ಶ್ರೀನಗರ: ಯುದ್ಧ ವಿಮಾನ ಪತನವಾದ ಸಂದರ್ಭದಲ್ಲಿ ಭಾರತೀಯ ವಾಯುಸೇನೆ ನಡೆಸಿದ ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡಿದ ಜಮ್ಮು-ಕಾಶ್ಮೀರದ 17 ವರ್ಷದ ಬಾಲಕ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾನೆ. ಈತನ ಶೌರ್ಯವನ್ನು ಇಡೀ ದೇಶವೇ ಕೊಂಡಾಡುತ್ತಿದೆ.
ಕಳೆದ ವರ್ಷದ ಫೆಬ್ರವರಿ 26ರಂದು ನಡೆದ ಬಾಲಕೋಟ್ ವೈಮಾನಿಕ ದಾಳಿಯ ಮರುದಿನ ಪಾಕಿಸ್ಥಾನದ ಯುದ್ಧ ವಿಮಾನಗಳು ಜಮ್ಮು-ಕಾಶ್ಮೀರದ ನೌಶೇರಾ ವಲಯದಲ್ಲಿ ಒಳನುಸುಳಲು ಮುಂದಾಗಿದ್ದವು, ಯುದ್ಧದ ವಾತಾವರಣ ಸೃಷ್ಟಿಯಾಗಿತ್ತು. ದುರಾದೃಷ್ಟವೆಂಬಂತೆ ಭಾರತೀಯ ಯೋಧರು ನಡೆಸಿದ ಫ್ರೆಂಡ್ಲಿ ಫೈಯರ್ಗೆ ಭಾರತದ ಮಿ-17 ಹೆಲಿಕಾಫ್ಟರ್ ಬುದ್ಗಾಂನಲ್ಲಿ ಕ್ರ್ಯಾಶ್ ಆಗಿತ್ತು. ಇದರಿಂದಾಗಿ ಯುದ್ಧವಿಮಾನದಲ್ಲಿದ್ದ 5 ವಾಯುಸೇನಾ ಸಿಬ್ಬಂದಿಗಳು ಮತ್ತು ಒರ್ವ ನಾಗರಿಕ ಜೀವ ಕಳೆದುಕೊಂಡಿದ್ದರು. ಈ ಘಟನೆ ಭಾರೀ ವಿವಾದವನ್ನು ಸೃಷ್ಟಿಸಿತ್ತು.
ಯುದ್ಧವಿಮಾನ ಪತನವಾದ ಸ್ಥಳಕ್ಕೆ ಎಲ್ಲರಿಗಿಂತಲೂ ಬೇಗ ಧಾವಿಸಿ ಬಂದ ಮುದಾಸಿರ್ ಅಶ್ರಫ್ ಬೆಂಕಿ ತಗುಲಿ ವಿಲವಿಲ ಒದ್ದಾಡುತ್ತಿದ್ದ ಒರ್ವ ನಾಗರಿಕನನ್ನು ಬಚಾವ್ ಮಾಡಿದ್ದಾನೆ. ಮಾತ್ರವಲ್ಲದೇ, ವಾಯುಸೇನೆಯ ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡಿದ್ದಾನೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮುದಾಸಿರ್, “ಘಟನೆ ನಡೆದ ಸ್ಥಳಕ್ಕೆ ಧಾವಿಸಿ ಬಂದಾಗ ಓರ್ವ ವ್ಯಕ್ತಿ ಬೆಂಕಿಯಲ್ಲಿ ಒದ್ದಾಡುತ್ತಿದ್ದರು, ತಕ್ಷಣವೇ ಅವರ ನೆರವಿಗೆ ನಾನು ಧಾವಿಸಿದೆ. ಅವರನ್ನು ಕಾಪಾಡಿದೆ. ವಿಮಾನದ ಅವಶೇಷಗಳ ನಡುವೆ ಅವರಿದ್ದುದ್ದನ್ನು ನೋಡಿದ ನಾನು ಆ ವ್ಯಕ್ತಿ ಪೈಲೆಟ್ ಅಂದುಕೊಂಡಿದ್ದೆ. ಆದರೆ ಅವರು ನಾಗರಿಕ ಆಗಿದ್ದರು” ಎಂದಿದ್ದಾನೆ.
ಈ ಬಾರಿ ದೇಶದ ಒಟ್ಟು 22 ಮಕ್ಕಳು ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅವರಲ್ಲಿ ಅತೀ ಹಿರಿಯ 17 ವರ್ಷದ ಮುದಾಸಿರ್ ಆಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.