ನವದೆಹಲಿ: ಅಯೋಧ್ಯಾ ವಿವಾದದ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಯಾರೊಬ್ಬರ ಗೆಲುವು ಅಥವಾ ಸೋಲು ಎಂಬಂತೆ ನೋಡಬಾರದು ಎಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಟ್ವಿಟ್ ಮಾಡಿರುವ ಮೋದಿ, “ಅಯೋಧ್ಯಾ ಕುರಿತು ದೇಶದ ಸರ್ವೋಚ್ಛ ನ್ಯಾಯಾಲಯವು ತನ್ನ ತೀರ್ಪನ್ನು ನೀಡಿದೆ. ಈ ತೀರ್ಪನ್ನು ಯಾರೊಬ್ಬರ ಸೋಲು ಅಥವಾ ಗೆಲುವಿನ ರೂಪದಲ್ಲಿ ನೋಡಬಾರದು. ರಾಮಭಕ್ತಿಯೇ ಇರಲಿ ರಹೀಮನ ಭಕ್ತಿಯೇ ಇರಲಿ, ಈ ಸಮಯ ನಮಗೆಲ್ಲರಿಗೂ ಭಾರತ ಭಕ್ತಿಯ ಭಾವನೆಯನ್ನು ಬಲಿಷ್ಠಗೊಳಿಸುವ ಸಮಯವಾಗಿದೆ. ಶಾಂತಿ, ಸದ್ಭಾವ ಮತ್ತು ಏಕತೆಯನ್ನು ಕಾಪಾಡೋಣ ಎಂಬುದು ದೇಶವಾಸಿಗಳಲ್ಲಿ ನನ್ನ ಮನವಿಯಾಗಿದೆ” ಎಂದಿದ್ದಾರೆ.
“ಸುಪ್ರೀಂಕೋರ್ಟ್ ನೀಡಿದ ತೀರ್ಪು ಹಲವು ವಿಧದಲ್ಲಿ ಮಹತ್ವಪೂರ್ಣವಾಗಿದೆ. ವಿವಾದವನ್ನು ಪರಿಹರಿಸುವಲ್ಲಿ ಕಾನೂನು ಪ್ರಕ್ರಿಯೆಯನ್ನು ಅನುಸರಿಸುವುದು ಎಷ್ಟು ಮುಖ್ಯ ಎಂಬುದನ್ನು ಇದು ತೋರಿಸುತ್ತದೆ. ಪ್ರತಿಯೊಂದು ಪಕ್ಷಕ್ಕೂ ತನ್ನ ವಾದಗಳನ್ನು ಮಂಡಿಸಲು ಸಾಕಷ್ಟು ಸಮಯ ಮತ್ತು ಅವಕಾಶವನ್ನು ನೀಡಲಾಯಿತು. ನ್ಯಾಯ ದೇಗುಲವು ದಶಕಗಳಷ್ಟು ಹಳೆಯದಾದ ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸಿತು” ಎಂದಿದ್ದಾರೆ.
“ಈ ನಿರ್ಧಾರವು ನ್ಯಾಯಾಂಗ ಪ್ರಕ್ರಿಯೆಗಳಲ್ಲಿ ಸಾಮಾನ್ಯ ಜನರ ವಿಶ್ವಾಸವನ್ನು ಮತ್ತಷ್ಟು ಬಲಪಡಿಸುತ್ತದೆ. ನಮ್ಮ ದೇಶದ ಸಾವಿರಾರು ವರ್ಷಗಳ ಸಹೋದರತ್ವದ ಮನೋಭಾವಕ್ಕೆ ಅನುಗುಣವಾಗಿ ನಾವು 130 ಕೋಟಿ ಭಾರತೀಯರಿಗೆ ಶಾಂತಿ ಮತ್ತು ಸಂಯಮವನ್ನು ಪರಿಚಯಿಸಬೇಕು. ಭಾರತದ ಶಾಂತಿಯುತ ಸಹಬಾಳ್ವೆಯ ಆಧಾರವಾಗಿರುವ ಮನೋಭಾವವನ್ನು ಪರಿಚಯಿಸಬೇಕು” ಎಂದಿದ್ದಾರೆ.
देश के सर्वोच्च न्यायालय ने अयोध्या पर अपना फैसला सुना दिया है। इस फैसले को किसी की हार या जीत के रूप में नहीं देखा जाना चाहिए।
रामभक्ति हो या रहीमभक्ति, ये समय हम सभी के लिए भारतभक्ति की भावना को सशक्त करने का है। देशवासियों से मेरी अपील है कि शांति, सद्भाव और एकता बनाए रखें।
— Narendra Modi (@narendramodi) November 9, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.