರ್ಭದಲ್ಲಿ ರಜನಿಕಾಂತ್ ಅವರನ್ನು ಸಮರ್ಥಿಸಿಕೊಂಡ ಲೇಖಕ ಮತ್ತು ಅಂಕಣಕಾರ ಆನಂದ್ ರಂಗನಾಥನ್ ಅವರು, ಪೆರಿಯಾರ್ ಮತ್ತು ಅವರ ಅನುಯಾಯಿಗಳು ಹಿಂದೂ ಧರ್ಮ ಮತ್ತು ಹಿಂದೂ ದೇವರುಗಳನ್ನು ಹೇಗೆ ಅಪವಿತ್ರಗೊಳಿಸಿದರು ಎಂಬುದನ್ನು ಎಳೆ ಎಳೆಯಾಗಿ ವಿವರಿಸಿದ್ದಾರೆ.
ರಜನಿಕಾಂತ್ ಅವರು ಕ್ಷಮೆಯಾಚಿಸಸುವಂತದ್ದು ಏನೂ ಇಲ್ಲ ಎಂದು ರಂಗನಾಥನ್ ವಾದಿಸಿದ್ದಾರೆ. 1971 ರಲ್ಲಿ ಪೆರಿಯಾರ್ ಆಯೋಜಿಸಿದ್ದ “ಮೂಢ ನಂಬಿಕೆ ನಿರ್ಮೂಲನೆ” ಸಮಾವೇಶದ ಕುರಿತು ಮಾತನಾಡಿದ ಅವರು, ರೆವ್ ಎಸ್ ರಾಬರ್ಟ್ಸನ್ ಅವರು ಬರೆದ ‘ಪೆರಿಯಾರ್ಸ್ ಕ್ರಿಟಿಕ್ ಆಫ್ ಪ್ರೀಸ್ಟ್ಲಿ ಹಿಂದೂಯಿಸಂ ಆ್ಯಂಡ್ ಇಟ್ಸ್ ಇಂಪ್ಲಿಕೇಶ್ ಫಾರ್ ಸೋಶಲ್ ರಿಫಾರ್ಮ್ಸ್’ ನಲ್ಲಿನ ಅಂಶಗಳನ್ನು ಅವರು ಉಲ್ಲೇಖಿಸಿದ್ದಾರೆ.
ಸೇಲಂನಲ್ಲಿ ನಡೆದ ಈ ಸಮ್ಮೇಳನದಲ್ಲಿ, ಶ್ರೀರಾಮನ ಪ್ರತಿಮೆಗೆ ಸಾರ್ವಜನಿಕವಾಗಿ ಚಪ್ಪಲಿಯಲ್ಲಿ ಹೊಡೆಯಲಾಯಿತು, ಪ್ರತಿಮೆಗಳನ್ನು ಸುಡಲಾಯಿತು ಮತ್ತು ಹಿಂದೂ ದೇವತೆಗಳನ್ನು ಅಶ್ಲೀಲವಾಗಿ ಚಿತ್ರಿಸಲಾಯಿತು ಮತ್ತು ಬ್ರಾಹ್ಮಣರ ವಿರುದ್ಧ ಅಪಪ್ರಚಾರ ನಡೆಸಲಾಯಿತು ಎಂದಿದ್ದಾರೆ.
“ಪೆರಿಯಾರ್ ಒಬ್ಬ ಐಕಾನೋಕ್ಲಾಸ್ಟ್ (ಮೂರ್ತಿ ಭಂಜಕ) ಆಗಿದ್ದರು, ಕಠೋರತೆ, ಹಗೆತನ, ದ್ವೇಷದಿಂದಾಗಿ ಉನ್ನತಿ ಕಂಡವರು. ಹಿಂದೂ ಧರ್ಮವನ್ನು ಹೊರತುಪಡಿಸಿ ಬೇರೆ ಧರ್ಮಗಳ ಮೂಢ ನಂಬಿಕೆಗಳನ್ನು ಟೀಕಿಸಲು ಅಂಬೇಡ್ಕರ್ ಮಾಡಿದಂತೆ ಪೆರಿಯಾರ್ ಯಾವ ಧೈರ್ಯವನ್ನೂ ಮಾಡಿಲ್ಲ” ಎಂದು ಹೇಳಿದ್ದಾರೆ.
“ಪೆರಿಯಾರ್ ಅಬ್ರಹಾಮಿಕ್ ಧರ್ಮಗಳನ್ನು ಹೊಗಳುತ್ತಿದ್ದರು, ಹಿಂದೂಗಳು ಇಸ್ಲಾಂಗೆ ಮತಾಂತರಗೊಳ್ಳಬೇಕೆಂದು ಬಯಸಿದ್ದರು” ಎಂದು ರಂಗನಾಥನ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.