ನವದೆಹಲಿ: 2019ರ ಆಗಸ್ಟ್ ತಿಂಗಳಿನಿಂದ ಜಮ್ಮು-ಕಾಶ್ಮೀರದ ಗಡಿ ರೇಖೆಯ ಸಮೀಪ 84 ಅಕ್ರಮ ಒಳನುಸುಳುವಿಕೆ ಪ್ರಯತ್ನಗಳು ನಡೆದಿವೆ ಮತ್ತು 59 ಮಂದಿ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಲೋಕಸಭೆಗೆ ಕೇಂದ್ರ ಗೃಹ ಸಚಿವಾಲಯ ಮಾಹಿತಿಯನ್ನು ನೀಡಿದೆ.
“ಜಮ್ಮು-ಕಾಶ್ಮೀರದ ವಾಸ್ತವ ಗಡಿರೇಖೆಯ ಸಮೀಪ ಅಕ್ರಮ ಒಳನುಸುಳುವಿಕೆಯ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಇಂತಹ ಪ್ರಯತ್ನಗಳನ್ನು ನೆರೆ ರಾಷ್ಟ್ರ ಪ್ರಾಯೋಜಿಸುತ್ತಿದೆ. 2019ರ ಆಗಸ್ಟ್ ತಿಂಗಳಿನಿಂದ ಇದುವರೆಗೆ 84 ಅಂತಹ ಪ್ರಯತ್ನಗಳು ನಡೆದಿವೆ ಮತ್ತು 59 ಮಂದಿ ಭಯೋತ್ಪಾದಕರ ಮಾಡಲಾಗಿದೆ. ಇವರನ್ನು ಹತ್ಯೆ ಮಾಡದೆ ಇರುತ್ತಿದ್ದರೆ ದೇಶದೊಳಗೆ ನುಸುಳುತ್ತಿದ್ದರು” ಎಂದು ಗೃಹ ವ್ಯವಹಾರಗಳ ರಾಜ್ಯ ಖಾತೆ ಸಚಿವ ಜಿ ಕಿಶನ್ ರೆಡ್ಡಿ ಅವರು ಲೋಕಸಭೆಗೆ ಲಿಖಿತ ಮಾಹಿತಿಯನ್ನು ನೀಡಿದ್ದಾರೆ.
1990 ರಿಂದ ಈ ವರ್ಷದ ಡಿಸೆಂಬರ್ 1 ರವರೆಗೆ ದೇಶದಲ್ಲಿ ವಿವಿಧ ಭಯೋತ್ಪಾದನಾ ಘಟನೆಗಳ ಸಂದರ್ಭದಲ್ಲಿ ಭದ್ರತಾಪಡೆಗಳು ಸುಮಾರು 22,557 ಉಗ್ರರನ್ನು ಹತ್ಯೆ ಮಾಡಿವೆ ಎಂದು ಮಾಹಿತಿಯನ್ನು ನೀಡಲಾಗಿದೆ.
“2015 ರಿಂದ 2019ರ ಅಕ್ಟೋಬರ್ 31 ರ ವರೆಗೆ ಗಡಿಯಾದ್ಯಂತ ಅಕ್ರಮವಾಗಿ ಒಳನುಸುಳುವ ಪ್ರಯತ್ನಗಳನ್ನು ನಡೆಸಿದ ಸಂದರ್ಭ ಸುಮಾರು 1011 ಉಗ್ರರನ್ನು ಹತ್ಯೆ ಮಾಡಲಾಗಿದೆ. 42 ಮಂದಿ ಉಗ್ರರನ್ನು ಬಂಧನಕ್ಕೊಳಪಡಿಸಲಾಗಿದೆ. 2253 ಉಗ್ರರು ಭಾರತೀಯ ಸೇನಾ ಪಡೆಗಳು ತೀವ್ರ ಪ್ರತಿರೋಧದ ಫಲವಾಗಿ ಹಿಂತಿರುಗಿದ್ದಾರೆ” ಎಂದು ಉಲ್ಲೇಖಿಸಲಾಗಿದೆ.
“ಪರೋಕ್ಷ ಯುದ್ದದ ಭಾಗವಾಗಿ ಮತ್ತು ಕಣಿವೆಯಲ್ಲಿ ಭಯೋತ್ಪಾದನೆಯನ್ನು ಭದ್ರಗೊಳಿಸುವ ಸಲುವಾಗಿ ಒಳನುಸುಳುವ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಭಯೋತ್ಪಾದಕರನ್ನು ಕಣಿವೆಯೊಳಗೆ ನುಗ್ಗಿಸಿ ಅಲ್ಲಿ ಹಿಂಸಾಚಾರವನ್ನು ಬುಗಿಲ್ ಎಬ್ಬಿಸುವುದು ಮತ್ತು ಜಮ್ಮು-ಕಾಶ್ಮೀರ ವಿಷಯವನ್ನು ಅಂತಾರಾಷ್ಟ್ರೀಕರಣಗೊಳಿಸುವುದು ಪಾಕಿಸ್ಥಾನದ ಯೋಜನೆಯಾಗಿದೆ” ಎಂದು ಹೇಳಲಾಗಿದೆ.
ಒಳನುಸುಳುವಿಕೆಯ ಪ್ರಯತ್ನಗಳನ್ನು ವಿಫಲಗೊಳಿಸುವ ಸಲುವಾಗಿ ಗಡಿಯುದ್ಧಕ್ಕೂ ಅತ್ಯಂತ ಪರಿಣಾಮಕಾರಿಯಾಗಿ ಕಂಠವನ್ನು ಭದ್ರತಾಪಡೆಗಳು ಇಟ್ಟಿವೆ, ಒಳನುಸುಳುವಿಕೆ ವಿರೋಧಿ ಕಾರ್ಯಾಚರಣೆಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.