ನವದೆಹಲಿ: ಕೊನೆಗೂ ನಿರ್ಭಯಾ ಅತ್ಯಾಚಾರಿಗಳಿಗೆ ಶಿಕ್ಷೆಯಾಗಿದೆ. ಇವರು ಗಲ್ಲಿಗೇರುವ ದಿನಾಂಕವೂ ನಿಗದಿಯಾಗಿದೆ. ಜನವರಿ 22ರ ಬೆಳಿಗ್ಗೆ 7 ಗಂಟೆಗೆ ಇವರು ನೇಣುಗಂಬಕ್ಕೆ ಏರುವ ದಿನಾಂಕವನ್ನು ಕೋರ್ಟ್ ಘೋಷಣೆ ಮಾಡಿದೆ. ಇವರನ್ನು ಉತ್ತರಪ್ರದೇಶದ ಪವಣ್ ಜಲ್ಲಾದ್ ಎಂಬುವವರು ಗಲ್ಲಿಗೇರಿಸಲಿದ್ದಾರೆ.
“ತಾನು ಈಗಾಗಲೇ ನಾಲ್ವರನ್ನು ಗಲ್ಲಿಗೇರಿಸಲು ಸಜ್ಜಾಗಿದ್ದೇನೆ. ಈ ಕಾರ್ಯ ಸಮಾಜಕ್ಕೆ ಕಠಿಣ ಸಂದೇಶವನ್ನು ರವಾನಿಸುತ್ತದೆ. ಈ ಕಾರ್ಯ ನನಗೂ, ನಿರ್ಭಯಾ ಪೋಷಕರಿಗೂ ಮತ್ತು ಪ್ರತಿಯೊಬ್ಬರಿಗೂ ನಿರಾಳತೆಯನ್ನು ನೀಡಲಿದೆ” ಎಂದು ಪವನ್ ಜಲ್ಲಾದ್ ಹೇಳಿದ್ದಾರೆ.
ನಿರ್ಭಯಾ ಅತ್ಯಾಚಾರಿಗಳಾದ 32 ವರ್ಷ ಮುಕೇಶ್, 25 ವರ್ಷದ ಪವನ್ ಗುಪ್ತಾ, 26 ವರ್ಷದ ವಿನಯ್ ಶರ್ಮಾ ಮತ್ತು 31 ವರ್ಷದ ಅಕ್ಷಯ್ ಕುಮಾರ್ ಸಿಂಗ್ ಮರಣದಂಡನೆ ಶಿಕ್ಷೆಗೆ ಒಳಗಾದವರಾಗಿದ್ದಾರೆ. ಇವರನ್ನು ಗಲ್ಲಿಗೇರಿಸಲು ಅಧಿಕೃತವಾಗಿ ಪವನ್ ಜಲ್ಲಾದ್ ಅವರನ್ನು ಗೊತ್ತುಪಡಿಸಲಾಗಿದೆ.
“ನೇಣುಗಂಬಕ್ಕೆ ಏರಿಸುವ ಬಗ್ಗೆ ನನಗೆ ಇದುವರೆಗೆ ಮಾಹಿತಿ ಸಿಕ್ಕಿಲ್ಲ. ಈ ಬಗ್ಗೆ ಇದುವರೆಗೆ ನನ್ನ ಬಳಿ ಯಾರೊಬ್ಬರೂ ಮಾತುಕತೆ ನಡೆಸಿಲ್ಲ. ಯಾರಾದರೂ ನನ್ನನ್ನು ಸಂಪರ್ಕಿಸಿದರೆ ನಾನು ಕೆಲಸಕ್ಕೆ ಸಿದ್ಧನಾಗುತ್ತೇನೆ. ಈ ಹಿಂದೆ ಡಿ. 16 ರಂದು ನನಗೆ ಸಿದ್ಧವಾಗಿರುವಂತೆ ಸೂಚನೆಯನ್ನು ನೀಡಲಾಗಿತ್ತು” ಎಂದಿದ್ದಾರೆ.
“ಅಮಾನವೀಯ ಕೃತ್ಯದಲ್ಲಿ ಭಾಗಿಯಾದವರನ್ನು ನೇಣುಗಂಬಕ್ಕೆ ಏರಿಸಲೇ ಬೇಕು, ಇದು ಸಮಾಜಕ್ಕೆ ಕಠಿಣ ಸಂದೇಶ ರವಾನಿಸುತ್ತದೆ” ಎಂದಿದ್ದಾರೆ.
2012ರ ಡಿಸೆಂಬರ್ 16-17ರ ರಾತ್ರಿ ದಕ್ಷಿಣ ದೆಹಲಿಯ ಚಲಿಸುವ ಬಸ್ಸಿನಲ್ಲಿ 6 ಮಂದಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿಯನ್ನು ಅಮಾನವೀಯವಾಗಿ ಅತ್ಯಾಚಾರಕ್ಕೀಡು ಮಾಡಲಾಗಿತ್ತು. ನಂತರ ರಸ್ತೆಗೆ ಎಸೆಯಲಾಗಿತ್ತು. ಕೆಲ ದಿನಗಳ ಬಳಿಕ ಆಕೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು. ಈ ಘಟನೆ ಇಡೀ ದೇಶವನ್ನೇ ತಲ್ಲಣಗೊಳಿಸಿತ್ತು. ಆರು ಮಂದಿಯಲ್ಲಿ ಒಬ್ಬ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾನೆ ಮತ್ತು ಇನ್ನೊಬ್ಬನನ್ನು ಅಪ್ರಾಪ್ತ ಎಂಬ ಕಾರಣಕ್ಕೆ ಶಿಕ್ಷೆಯಿಂದ ಖುಲಾಸೆ ಮಾಡಲಾಗಿದೆ. ಉಳಿದ ನಾಲ್ವರಿಗೆ ಮರಣದಂಡನೆ ಖಚಿತವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.