ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಪಕ್ಷಗಳು ತೆಗೆದುಕೊಂಡಿರುವ ನಿರ್ಣಯ ಪಾಕಿಸ್ಥಾನವನ್ನು ಸಂತೋಷಪಡಿಸಿರಬಹುದು ಎಂದು ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ. ಅಲ್ಲದೇ, ಈ ಕಾಯ್ದೆಯು ಪಾಕಿಸ್ಥಾನದ ಅನಾಗರಿಕ ದೌರ್ಜನ್ಯವನ್ನು ಬಹಿರಂಗಪಡಿಸಲು ಒಂದು ಅವಕಾಶವಾಗಿದೆ ಎಂದಿದ್ದಾರೆ.
ಈ ಪ್ರಕ್ರಿಯೆಯಲ್ಲಿ ಪ್ರತಿಪಕ್ಷಗಳು ಅನಗತ್ಯವಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕೆಗೊಳಪಡಿಸುತ್ತಿವೆ, ಪ್ರತಿಪಕ್ಷಗಳ ಒಗ್ಗಟ್ಟಿನ ಗುಟ್ಟು ಈಗ ರಟ್ಟಾಗುತ್ತಿದೆ ಎಂದಿದ್ದಾರೆ.
“ಎಸ್ಪಿ, ಬಿಎಸ್ಪಿ, ಟಿಎಂಸಿ ಮತ್ತು ಎಎಪಿಯಂತಹ ಪ್ರಮುಖ ಪಕ್ಷಗಳು ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಕರೆದ ಸಭೆಯಿಂದ ದೂರ ಉಳಿದಿರುವುದರಿಂದ ವಿರೋಧಿಗಳ ಐಕ್ಯತೆ ಬಹಿರಂಗವಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ನಿರ್ಣಯವು ರಾಷ್ಟ್ರೀಯ ಹಿತಾಸಕ್ತಿ ಅಥವಾ ಭದ್ರತೆಯ ಹಿತದೃಷ್ಟಿಯಿಂದಲ್ಲ. ಕಿರುಕುಳದಿಂದ ಪಾರಾಗಲು ನೆರೆಯ ದೇಶಗಳಿಂದ ಪಲಾಯನ ಮಾಡಿದ ಅಲ್ಪಸಂಖ್ಯಾತರ ಬಗಿಗನ ಹಿತಾಸಕ್ತಿಯೂ ಅವರ ನಿಲುವಿನಲ್ಲಿ ಇಲ್ಲ ” ಎಂದು ಸಚಿವರು ಆರೋಪಿಸಿದ್ದಾರೆ.
ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಸೋಮವಾರ ಒಂದು ನಿರ್ಣಯವನ್ನು ಅಂಗೀಕರಿಸಿದ್ದು, ತಿದ್ದುಪಡಿ ಮಾಡಿರುವ ಪೌರತ್ವ ಕಾಯ್ದೆಯನ್ನು ಹಿಂಪಡೆಯಬೇಕು ಮತ್ತು ಎನ್ಪಿಆರ್ ಪ್ರಕ್ರಿಯೆಯು ತಕ್ಷಣವೇ ನಿಲ್ಲಬೇಕು ಎಂಬ ನಿರ್ಣಯ ಅದಾಗಿದೆ. ಈ ಕಾಯ್ದೆ ಬಡ ಜನರು, ಎಸ್ಸಿ / ಎಸ್ಟಿಗಳನ್ನು, ಅಲ್ಪಸಂಖ್ಯಾತರನ್ನು ಗುರಿಯಾಗಿಸುವ “ಅಸಂವಿಧಾನಿಕ ಪ್ಯಾಕೇಜ್” ನ ಭಾಗವಾಗಿದೆ ಎಂದು ಅವುಗಳು ಆರೋಪಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.