ಬೆಳಗಾವಿ : ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನಲ್ಲಿ ರೈಲು ಬೋಗಿಗಳು ಮತ್ತು ವ್ಯಾಗನ್ಗಳಿಗೆ ಬಿಡಿಭಾಗಗಳನ್ನು ತಯಾರಿಸಲು ವಿಶೇಷ ಕೇಂದ್ರವನ್ನು ಸ್ಥಾಪಿಸಲು ರೈಲ್ವೆ ಪ್ರಸ್ತಾಪಿಸಿದೆ. ರೈಲ್ವೆ ಮಂಡಳಿ ಇತ್ತೀಚೆಗೆ ಈ ಪ್ರಸ್ತಾಪವನ್ನು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಸಲ್ಲಿಸಿದೆ. ಇದಕ್ಕೆ ಅನುಮೋದನೆ ಸಿಕ್ಕರೆ, ರಾಯ್ ಬರೇಲಿಯ ನಂತರ ಕಿತ್ತೂರು ಈ ಸೌಲಭ್ಯವನ್ನು ಹೊಂದಿರುವ ಎರಡನೇ ಸ್ಥಳವಾಗಲಿದೆ.
ರೈಲ್ವೆ ಮಂಡಳಿ ಸದಸ್ಯ ರಾಜೇಶ್ ಅಗ್ರವಾಲ್ ಅವರ ಪ್ರಕಾರ, “ಕೋಚ್ಗಳು, ವ್ಯಾಗನ್ಗಳು ಮತ್ತು ರೈಲುಮಾರ್ಗಗಳಿಗೆ ಹೆಚ್ಚುತ್ತಿರುವ ನಿರಂತರ ಬೇಡಿಕೆಯು ಅಂತಹ ಘಟಕವನ್ನು ಹೊಂದುವುದನ್ನು ಕಡ್ಡಾಯವಾಗಿಸಿದೆ. ಉತ್ಪಾದಕರೇ ಭೂಮಿಗೆ ಹಣವನ್ನು ಪಾವತಿಸಬೇಕಾಗಿರುವುದರಿಂದ ಮತ್ತು ಘಟಕವನ್ನು ಸ್ಥಾಪನೆ ಮಾಡಬೇಕಾಗಿರುವುದರಿಂದ ರೈಲ್ವೆ ಅಥವಾ ರಾಜ್ಯ ಸರ್ಕಾರದ ಮೇಲೆ ಯಾವುದೇ ವೆಚ್ಚ ಕೂಡ ಬೀಳುವುದಿಲ್ಲ” ಎಂದಿದ್ದಾರೆ.
ಈ ಪ್ರಸ್ತಾಪದ ಬಗ್ಗೆ ಚಿಂತನೆಯನ್ನು ನಡೆಸುತ್ತಿರುವುದಾಗಿ ರಾಜ್ಯ ಸರ್ಕಾರದ ಮೂಲಗಳು ದೃಢಪಡಿಸಿವೆ.
ರೈಲ್ವೆಗೆ ಪೂರಕ ಬಿಡಿಭಾಗಗಳ ಉತ್ಪಾದನಾ ಸೌಲಭ್ಯವನ್ನು ಪ್ರಾರಂಭಿಸಲು ರೈಲ್ವೆ ಇಲಾಖೆಗೆ ಸುಮಾರು 150 ಎಕರೆ ಭೂಮಿ ಬೇಕು ಎಂದು ಅಗರ್ವಾಲ್ ಹೇಳಿದ್ದಾರೆ. “ಕಿತ್ತೂರಿನಲ್ಲಿ ಸಾಕಷ್ಟು ವಿಸ್ತಾರವಾದ ಭೂಮಿ ಇರುವುದರಿಂದ, ಭವಿಷ್ಯದಲ್ಲಿ ಈ ಸೌಲಭ್ಯವನ್ನು ವಿಸ್ತರಿಸಲೂ ಅವಕಾಶ ಸಿಗುತ್ತದೆ. ಗೋವಾಕ್ಕೆ ಇದು ಹತ್ತಿರದಲ್ಲಿರುವ ಕಾರಣ ಸಮುದ್ರ ಮಾರ್ಗದ ಮೂಲಕ ಇತರ ದೇಶಗಳಿಗೆ ರಫ್ತು ಮಾಡಲು ಕೂಡ ಅನುಕೂಲವಾಗಲಿದೆ. ಕೆಲವು ರಿಯಾಯಿತಿಗಳು ಮತ್ತು ಪ್ರೋತ್ಸಾಹಗಳನ್ನು ನೀಡುವ ಮೂಲಕ ಉದ್ಯಮವನ್ನು ಆಕರ್ಷಕವಾಗಿ ಮಾಡುವುದು ರಾಜ್ಯಕ್ಕೆ ಬಿಟ್ಟದ್ದು” ಎಂದಿದ್ದಾರೆ.
“ಕೋಚುಗಳ ಮತ್ತು ವ್ಯಾಗನ್ಗಳ ಪ್ರಮುಖ ಬಿಡಿ ಭಾಗಗಳಾದ ಶೆಲ್ಸ್ (ಕೋಚ್ನ ಹೊರ ಪದರ), ಬೋಗಿಗಳು, ಬ್ರೇಕ್ ವ್ಯವಸ್ಥೆಗಳು ಮತ್ತು ಒಳಾಂಗಣಗಳನ್ನು ಈ ಕೇಂದ್ರದಲ್ಲಿ ತಯಾರಿಸಲಾಗುತ್ತದೆ. ನಾವು ಅದನ್ನು ಪ್ರತ್ಯೇಕ ರಫ್ತು ಸಂಸ್ಕರಣಾ ವಲಯವನ್ನಾಗಿ ಮಾಡಲು ರಾಜ್ಯವನ್ನು ಕೇಳಿದ್ದೇವೆ. ಬಿಡಿಭಾಗಗಳ ತಯಾರಕರನ್ನು ಒಂದೇ ಸೂರಿನಡಿ ಕ್ರೋಢೀಕರಿಸಬಹುದು. ಎಲ್ಲಾ ಅನುಮತಿಗಳಿಗೆ ಸಿಂಗಲ್ ವಿಂಡೋ ಅನ್ನು ರಾಜ್ಯ ಸರ್ಕಾರ ಸ್ಥಾಪಿಸಬೇಕು” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.