ನವದೆಹಲಿ: Ritam ತನ್ನ ಸಾಮಾಜಿಕ ಮಾಧ್ಯಮ ಪ್ರಸ್ತುತತೆಯೊಂದಿಗೆ 2019ರ ಮೇನಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಪ್ರತಿಕ್ರಿಯೆ ಮತ್ತು ಪ್ರತಿಬಿಂಬದ ದೊಡ್ಡ ಮಟ್ಟದ ಪರಿಣಾಮವನ್ನು ಸೃಷ್ಟಿಸಿದೆ. ಅದರ SVG ಮ್ಯಾಪ್ಗಳು ಮತ್ತು ಮುನ್ಸೂಚನಾ ವಿಶ್ಲೇಷಣೆಗಳು ಪಾಲುದಾರ ಪೋರ್ಟಲ್ ಗಳಿಂದ ಮತ್ತು ಸಾಮಾನ್ಯ ಜನರಿಂದ ಭಾರೀ ಶ್ಲಾಘನೆಯನ್ನು ಗಳಿಸಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲೂ ಇದೇ ರೀತಿಯ ಕಾರ್ಯವನ್ನು ಮಾಡುವತ್ತ ಅದರ ಪ್ರಯತ್ನ ಮುಂದುವರೆದಿದೆ. ಅಲ್ಲದೇ, ‘ನವಭಾರತ ಕಾರ್ಯಕ್ರಮ’ ಮತ್ತು ‘ದೇವೇಂದ್ರ ಡಾಕ್ಟರಿನ್’ ಮುಂತಾದ ತಳ ಮಟ್ಟದ ಕಾರ್ಯಕ್ರಮ ಮತ್ತು ವಿಚಾರ ಸಂಕಿರಣಗಳನ್ನು ಅದು ಹಮ್ಮಿಕೊಂಡಿದೆ. ಒಂದು ಹೆಜ್ಜೆ ಮುಂದಿಡುತ್ತಾ, 2019ರ ಅಕ್ಟೋಬರ್ 19ರಂದು 11.45ಕ್ಕೆ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ವಿನಯ್ ಸಹಸ್ರಬುದ್ಧೆ ಅವರೊಂದಿಗಿನ ಮಾತುಕತೆಯನ್ನು ಫೇಸ್ಬುಕ್ ನಲ್ಲಿ ಲೈವ್ ನೀಡುತ್ತಿದೆ.
ಇದು ಖಂಡಿತವಾಗಿಯೂ Ritam ಪಯಣದಲ್ಲಿ ಮಹತ್ವದ ಮೈಲಿಗಲ್ಲು ಎಂದು ಸಾಬೀತಾಗಲಿದೆ. ಸಹಸ್ರಬುದ್ಧೆ ಅವರೊಂದಿಗೆ ಕೆಲವು ಪ್ರಮುಖ ಪ್ರಭಾವಶಾಲಿಗಳು ವೇದಿಕೆ ಹಂಚಿಕೊಳ್ಳಲಿದ್ದಾರೆಮತ್ತು ಇನ್ನೂ ಅನೇಕರು ಅವರೊಂದಿಗೆ ವಾಸ್ತವಿಕವಾಗಿ ಸೇರಿಕೊಳ್ಳಲಿದ್ದಾರೆ. ಅವರು ಸಾರ್ವಜನಿಕ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ ಮತ್ತು ಚುನಾವಣೆಗಳನ್ನೂ ಮೀರಿ, ಮುಂಬರುವ ಸಮಯಗಳಲ್ಲಿ ಬಿಜೆಪಿಯ ಹಾದಿಯ ಬಗೆಗಿನ ತಮ್ಮ ದೃಷ್ಟಿ ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ. ಇದು ನಿಜಕ್ಕೂ ಒಳನೋಟವುಳ್ಳ ಮತ್ತು ಆಸಕ್ತಿದಾಯಕ ಮಾತಕತೆಯಾಗಲಿದೆ.
Ritam ಫೇಸ್ಬುಕ್ ಪೇಜ್ ನಲ್ಲಿ, ಅಥವಾ ಆ್ಯಪ್ನಲ್ಲಿ ಮಾತಕತೆಗೆ ಸಾಕ್ಷಿಯಾಗಲು ಆಹ್ವಾನವನ್ನು ನೀಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.