ನವದೆಹಲಿ: ಕೇಂದ್ರ ಸರ್ಕಾರವು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆರ್ಥಿಕ ಸಲಹಾ ಮಂಡಳಿಗೆ ಮೂರು ಹೊಸ ಅರೆಕಾಲಿಕ ಸದಸ್ಯರನ್ನು ನೇಮಕ ಮಾಡಿದೆ. ನೀಲಕಾಂತ್ ಮಿಶ್ರಾ, ನೀಲೇಶ್ ಷಾ ಮತ್ತು ಡಾ.ವಿ ಅನಂತ ನಾಗೇಶ್ವರನ್ ಆರ್ಥಿಕ ಸಲಹಾ ಸಮಿತಿಗೆ ಸೇರ್ಪಡೆಗೊಂಡಿದ್ದಾರೆ.
ಅವರು ಮುಂದಿನ ಎರಡು ವರ್ಷಗಳವರೆಗೆ ಅಥವಾ ಮುಂದಿನ ಆದೇಶದವರೆಗೆ ಪ್ರಧಾನಮಂತ್ರಿ ಆರ್ಥಿಕ ಸಲಹಾ ಸಮಿತಿಯ ಶಾಶ್ವತವಲ್ಲದ(ಅರೆಕಾಲಿಕ) ಸದಸ್ಯರಾಗಿ ಸೇವೆ ಸಲ್ಲಿಸಲಿದ್ದಾರೆ.
ಡಾ.ವಿ ಅನಂತ ನಾಗೇಶ್ವರನ್ ಪ್ರಸ್ತುತ ಕ್ರೆಯ ವಿಶ್ವವಿದ್ಯಾಲಯದ ಐಎಫ್ಎಂಆರ್ ಗ್ರಾಜುಯೇಟ್ ಸ್ಕೂಲ್ ಆಫ್ ಬ್ಯುಸಿನೆಸ್ನಲ್ಲಿ ಡೀನ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಆರ್ಥಿಕತೆಯ ಬಗ್ಗೆ ಪ್ರಭಾವಶಾಲಿ ನಿರೂಪಣಕಾರರಾಗಿದ್ದಾರೆ.
ನೀಲಕಾಂತ್ ಮಿಶ್ರಾ ಏಷ್ಯಾ ಪೆಸಿಫಿಕ್ ಸ್ಟ್ರಾಟಜಿ ಮತ್ತು ಕ್ರೆಡಿಟ್ ಸ್ಯೂಸ್ಗಾಗಿ ಇಂಡಿಯಾ ಇಕ್ವಿಟಿ ಸ್ಟ್ರಾಟಜಿಸ್ಟ್ ಸಹ-ಮುಖ್ಯಸ್ಥರಾಗಿದ್ದಾರೆ. ಅವರು ಹದಿನೈದನೇ ಹಣಕಾಸು ಆಯೋಗದ ಸಲಹಾ ಮಂಡಳಿಯ ಭಾಗವಾಗಿದ್ದರು ಮತ್ತು ಜಿಎಸ್ಟಿ ಮತ್ತು ಎಫ್ಆರ್ಬಿಎಂ ಸಮಿತಿಗಳಿಗೆ ಸಲಹೆಗಾರರಾಗಿದ್ದರು.
ನಿಲೇಶ್ ಷಾ ಕೋಟಕ್ ಮಹೀಂದ್ರಾ ಆಸ್ತಿ ನಿರ್ವಹಣಾ ನಿಗಮದ ವ್ಯವಸ್ಥಾಪಕ ನಿರ್ದೇಶಕ (ಎಂಡಿ). ಬಂಡವಾಳ ಮಾರುಕಟ್ಟೆಗಳಲ್ಲಿ ಅವರಿಗೆ 25 ವರ್ಷಗಳ ಅನುಭವವಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.