ಲಕ್ನೋ: ಯಾರು ಎಷ್ಟೇ ಪ್ರತಿಭಟನೆ ಮಾಡಿದರೂ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ವಾಪಾಸ್ ಪಡೆಯುವುದಿಲ್ಲ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಹೇಳಿದ್ದಾರೆ.
ಉತ್ತರಪ್ರದೇಶದ ಲಕ್ನೋದಲ್ಲಿ ಸಿಎಎ ಪರವಾದ ಜನ ಜಾಗರಣ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಸಿಎಎ ಬಗ್ಗೆ ವಿರೋಧ ಪಕ್ಷಗಳು ಭ್ರಮೆಗಳನ್ನು ಹರಡುತ್ತಿವೆ, ಅಪಪ್ರಚಾರವನ್ನು ನಡೆಸುತ್ತಿವೆ. ಇದೇ ಕಾರಣಕ್ಕೆ ನಾವು ಜನ ಜಾಗರಣ ಅಭಿಯಾನವನ್ನು ಪ್ರಾರಂಭಿಸಿದ್ದೇವೆ, ದೇಶವನ್ನು ಒಡೆಯುವವರ ವಿರುದ್ಧ ಸಾರ್ವಜನಿಕ ಜಾಗೃತಿ ಅಭಿಯಾನ ಇದಾಗಿದೆ ಎಂದಿದ್ದಾರೆ.
ಪಾಕಿಸ್ಥಾನದಲ್ಲಿ ವಾಸಿಸುವ ಹಿಂದೂಗಳು ಮತ್ತು ಸಿಖ್ಖರು ಭಾರತಕ್ಕೆ ಬರಬಹುದು ಎಂದು ಮಹಾತ್ಮ ಗಾಂಧಿ 1947 ರಲ್ಲಿ ಹೇಳಿದ್ದರು. ಅವರಿಗೆ ಪೌರತ್ವ ನೀಡುವುದು, ಅವರಿಗೆ ಘನತೆ ನೀಡುವುದು ಭಾರತ ಸರ್ಕಾರದ ಕರ್ತವ್ಯವಾಗಿರಬೇಕು ಎಂದಿದ್ದರು. ನಿರಾಶ್ರಿತರಿಗೆ ಪರಿಹಾರ ನೀಡಲು ಕೇಂದ್ರ ಪರಿಹಾರ ನಿಧಿಯನ್ನು ಬಳಸಬೇಕು ಎಂದು ನೆಹರೂ ಹೇಳಿದ್ದರು. ಪೌರತ್ವ ನೀಡಲು ಅಗತ್ಯವಾದದ್ದನ್ನು ಮಾಡಬೇಕು ಎಂದಿದ್ದರು, ಆದರೆ ಕಾಂಗ್ರೆಸ್ ಏನನ್ನೂ ಮಾಡಲಿಲ್ಲ.
ಎರಡು ವರ್ಷಗಳ ಹಿಂದೆ ಜೆಎನ್ಯು ಒಳಗೆ ರಾಷ್ಟ್ರ ವಿರೋಧಿ ಘೋಷಣೆಗಳನ್ನು ಕೂಗಲಾಗಿತ್ತು. ಭಾರತ ಮಾತೆಯನ್ನು ಸಾವಿರ ತುಂಡುಗಳನ್ನಾಗಿ ಕತ್ತರಿಸುವ ಬಗ್ಗೆ ಯಾರು ಮಾತನಾಡುತ್ತಾರೆಯೋ, ಅವರನ್ನು ಜೈಲಿಗೆ ಹಾಕಬೇಕೇ ಅಥವಾ ಬೇಡವೇ ಎಂದು ನಾನು ಕೇಳುತ್ತೇನೆ,
ಮೋದಿಅವರನ್ನು ಜೈಲಿಗೆ ಹಾಕಿದಾಗ, ರಾಹುಲ್ ಮತ್ತು ಕಂಪನಿ ವಾಕ್ ಸ್ವಾತಂತ್ರ್ಯದ ಹಕ್ಕು ಎಂದು ಪ್ರತಿಪಾದಿಸಿತು, ಈ ಮೂಲಕ ದೇಶಕ್ಕೆ ಅವಮಾನ ಮಾಡಿತು ಎಂದಿದ್ದಾರೆ.
ಸಿಎಎ ಮಸೂದೆಯನ್ನು ಲೋಕಸಭೆಯಲ್ಲಿ ಪರಿಚಯಿಸಿದ್ದು ನಾನು. ಈ ಮಸೂದೆಯ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಿ ಎಂದು ನಾನು ಪ್ರತಿಪಕ್ಷಗಳಿಗೆ ಹೇಳಲು ಬಯಸುತ್ತೇನೆ. ಯಾವುದೇ ಒಬ್ಬ ವ್ಯಕ್ತಿಯ ಪೌರತ್ವವನ್ನು ಕಸಿದುಕೊಳ್ಳುವ ಅಂಶವನ್ನು ಸಾಬೀತುಪಡಿಸಿ ತೋರಿಸಲಿ ಎಂದು ಸವಾಲೆಸೆದರು..
ಧರ್ಮದ ಹೆಸರಿನಲ್ಲಿ ಭಾರತ ಎರಡು ತುಂಡಾಗಲು ಕಾಂಗ್ರೆಸ್ ಪಕ್ಷದ ಪಾಪವೇ ಕಾರಣ. ನಾನು ದೃಢವಾಗಿ ಹೇಳುತ್ತಿದ್ದೇನೆ, ಎಷ್ಟು ಬೇಕಾದರೂ ಪ್ರತಿಭಟನೆಗಳನ್ನು ಮಾಡಿ ಆದರೆ ಸಿಎಎ ಅನ್ನು ವಾಪಸ್ ಪಡೆಯಲು ಸಾಧ್ಯವೇ ಇಲ್ಲ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.