ಚೆನ್ನೈ: ತಮಿಳುನಾಡಿನ ಖ್ಯಾತ ಸಮಾಜ ಸುಧಾರಕ ಎಂದು ಕರೆಯಲ್ಪಡುವ ಇವಿ ರಾಮಸ್ವಾಮಿ ಪೆರಿಯಾರ್ ವಿರುದ್ಧ ನೀಡಿರುವ ಹೇಳಿಕೆಗೆ ನಾನು ಕ್ಷಮೆ ಕೇಳುವುದಿಲ್ಲ ಎಂದು ಸೂಪರ್ ಸ್ಟಾರ್ ರಜನೀಕಾಂತ್ ಸ್ಪಷ್ಟಪಡಿಸಿದ್ದಾರೆ.
ತಮಿಳುನಾಡು ಮ್ಯಾಗಜೀನ್ ‘ತುಘಲಕ್’ನ 50ನೇ ವರ್ಷಾಚರಣೆಯಲ್ಲಿ ಭಾಗವಹಿಸಿದ್ದ ರಜನೀಕಾಂತ್, “1971ರಲ್ಲಿ ಸೇಲಂನಲ್ಲಿ ಪೆರಿಯಾರ್ ಅವರು ಮೂಢನಂಬಿಕೆಯ ವಿರುದ್ಧ ಸಮಾವೇಶವನ್ನು ಆಯೋಜನೆಗೊಳಿಸಿದ್ದರು. ಇದರಲ್ಲಿ ಶ್ರೀ ರಾಮಚಂದ್ರ ಮತ್ತು ಸೀತಾಮಾತೆಯನ್ನು ಬೆತ್ತಲೆಯಾಗಿ ಚಿತ್ರಿಸಿ ಚಪ್ಪಲಿ ಹಾರವನ್ನು ಹಾಕಲಾಗಿತ್ತು. ಇದನ್ನು ಯಾವ ಪತ್ರಿಕೆಗಳು ಕೂಡ ಪ್ರಕಟಿಸಿಲ್ಲ, ಕೇವಲ ತುಘಲಕ್ ಮ್ಯಾಗಜೀನ್ ಮಾತ್ರ ಪ್ರಕಟಿಸಿತ್ತು. ಇದು ಅಂದಿನ ಆಡಳಿತಾರೂಢ ಡಿಎಂಕೆಯನ್ನು ಕೆರಳಿಸಿತ್ತು. ಮ್ಯಾಗಜೀನ್ ಪ್ರತಿಗಳನ್ನು ಸೀಝ್ ಮಾಡಲಾಯಿತು. ಆದರೆ ಎದೆಗುಂದದ ಮ್ಯಾಗಜೀನ್ ಸಂಪಾದಕ ಚೊ ರಾಮಚಂದ್ರ ಅವರು ಪ್ರತಿಗಳನ್ನು ಮರಮುದ್ರಣಗೊಳಿಸಿದರು. ಈ ಪ್ರತಿಗಳು ಭಾರೀ ಪ್ರಮಾಣದಲ್ಲಿ ಮಾರಾಟಗೊಂಡವು” ಎಂದಿದ್ದಾರೆ.
ಇದೀಗ ಕೆಲವು ಗುಂಪುಗಳ ಸದಸ್ಯರು ಕೊಯಮತ್ತೂರಿನಲ್ಲಿ ಭಾರತೀಯ ದಂಡ ಸಂಹಿತೆ ಸೆಕ್ಷನ್ಗಳು 153 (ಎ) (ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ, ಭಾಷೆ, ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 505 ( ಸಾರ್ವಜನಿಕ ಕಿಡಿಗೇಡಿತನದ ಹೇಳಿಕೆಗಳು) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿವೆ.
ಈ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ರಜನೀಕಾಂತ್, ಇಂಗ್ಲಿಷ್ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ ಓದಿದ ಸುದ್ದಿ ವರದಿಗಳನ್ನು ಆಧರಿಸಿ ನಾನು ಅಭಿಪ್ರಾಯಗಳನ್ನು ಹೇಳಿದೆ. ಕ್ಷಮೆಯಾಚನೆ ಮಾಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.