ನವದೆಹಲಿ: ಜಮ್ಮು-ಕಾಶ್ಮೀರದ ಮಕ್ಕಳು ರಾಷ್ಟ್ರವಾದಿಗಳೇ ಆಗಿದ್ದಾರೆ, ಆದರೆ ಕೆಲವೊಮ್ಮೆ ಅವರನ್ನು ದಾರಿ ತಪ್ಪಿಸಲಾಗುತ್ತಿದೆ. ಈ ರೀತಿಯಾಗಿ ದಾರಿ ತಪ್ಪಿಸುವವರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಎನ್ಸಿಸಿ ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ಅವರು, “ಜಮ್ಮು-ಕಾಶ್ಮೀರದ ಮಕ್ಕಳು ಕೂಡ ರಾಷ್ಟ್ರವಾದಿಗಳೇ. ಅವರನ್ನು ಬೇರೆಯಾಗಿ ನೋಡಬಾರದು. ಕೆಲವೊಮ್ಮೆ ಜನರು ಅವರನ್ನು ಸರಿಯಾದ ಮಾರ್ಗದಲ್ಲಿ ಪ್ರೋತ್ಸಾಹಿಸುವುದಿಲ್ಲ. ಬದಲಾಗಿ ತಪ್ಪು ಮಾರ್ಗಕ್ಕಿಳಿಯಲು ಪ್ರೋತ್ಸಾಹಿಸುತ್ತಾರೆ. ತಪ್ಪು ಮಾಡಿರುವವರನ್ನು ಶಿಕ್ಷಿಸಬೇಕೇ ಹೊರತು ಮಕ್ಕಳನ್ನು ಅಲ್ಲ” ಎಂದಿದ್ದಾರೆ.
ಜಮ್ಮು-ಕಾಶ್ಮೀರದ ಯುವಕರಿಗಾಗಿ ಮೂಲಭೂತವಾದೀಕರಣ ನಿರ್ಮೂಲನೆ ಕಾರ್ಯಕ್ರಮವನ್ನು ನಡೆಸಬೇಕು ಎಂಬುದಾಗಿ ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರು ಒತ್ತಿ ಹೇಳಿದ ಬಳಿಕ ರಾಜನಾಥ್ ಸಿಂಗ್ ಅವರು ಈ ಹೇಳಿಕೆಯನ್ನು ನೀಡಿದ್ದಾರೆ.
ಭಾರತ-ಚೀನಾ ಗಡಿ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ) ತೊಂದರೆ ನೀಡುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಂಗ್, ಜನರು ಚಿಂತೆ ಮಾಡಬಾರದು ಮತ್ತು ಸಶಸ್ತ್ರ ಪಡೆಗಳನ್ನು ನಂಬಬೇಕು ಎಂದರು. “ಚಿಂತಿಸಬೇಡಿ. ನಮ್ಮ ಗಡಿಗಳಿಗೆ ಸಂಬಂಧಪಟ್ಟಂತೆ, ನಮ್ಮ ದೇಶದ ಸಶಸ್ತ್ರ ಪಡೆಗಳ ಮೇಲೆ ನಂಬಿಕೆಯನ್ನು ಇರಿಸಿ. ಭಾರತದತ್ತ ದೃಷ್ಟಿ ಹಾಯಿಸಲು ಯಾವುದೇ ದೇಶಕ್ಕೆ ಧೈರ್ಯವಿಲ್ಲ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.