ನವದೆಹಲಿ: ಗುರುದ್ವಾರ ನಂಕನಾ ಸಾಹಿಬ್ ಅನ್ನು ಅಪವಿತ್ರಗೊಳಿಸಿದ ಮತ್ತು ಸಿಖ್ ಯುವಕನನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಕೇಂದ್ರ ಸರ್ಕಾರ ಪಾಕಿಸ್ಥಾನದ ವಿರುದ್ಧ ತೀವ್ರ ವಾಗ್ದಾಳಿಯನ್ನು ನಡೆಸಿದೆ. ತನ್ನ ಅಲ್ಪಸಂಖ್ಯಾತರನ್ನು ನೋಡಿಕೊಳ್ಳಲು ಸಾಧ್ಯವಾಗದ ರಾಷ್ಟ್ರವು ಇನ್ನೊಂದು ರಾಷ್ಟ್ರಕ್ಕೆ ಪಾಠ ಹೇಳಲು ಬರಬಾರದು ಎಂದು ಹೇಳಿದೆ.
“ತನ್ನ ಅಲ್ಪಸಂಖ್ಯಾತರನ್ನು ನೋಡಿಕೊಳ್ಳಲು ಸಾಧ್ಯವಾಗದ ದೇಶವು ಇನ್ನೊಂದು ದೇಶಕ್ಕೆ ಹೇಗೆ ಅಲ್ಪಸಂಖ್ಯಾತರನ್ನು ನೋಡಿಕೊಳ್ಳಬೇಕು ಎಂಬ ಬಗ್ಗೆ ಹೇಳಿ ಕೊಡಲು ಬರಬಾರದು”ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು ನಂಕಾನಾ ಸಾಹಿಬ್ ಮತ್ತು ಪಾಕಿಸ್ಥಾನದಲ್ಲಿ ಸಿಖ್ ಯುವಕನ ಹತ್ಯೆಯನ್ನು ಉಲ್ಲೇಖಿಸಿ ಪಾಕಿಸ್ಥಾನಕ್ಕೆ ತಿರುಗೇಟು ನೀಡಿದ್ದಾರೆ.
“ನಂಕನಾ ಸಾಹಿಬ್ನಲ್ಲಿ ನಡೆದ ಘಟನೆ ಮತ್ತು ಸಿಖ್ ಯುವಕನ ಕೊಲೆ ಆ ದೇಶಕ್ಕೆ ಕನ್ನಡಿ ಹಿಡಿದಿದೆ. ಇತರ ಉಪನ್ಯಾಸ ನೀಡುವವರಿಗೂ ಇದು ಕನ್ನಡಿಯಾಗಿದೆ” ಎಂದು ವಿದೇಶಾಂಗ ವಕ್ತಾರ ಹೇಳಿದ್ದಾರೆ.
ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ದೇವ್ ಅವರ ಜನ್ಮಸ್ಥಳವಾದ ಗುರುದ್ವಾರ ನಂಕಾನ ಸಾಹಿಬ್ ಮೇಲೆ ಕಳೆದ ವಾರ ಜನರ ಗುಂಪೊಂದು ದಾಳಿ ನಡೆಸಿ ಅದನ್ನು ಅಪವಿತ್ರಗೊಳಿಸಿತ್ತು ಮತ್ತು ಹೆಚ್ಚಿನ ಸಂಖ್ಯೆಯ ಸಿಖ್ ಭಕ್ತರ ಮೇಲೆ ಕಲ್ಲುಗಳನ್ನು ತೂರಿತ್ತು ಮತ್ತು ಹಲ್ಲೆ ನಡೆಸಿತ್ತು.
ಕಳೆದ ವಾರ ವಾಯುವ್ಯ ಪಾಕಿಸ್ಥಾನದ ಪೇಶಾವರದಲ್ಲಿ 25 ವರ್ಷದ ಸಿಖ್ ವ್ಯಕ್ತಿಯನ್ನೂ ಗುಂಡಿಕ್ಕಿ ಕೊಲ್ಲಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.