ವಯನಾಡ್ : ಕೇರಳದ ವಯನಾಡ್ ಜಿಲ್ಲೆಯ ಸ್ವ-ಆಡಳಿತ ನಾಗರಿಕ ಸಂಸ್ಥೆಯು ಸಮುದಾಯ ಆಧಾರಿತ ಹವಾಮಾನ ಬದಲಾವಣೆಯ ರೂಪಾಂತರದ ಉಪಕ್ರಮಕ್ಕೆ ಒಂದು ಉತ್ತಮ ಉದಾಹರಣೆಯಾಗಿ ನಿಂತಿದೆ. ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ನಿಗ್ರಹಿಸುವ ಸಲುವಾಗಿ ಈ ಹಳ್ಳಿಯು ಕಾರ್ಬನ್ ತಟಸ್ಥ ಹಳ್ಳಿಯಾಗಿ ಹೊರಹೊಮ್ಮಿದೆ. ಈ ಮೂಲಕ ಸತತ ಹಲವು ವರ್ಷಗಳಿಂದ ಮೀನಾಗ್ನಾಡಿ ಗ್ರಾಮ ಪಂಚಾಯಿತಿಯು ಪ್ರಾಯೋಗಿಕವಾಗಿ ಉಪಕ್ರಮವನ್ನು ಅನುಷ್ಠಾನಕ್ಕೆ ತಂದಿದೆ.
ಕಾರ್ಬನ್ ತಟಸ್ಥ ಮೀನಾಗ್ನಾಡಿ ಯೋಜನೆಯು 2016ರಲ್ಲಿ ಆರಂಭಗೊಂಡಿದೆ, ಕಳೆದ ಮೂರು ವರ್ಷಗಳಿಂದ ಇದು ಹೆಚ್ಚು ಸಕ್ರಿಯವಾಗಿದೆ ಮತ್ತು ಇದರಡಿಯಲ್ಲಿ ಹಲವಾರು ಕಾರ್ಯಕ್ರಮಗಳ್ನು ಹಮ್ಮಿಕೊಳ್ಳಲಾಗಿದೆ. ಬಂಜರು ಭೂಮಿಯಲ್ಲಿ ಹಸಿರು ಹೊದಿಕೆಯನ್ನು ವೃದ್ಧಿಸಲು ಎರಡು ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದೆ ಮತ್ತು ಅದನ್ನು ಪೋಷಿಸಲಾಗಿಗುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ, ಅದನ್ನು ಚೂರುಚೂರು ಮಾಡಿ ರಸ್ತೆ ಮೇಲ್ಮೈ ಕೆಲಸಕ್ಕೆ ಬಳಸಲಾಗುತ್ತಿದೆ. ಸಾಂಪ್ರದಾಯಿಕ ಕಟ್ಟಿಗೆ ಅಡಿಗೆ ಒಲೆಗಳ ಬದಲು ಕಡಿಮೆ ಹೊಗೆ ಸೂಸುವ ಸ್ಟೌವ್ಗಳ ಬಳಕೆಯನ್ನು ಉತ್ತೇಜಿಸಲಾಗುತ್ತಿದೆ. ಮರಗಳನ್ನು ಬೆಳೆಸಲು ಮನೆಗಳಿಗೆ ಹಣವನ್ನು ನೀಡಲಾಗುತ್ತಿದೆ.
ಮೀನಾಗ್ನಾಡಿ ಮೊದಲ ಇಂಗಾಲ-ತಟಸ್ಥ ಗ್ರಾಮವಾಗುವ ಹಾದಿಯಲ್ಲಿದೆ, ಇದು ವಯನಾಡ್ ಅನ್ನು ಕೂಡ ದೇಶದ ಮೊದಲ ಇಂಗಾಲ ತಟಸ್ಥ ಜಿಲ್ಲೆಯಾಗಿಸುವತ್ತ ಮುನ್ನಡೆಸಲಿದೆ.
“ಹವಾಮಾನ ಬದಲಾವಣೆಯು ಜಿಲ್ಲೆಯ ಕೃಷಿ ಇಳುವರಿಯನ್ನು ಕಡಿಮೆ ಮಾಡಿದೆ. ಆದ್ದರಿಂದ, ಅಭಿವೃದ್ಧಿಯತ್ತ ನಮ್ಮ ಮಾರ್ಗವನ್ನು ಬದಲಾಯಿಸಲು ನಾವು ಮುಂದಾಗಿದ್ದೇವೆ. ಹವಾಮಾನ ಬದಲಾವಣೆಯನ್ನು ನಿಭಾಯಿಸಲು ಸ್ಥಳೀಯ ಸಂಸ್ಥೆಗಳು ಯೋಜನೆಗಳನ್ನು ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರ ಬಯಸುತ್ತಿರುವ ಸಂದರ್ಭದಲ್ಲಿ ನಾವು ಹಳ್ಳಿಯನ್ನು ಇಂಗಾಲ-ತಟಸ್ಥವಾಗಿಸಲು ಮುಂದಾಗಿದ್ದೇವೆ ”.
ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ವಿಶ್ಲೇಷಿಸಲು ಮತ್ತು ಹಂತಗಳನ್ನು ವಿಕಸಿಸಲು ಎಂಎಸ್ ಸ್ವಾಮಿನಾಥನ್ ರಿಸರ್ಚ್ ಫೌಂಡೇಶನ್, ಥನಾಲ್ (ಒಂದು ಎನ್ಜಿಒ), ಐಐಎಸ್ಸಿ (ಬೆಂಗಳೂರು), ಐಐಟಿ-ದೆಹಲಿ ಮತ್ತು ಸರ್ಕಾರಿ ಎಂಜಿನಿಯರಿಂಗ್ ಕಾಲೇಜು (ಕಣ್ಣೂರು) ನಂತಹ ಹಲವಾರು ಸಂಸ್ಥೆಗಳ ಪರಿಣತಿಯನ್ನು ಪಂಚಾಯತ್ ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.