News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸುಮಾರು 25,000 ಪಾಕ್ ಹಿಂದೂಗಳು ತತ್‍ಕ್ಷಣವೇ ಭಾರತದ ಪೌರತ್ವ ಪಡೆಯಲಿದ್ದಾರೆ

ನವದೆಹಲಿ: ರಾಜಸ್ಥಾನದ ಜೋಧಪುರದಲ್ಲಿ ವಾಸಿಸುತ್ತಿರುವ ನಿರಾಶ್ರಿತ ಪಾಕಿಸ್ಥಾನ ಹಿಂದೂಗಳ ಬಾಳಿನಲ್ಲಿ ಹೊಸ ಬೆಳಕು ಮೂಡಿದೆ. ಸಂಸತ್ತಿನಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಅನುಮೋದನೆಗೊಂಡ ಹಿನ್ನೆಲೆಯಲ್ಲಿ ಇವರಿಗೆ ಭಾರತದ ಪೌರತ್ವ ತುರ್ತಾಗಿ ಮಂಜೂರಾಗಲಿದೆ.

ಭಾರತದಲ್ಲಿ ಐದು ವರ್ಷಗಳ ಕಾಲ ಜೀವಿಸಿದ ಮತ್ತು ಭಾರತದ ಪೌರತ್ವವನ್ನು ಪಡೆಯಲು ಅರ್ಹತೆಯನ್ನು ಹೊಂದಿರುವ ನಿರಾಶ್ರಿತ ಪಾಕಿಸ್ಥಾನಿ ಹಿಂದುಗಳಿಗೆ ಭಾರತದ ಪೌರತ್ವವನ್ನು ಒದಗಿಸಲಾಗುತ್ತದೆ. ಪ್ರಸ್ತುತ ಸಾಕಷ್ಟು ಪ್ರಮಾಣದ ನಿರಾಶ್ರಿತರು ಜೋಧಪುರದಲ್ಲಿ ವಿವಿಧ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. ಪೌರತ್ವ ಮಸೂದೆಯು ಕಾಯ್ದೆಯಾಗಿ ಪರಿವರ್ತನೆಗೊಂಡ ಹಿನ್ನೆಲೆಯಲ್ಲಿ ಅವರ ಸಂಭ್ರಮ ಮುಗಿಲು ಮುಟ್ಟಿದೆ.

ಪಾಕಿಸ್ಥಾನ ಮತ್ತು ಜೋಧಪುರದ ನಡುವೆ ಸಂಚರಿಸುವ ಥಾರ್ ಎಕ್ಸ್ ಪ್ರೆಸ್ ರೈಲಿನ ಮೂಲಕ ಹಿಂದೂ ವಲಸಿಗರು ಇಲ್ಲಿಗೆ ಆಗಮಿಸಿದ್ದಾರೆ. ಪಾಕಿಸ್ಥಾನದ ಆರು ಭಾಗಗಳಿಂದ ಬಂದ ಸುಮಾರು 2,447 ವಲಸಿಗರಿಗೆ ಈಗಾಗಲೇ ಭಾರತದ ಪೌರತ್ವವನ್ನು ನೀಡಲಾಗಿದೆ.

ಐತಿಹಾಸಿಕವಾಗಿ, 2004ರಲ್ಲಿ ಸರಕಾರವು 13000 ವಲಸಿಗರಿಗೆ ಏಕಕಾಲದಲ್ಲಿ ಭಾರತದ ಪೌರತ್ವವನ್ನು ನೀಡಿತ್ತು.

ಪೌರತ್ವ ನೀಡುವುದರೊಂದಿಗೆ ನಿರಾಶ್ರಿತ ಹಿಂದೂಗಳ ಕಲ್ಯಾಣಕ್ಕಾಗಿ ಅವರಿಗೆ ಉತ್ತಮ ಜೀವನವನ್ನು ಒದಗಿಸಬೇಕು ಮತ್ತು ಸರಕಾರಿ ಯೋಜನೆಗಳು ಲಭ್ಯವಾಗುವಂತೆ ಮಾಡಬೇಕು ಎಂದು ಇವರ ಕಲ್ಯಾಣಕ್ಕಾಗಿ ದುಡಿಯುತ್ತಿರುವ ಸಂಘ-ಸಂಸ್ಥೆಗಳು ಬೇಡಿಕೆ ಇಟ್ಟಿವೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top