ವಿಶ್ವಸಂಸ್ಥೆ: ಭಾರತದ ಬಗ್ಗೆ ಸುಳ್ಳು ನಿರೂಪಣೆಗಳನ್ನು ನೀಡುತ್ತಿರುವ ಪಾಕಿಸ್ಥಾನಕ್ಕೆ ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ರಾಯಭಾರಿ ಸೈಯದ್ ಅಕ್ಬರುದ್ದೀನ್ ಅವರು ತೀಕ್ಷ್ಣ ಪ್ರತಿಕ್ರಿಯೆಯನ್ನು ನೀಡಿದ್ದಾರೆ. “ನಿಮ್ಮ ಮಾಲ್ವೇರ್ಗಳನ್ನು ತೆಗೆದುಕೊಳ್ಳುವವರು ಇಲ್ಲಿ ಯಾರೂ ಇಲ್ಲ” ಎಂದಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಗುರುವಾರ ಬಹಿರಂಗ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಭದ್ರತಾ ಮಂಡಳಿಯು ಗುರುತಿಸುವಿಕೆ ಮತ್ತು ನ್ಯಾಯಸಮ್ಮತತೆಯ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ ಮತ್ತು ಪ್ರಸ್ತುತತೆ ಮತ್ತು ಕಾರ್ಯಕ್ಷಮತೆಯ ಬಿಕ್ಕಟ್ಟೂ ಇದೆ. ಭಯೋತ್ಪಾದಕ ಜಾಲಗಳ ಜಾಗತೀಕರಣ, ಹೊಸ ತಂತ್ರಜ್ಞಾನಗಳ ಸಶಸ್ತ್ರೀಕರಣ, ವಿಧ್ವಂಸಕ ಸ್ಟ್ಯಾಟ್ಕ್ರಾಫ್ಟ್ ಅನ್ನು ಆಶ್ರಯಿಸುವವರನ್ನು ಎದುರಿಸುವಲ್ಲಿನ ಅಸಮರ್ಥತೆ ನ್ಯೂನತೆಗಳನ್ನು ತೋರಿಸುತ್ತಿದೆ” ಎಂದಿದ್ದಾರೆ.
“ಡಾರ್ಕ್ ಆರ್ಟ್ಸ್ ಅನ್ನು ನಿರೂಪಿಸುವ ಒಂದು ನಿಯೋಗವು ಇಂದು ಮತ್ತೆ ಸುಳ್ಳುಗಳನ್ನು ಹೇಳುವ ಮೂಲಕ ತನ್ನ ಸರಕನ್ನು ಪ್ರದರ್ಶಿಸಿದೆ. ಇವುಗಳನ್ನು ನಾವು ತಿರಸ್ಕರಿಸುತ್ತೇವೆ. ಪಾಕಿಸ್ಥಾನಕ್ಕೆ ತಡವಾಗಿಯಾದರೂ ನನ್ನ ಸರಳ ಪ್ರತಿಕ್ರಿಯೆ ಏನೆಂದರೆ, ನಿಮ್ಮ ಅನಾರೋಗ್ಯವನ್ನು ಆದಷ್ಟು ಬೇಗ ಗುಣಪಡಿಸಿಕೊಳ್ಳಿ ಎಂಬುದು. ನಿಮ್ಮ ಮಾಲ್ವೇರ್ ಅನ್ನು ತೆಗೆದುಕೊಳ್ಳಲು ಇಲ್ಲಿ ಯಾರೂ ಇಲ್ಲ” ಎಂದು ಅಕ್ಬರುದ್ದೀನ್ ಪಾಕಿಸ್ಥಾನಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಪಾಕಿಸ್ಥಾನದ ಮುನೀರ್ ಅಕ್ರಮ್ ಅವರು ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಮಾತನಾಡಿ, ಭಾರತವು ಜಮ್ಮು ಮತ್ತು ಕಾಶ್ಮೀರದಲ್ಲಿ ಸಹಜತೆ ಇದೆ ಎಂದು ಸುಳ್ಳು ಹೇಳುತ್ತಿದೆ ಎಂದಿದ್ದರು. ಇದಕ್ಕೆ ಅಕ್ವರುದ್ದೀನ್ ಈ ಪ್ರತಿಕ್ರಿಯೆ ನೀಡಿದ್ದಾರೆ.
ಅಲ್ಲದೇ, ಪ್ರಸ್ತುತ ಮತ್ತು ಭವಿಷ್ಯದ ಜಾಗತಿಕ ಶಾಂತಿ ಮತ್ತು ಭದ್ರತೆಗೆ ಮಾರಕವಾಗಿರುವ ಅಂಶಗಳ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.