ಬಿಜಾಪುರ್: ಯೋಧರು ದೇಶದ ಗಡಿ ಕಾಯುವ, ಉಗ್ರರ ವಿರುದ್ಧ ಹೋರಾಡುವ ಕಾರ್ಯವನ್ನು ಮಾತ್ರ ಮಾಡುವುದಿಲ್ಲ, ಸಂಕಷ್ಟದಲ್ಲಿರುವ ನಾಗರಿಕರಿಗೆ ಅಪಾಯ ಒದಗಿದ ಸಂದರ್ಭದಲ್ಲೂ ರಕ್ಷಣೆಗೆ ಧಾವಿಸುತ್ತಾರೆ. ಛತ್ತೀಸ್ಗಢದಲ್ಲಿ ಸಿಆರ್ಪಿಎಫ್ ತಂಡವು ಮಂಗಳವಾರ ಅನಾರೋಗ್ಯ ಪೀಡಿತ ಗರ್ಭಿಣಿ ಮಹಿಳೆಯನ್ನು ಕನಿಷ್ಠ 6 ಕಿ.ಮೀ.ವರೆಗೆ ಮಂಚದಲ್ಲಿ ಹೊತ್ತು ಸಾಗಿ ಆಸ್ಪತ್ರೆಗೆ ದಾಖಲಿಸಿದೆ.
ಸಿಆರ್ಪಿಎಫ್ ಯೋಧರು ಪಡಾ ಗ್ರಾಮದ ದಟ್ಟ ಕಾಡುಗಳಲ್ಲಿ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಗರ್ಭಿಣಿಯೊಬ್ಬರು ಆರೋಗ್ಯಕ್ಕೀಡಾದ ಬಗ್ಗೆ ಮಾಹಿತಿ ಸಿಗುತ್ತದೆ. ತಕ್ಷಣ ಆಕೆಯ ರಕ್ಷಣೆಗೆ ಧಾವಿಸಿದ ಯೋಧರ ಅವರನ್ನು ಮಂಚದಲ್ಲಿ ಹೊತ್ತು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಯೋಧರು ತಮ್ಮ ನಿಯಮಿತ ಭೇಟಿಗಳಿಂದಾಗಿ ಗ್ರಾಮಸ್ಥರ ನಂಬಿಕೆಗೆ ಕಾರಣರಾಗಿದ್ದಾರೆ. ಗ್ರಾಮಸ್ಥರ ಯೋಗಕ್ಷೇಮಗಳನ್ನು ಯೋಧರು ಸದಾ ವಿಚಾರಿಸುತ್ತಿರುತ್ತಾರೆ. ಇದೇ ಕಾರಣದಿಂದಾಗಿ ಗ್ರಾಮಸ್ಥರು ಗರ್ಭಿಣಿ ಮಹಿಳೆಯ ಆರೋಗ್ಯದ ಬಗ್ಗೆ ಕಮಾಂಡರ್ ಅವಿನಾಶ್ ರಾಯ್ ಅವರಿಗೆ ತಿಳಿಸಿದ್ದರು.
ಮಾಹಿತಿ ಪಡೆದ ತಕ್ಷಣ ಸಮಯ ವ್ಯರ್ಥ ಮಾಡದೆ, ಕಮಾಂಡರ್ ತನ್ನ ತಂಡದೊಂದಿಗೆ ಪ್ರಥಮ ಚಿಕಿತ್ಸಾ ತಜ್ಞರನ್ನು ಒಳಗೊಂಡು ಬೂಡಿ ಎಂಬ ಮಹಿಳೆಯ ಮನೆಗೆ ತಲುಪಿದ್ದಾರೆ. ಅಲ್ಲಿಗೆ ತಲುಪಿದ ನಂತರ, ಮಹಿಳೆಗೆ ಹೆರಿಗೆ ನೋವು ಕಾಣಿಸಿದೆ ಮತ್ತು ತಕ್ಷಣದ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ ಎಂಬುದನ್ನು ತಂಡ ಅರಿತುಕೊಂಡಿತು.
ಗ್ರಾಮವು ದೂರದ ಪ್ರದೇಶದಲ್ಲಿರುವ ಕಾರಣ ಸುತ್ತಮುತ್ತ ಯಾವುದೇ ವೈದ್ಯಕೀಯ ಆರೋಗ್ಯ ಕೇಂದ್ರ ಇರಲಿಲ್ಲ. ರಸ್ತೆಗಳ ಕೊರತೆಯಿಂದಾಗಿ ಯಾವುದೇ ವಾಹನವು ಪ್ರದೇಶವನ್ನು ತಲುಪಲು ಸಾಧ್ಯವಿರಲಿಲ್ಲ. ಆದರೆ, ಈ ಸವಾಲುಗಳಿಗೆ ಎದೆಗುಂದುವ ಜಾಯಮಾನ ನಮ್ಮ ಯೋಧರದ್ದಲ್ಲ. ಸಿಆರ್ಪಿಎಫ್ ತಂಡವು ಆ ಮಹಿಳೆಯನ್ನು ಬೇಗನೆ ಒಂದು ಮಂಚದ ಮೇಲೆ ಮಲಗಿಸಿ 6 ಕಿ.ಮೀ.ದೂರದವರೆಗೆ ಸಾಗಿ ಬಳಿಕ ನಗರದಲ್ಲಿ ವಾಹನದಲ್ಲಿ ಕುಳ್ಳರಿಸಿ ಬಿಜಾಪುರದ ಜಿಲ್ಲಾ ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡಿತು.
ಯೋಧರ ಈ ಕಾರ್ಯಕ್ಕೆ ಎಲ್ಲರಿಂದಲೂ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.