ಹೈದರಾಬಾದ್: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ- ಹೈದರಾಬಾದ್ ಮತ್ತು ಕೆಐಐಟಿ ಸ್ಕೂಲ್ ಆಫ್ ಆರ್ಕಿಟೆಕ್ಚರ್ನ ಸಂಶೋಧಕರ ಗುಂಪು ಕೃಷಿ ತ್ಯಾಜ್ಯದಿಂದ ಜೈವಿಕ ಇಟ್ಟಿಗೆಯನ್ನು ವಿನ್ಯಾಸಗೊಳಿಸಿದೆ. ಈ ಇಟ್ಟಿಗೆಗಳು ಉತ್ತಮ ತ್ಯಾಜ್ಯ ನಿರ್ವಹಣೆಗೆ ಸಹಾಯ ಮಾಡಬಲ್ಲದು, ಅಲ್ಲದೇ, ಇದು ಪರಿಸರ ಸ್ನೇಹಿ ಮತ್ತು ಸುಸ್ಥಿರ ಕಟ್ಟಡ ಸಾಮಗ್ರಿಗಳನ್ನು ಉತ್ತೇಜಿಸಬಲ್ಲದು.
ಈ ಇಟ್ಟಿಗೆಯನ್ನು ಅಭಿವೃದ್ಧಿಪಡಿಸಿದ ಸಂಶೋಧನಾ ತಂಡದಲ್ಲಿ ಐಐಟಿ ಹೈದರಾಬಾದಿನ ವಿನ್ಯಾಸ ವಿಭಾಗದ ಪಿಎಚ್ಡಿ ವಿದ್ವಾಂಸ ಆರ್. ಪ್ರಿಯಬ್ರತಾ ರೌತ್ರೇ ಮತ್ತು ಕೆಐಐಟಿ ಸ್ಕೂಲ್ ಆಫ್ ಆರ್ಕಿಟೆಕ್ಚರ್ನ ಸಹಾಯಕ ಪ್ರಾಧ್ಯಾಪಕ ಆರ್. ಅವಿಕ್ ರಾಯ್ ಅವರು ಇದ್ದಾರೆ.
ಹೈದರಾಬಾದ್ನ ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ಪಂಚಾಯತಿ ರಾಜ್ (ಎನ್ಐಆರ್ಡಿಪಿಆರ್) ಆಯೋಜಿಸಿದ್ದ ಗ್ರಾಮೀಣ ಇನ್ನೋವೇಟರ್ಸ್ನ ಸ್ಟಾರ್ಟ್-ಅಪ್ ಕಾನ್ಕ್ಲೇವ್ -2019 ರಲ್ಲಿ ಈ ಸಂಶೋಧನಾ ಯೋಜನೆಯು ಸುಸ್ಥಿರ ವಸತಿಗಾಗಿ ವಿಶೇಷ ಗುರುತಿಸುವಿಕೆ ಟ್ರೋಫಿಯನ್ನು ಪಡೆದಿತ್ತು.
ಈ ಜೈವಿಕ ಇಟ್ಟಿಗೆಗಳು ಸುಟ್ಟ ಜೇಡಿಮಣ್ಣಿನ ಇಟ್ಟಿಗೆಗಳಂತೆ ದೃಢವಾಗಿಲ್ಲ ಮತ್ತು ಇನ್ನು ಲೋಡ್-ಬೇರಿಂಗ್ ರಚನೆಗಳನ್ನು ನಿರ್ಮಿಸಲು ನೇರವಾಗಿ ಬಳಸಲಾಗದಿದ್ದರೂ, ಅವುಗಳನ್ನು ಮರದ ಅಥವಾ ಲೋಹದ ರಚನಾತ್ಮಕ ಚೌಕಟ್ಟಿನ ಸಂಯೋಜನೆಯೊಂದಿಗೆ ಕಡಿಮೆ-ವೆಚ್ಚದ ವಸತಿಗಳ ನಿರ್ಮಾಣದಲ್ಲಿ ಬಳಸಬಹುದು.
ಇದಲ್ಲದೆ, ಈ ಇಟ್ಟಿಗೆಗಳು ಶಾಖ ಮತ್ತು ಶಬ್ದಕ್ಕೆ ಉತ್ತಮ ನಿರೋಧಕವನ್ನು ಒದಗಿಸುತ್ತವೆ ಮತ್ತು ಕಟ್ಟಡಗಳ ಆರ್ದ್ರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ಇಟ್ಟಿಗೆಯಲ್ಲಿ ಕಟ್ಟಿದ ಮನೆಗಳು ಭಾರತದಂತಹ ಬಿಸಿ-ಆರ್ದ್ರ ವಾತಾವರಣಕ್ಕೆ ಸೂಕ್ತವಾಗುತ್ತವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.