ನವದೆಹಲಿ: ಕೇಂದ್ರ ಬಜೆಟ್ ಶೀಘ್ರದಲ್ಲೇ ಮಂಡನೆಗೊಳ್ಳಲಿದೆ. ಈ ಹಿನ್ನಲೆಯಲ್ಲಿ ಎಲ್ಲರ ಗಮನ ಅತ್ತ ಕಡೆ ನೆಟ್ಟಿದೆ. ಈ ಬಜೆಟ್ ‘ಅಗತ್ಯ ಸರಕುಗಳ ಕಾಯ್ದೆ’ (Essential Commodities Act)ನ ದಂಡದ ನಿಬಂಧನೆಗಳನ್ನು ದೂರವಿಡುವ ಸಾಧ್ಯತೆ ಇದೆ. ಅನೇಕ ತಜ್ಞರ ಪ್ರಕಾರ ಇದು ಕೃಷಿ ಸುಧಾರಣೆಯ ಮಹತ್ವದ ಕ್ರಮವಾಗಲಿದೆ ಮತ್ತು ಇದು ಕೃಷಿ ಆದಾಯವನ್ನು ಹೆಚ್ಚಿಸಬಹುದು.
ಮುಂಜಾಗೃತ ಬಂಧನ, ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಮತ್ತು ಆಸ್ತಿಗಳನ್ನು ಮುಟ್ಟುಗೋಲು ಹಾಕುವುದು ಮುಂತಾದ ‘ಅಗತ್ಯ ಸರಕುಗಳ ಕಾಯ್ದೆ (ಇಸಿಎ)’ಯ ದಂಡದ ವಿಧಿಗಳನ್ನು ರದ್ದುಗೊಳಿಸಲು ಸರ್ಕಾರ ಚಿಂತಿಸುತ್ತಿದೆ, ಇದರಿಂದಾಗಿ ವ್ಯಾಪಾರಿಗಳು ನೇರವಾಗಿ ರೈತರಿಂದ ಹೆಚ್ಚಿನ ಪ್ರಮಾಣದಲ್ಲಿ ಉತ್ಪನ್ನಗಳನ್ನು ಖರೀದಿಸಬಹುದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಕಾಯ್ದೆಯು ವ್ಯಾಪಾರಿಗಳು ರೈತರಿಂದ ಉತ್ಪನ್ನಗಳನ್ನು ಖರೀದಿಸುವ ಪ್ರಮಾಣಕ್ಕೆ ಮಿತಿ ಒದಗಿಸುತ್ತದೆ ಈ ಮೂಲಕ ಕೃಷಿ ಆರ್ಥಿಕತೆಯ ಮೇಲೆ ಈ ಕಾಯ್ದೆಯು ನಿರ್ಬಂಧಗಳನ್ನು ವಿಧಿಸುತ್ತದೆ. ಇದು ವ್ಯಾಪಾರಿಗಳು ಮತ್ತು ವ್ಯಾಪಾರಿಗಳಿಗೆ ಜೀವನವನ್ನು ಕಷ್ಟಕರವಾಗಿಸುತ್ತದೆ. ಹೀಗಾಗಿ ಈ ಬಜೆಟಿನಲ್ಲಿ ಕಾಯ್ದೆಯ ನಿರ್ಬಂಧವನ್ನು ತೆಗೆದು ಹಾಕಲು ಚಿಂತನೆ ನಡೆಸಲಾಗಿದೆ.
ಭಾರತ್ ಕೃಷಿಕ್ ಸಮಾಜದ ಅಧ್ಯಕ್ಷ ಅಜಯ್ ವೀರ್ ಜಖರ್ ಅವರು ಮಾತನಾಡಿ, ಕಾಯ್ದೆಯ ದಂಡದ ನಿಬಂಧನೆಗಳನ್ನು ರದ್ದುಪಡಿಸುವಂತೆ ರೈತರು ದೀರ್ಘಕಾಲದಿಂದ ಒತ್ತಾಯಿಸುತ್ತಿದ್ದಾರೆ. ಈ ಕಾಯ್ದೆಯು ಅಧಿಕಾರಿಗಳು ಮತ್ತು ರಾಜಕಾರಣಿಗಳಿಗೆ ಸರಕು ಮಾರುಕಟ್ಟೆಗಳಲ್ಲಿ ವಂಚನೆ ಮಾಡಲು ಅವಕಾಶ ಮಾಡಿಕೊಟ್ಟಿದೆ ಮತ್ತು ರೈತರ ಜೀವನೋಪಾಯವನ್ನು ನಾಶಮಾಡಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.