ನವದೆಹಲಿ: ಗ್ರಾಮೀಣ ಆರ್ಥಿಕತೆಯ ಉತ್ತೇಜನ ಮತ್ತು ಆದಾಯವನ್ನು ಹೆಚ್ಚಿಸಲು, ವಿಶೇಷವಾಗಿ ಸಣ್ಣ ಮತ್ತು ಮಧ್ಯಮ ರೈತರ ಆದಾಯವನ್ನು ಹೆಚ್ಚಿಸಲು ಕೇಂದ್ರ ಬಜೆಟ್ 2020-21ರಲ್ಲಿ ಸುಮಾರು 15% ರಷ್ಟು ನಿಧಿ ಹಂಚಿಕೆಯೊಂದಿಗೆ ಗ್ರಾಮೀಣ ಭಾರತದ ಪರಿವರ್ತನೆಯತ್ತ ಗಮನ ಹರಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಮುಖ್ಯವಾಗಿ ದುರ್ಬಲ ಬೇಡಿಕೆಯಿಂದಾಗಿ ಪ್ರಸ್ತುತ ಉಂಟಾಗಿರುವ ಆರ್ಥಿಕ ಕುಸಿತವನ್ನು ಹಿಮ್ಮೆಟ್ಟಿಸಲು ಮತ್ತು 2025 ರ ವೇಳೆಗೆ ಭಾರತವನ್ನು $5 ಟ್ರಿಲಿಯನ್ ಆರ್ಥಿಕತೆಯನ್ನಾಗಿ ಮಾಡಲು ಗ್ರಾಮೀಣ ಆರ್ಥಿಕತೆಯ ಪರಿವರ್ತನೆಯು ಅತೀ ಮುಖ್ಯವಾಗಿದೆ. ಕೃಷಿ ಮತ್ತು ಗ್ರಾಮೀಣ ಆರ್ಥಿಕತೆಯ ಮೇಲೆ ವಿಶೇಷ ಗಮನ ಹರಿಸುವುದು ಅತ್ಯಗತ್ಯವಾಗಿದ್ದು, ಆದ್ದರಿಂದ ಹೆಚ್ಚಿನ ನಿಧಿ ಹಂಚಿಕೆಯನ್ನು ಬಜೆಟಿನಲ್ಲಿ ನಿರೀಕ್ಷಿಸಲಾಗಿದೆ ಎಂದು ಹೇಳಲಾಗಿದೆ.
ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ 4.5% ನಷ್ಟು ಏರಿಕೆಯಾಗಿದೆ, ಇದು ಮಾರ್ಚ್ 2013 ರ ನಂತರದ ಅತ್ಯಂತ ಕಡಿಮೆ. ಸರ್ಕಾರದ ಮೊದಲ ಸುಧಾರಿತ ಅಂದಾಜಿನ ಪ್ರಕಾರ, 2019-20ರಲ್ಲಿ ಭಾರತದ ಜಿಡಿಪಿ 5% ರಷ್ಟು ಬೆಳೆಯುವ ನಿರೀಕ್ಷೆಯಿದೆ.
2019-20ರ ಒಟ್ಟು ಬಜೆಟ್ ಅಂದಾಜುಗಳಿಗೆ ಹೋಲಿಸಿದರೆ ಗ್ರಾಮೀಣ ಭಾರತವು 2020-21ರಲ್ಲಿ ಸುಮಾರು 40,000 ಕೋಟಿ ರೂ.ಗಳ ಹೆಚ್ಚುವರಿ ನಿಧಿಯನ್ನು ಪಡೆಯುವ ನಿರೀಕ್ಷೆಯಿದೆ ಹೇಳಲಾಗಿದೆ. 2019-20ರ ಬಜೆಟ್ ಗ್ರಾಮೀಣ ಆರ್ಥಿಕತೆಯ ಎರಡು ಪ್ರಮುಖ ಅಂಗಗಳಾದ ಕೃಷಿ , ಸಹಕಾರ ಮತ್ತು ರೈತ ಕಲ್ಯಾಣ ಇಲಾಖೆಗೆ 1,30,485.21 ಕೋಟಿ ರೂ ಮತ್ತು ಗ್ರಾಮೀಣ ಅಭಿವೃದ್ಧಿ ಇಲಾಖೆಗೆ 1,17,647.19 ಕೋಟಿ ರೂ ಅಂದರೆ ಒಟ್ಟು 2,48,132.40 ಅನ್ನು ಹಂಚಿತ್ತು.
2019-20ರ ಬಜೆಟ್ ಅಂದಾಜು (BE) ಪ್ರಕಾರ, ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಒಟ್ಟು ನಿಧಿ ಹಂಚಿಕೆಯನ್ನು 4.66% ಹೆಚ್ಚಿಸಲಾಗುತ್ತಿದೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.