ಮುಂಬಯಿ: ರೈಲ್ವೆ ಸುರಕ್ಷತೆಯ ಬಗ್ಗೆ ಮತ್ತು ರೈಲ್ವೆ ಹಳಿಗಳನ್ನು ದಾಟುವ ಅಪಾಯಗಳ ಬಗ್ಗೆ ಜನರಿಗೆ ಅರಿವನ್ನು ನೀಡುವ ಸಲುವಾಗಿ, ಪಶ್ಚಿಮ ರೈಲ್ವೆಯು ಸಾವಿನ ದೇವತೆಯಾದ ಯಮರಾಜನನ್ನು ಕೆಲಸಕ್ಕೆ ನಿಯೋಜನೆಗೊಳಿಸಿದೆ.
ಭಾರಿ ದಂಡವನ್ನು ವಿಧಿಸಲಾಗುತ್ತಿದ್ದರೂ ಕೂಡ ರೈಲ್ವೆ ಹಳಿಗಳನ್ನು ದಾಟಬಾರದು ಎಂಬ ನಿಯಮವನ್ನು ಅನೇಕ ಜನರು ಪಾಲಿಸುತ್ತಿಲ್ಲ, ಇದಕ್ಕಾಗಿ ಪಶ್ಚಿಮ ರೈಲ್ವೆ ಬುಧವಾರ ಜಾಗೃತಿ ಅಭಿಯಾನವನ್ನು ಪ್ರಾರಂಭಿಸಿದೆ. ಯಮರಾಜನ ವೇಷಧಾರಿಯನ್ನು ನೀಯೋಜನೆಗೊಳಿಸಿ, ರೈಲ್ವೇ ನಿಯಮ ಪಾಲನೆ ಮಾಡದಿರುವುದರಿಂದ ಜೀವಕ್ಕಾಗುವ ಅಪಾಯದ ಬಗ್ಗೆ ಎಚ್ಚರಿಕೆ ನೀಡಿದೆ.
ಮಾನವರಹಿತ ಕ್ರಾಸಿಂಗ್ಗಳಲ್ಲಿ ದಾಟದಂತೆ, ಚಲಿಸುತ್ತಿರುವ ರೈಲಿಗೆ ಹತ್ತದಂತೆ ಮತ್ತು ಇಳಿಯದಂತೆ ಯಮರಾಜ ಜನರಿಗೆ ಜಾಗೃತಿ ಮೂಡಿಸುತ್ತಿದ್ದಾನೆ.
ಪಶ್ಚಿಮ ರೈಲ್ವೇಯು ವಿವಿಧ ನಿಲ್ದಾಣಗಳಲ್ಲಿ ಯಮರಾಜನನ್ನು ನಿಲ್ಲಿಸಿದೆ. ಈತ ಜನರಿಗೆ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾನೆ. ಈತನನ್ನು ಜನರೂ ಅತ್ಯಂತ ಕುತೂಹಲದಿಂದ ನೋಡುತ್ತಿದ್ದಾರೆ.
ಈಗಾಗಲೇ ಹಲವಾರು ಕಡೆ ಸಾರಿಗೆ ನಿಯಮವನ್ನು ಪಾಲನೆ ಮಾಡುವಂತೆ ಜನರಿಗೆ ಎಚ್ಚರಿಕೆ ನೀಡಲು ಯಮರಾಜರನ್ನು ನೇಮಿಸಲಾಗಿದೆ. ಇದೀಗ ರೈಲ್ವೇಯು ಇದೇ ಮಾದರಿಯನ್ನು ಅನುಸರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.