ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಮಹತ್ವದ ಬೆಳವಣಿಗೆಯೊಂದರಲ್ಲಿ ಹಯಾತ್ ಅಹ್ಮದ್ ಭಟ್ ಎಂಬಾತನನ್ನು ಬಂಧಿಸಲಾಗಿದೆ. ಈತ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಆಗಸ್ಟ್ 5ರ ಬಳಿಕ ಕಣಿವೆಯನ್ನು ಅಶಾಂತಿ ಸೃಷ್ಟಿಸಲು ಹವಣಿಸುತ್ತಿದ್ದ. ಕಲ್ಲು ತೂರಾಟಗಾರರ ಕಿಂಗ್ಪಿನ್ ಈತನೇ ಎಂದು ಹೇಳಲಾಗಿದೆ.
ಹಯಾತ್ ದಾರ್ ಎಂದೂ ಕರೆಯಲ್ಪಡುವ ಭಟ್ ಅನ್ನು ಬುಧವಾರ ಬೆಳಿಗ್ಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಈತ ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಎಂದು ಹೇಳಲಾಗಿದೆ.
“ಈ ಹಿಂದೆ ಈತನನ್ನು ಪಿಎಸ್ಎ ಅಡಿಯಲ್ಲಿ ಬುಕ್ ಮಾಡಲಾಗಿತ್ತು. ಬಿಡುಗಡೆಯಾದ ನಂತರ ಈತ ಅಂಚರ್ ಸರೋವರ ಮತ್ತು ಸೌರಾ ಪ್ರದೇಶಗಳಲ್ಲಿ ಕಲ್ಲು ತೂರಾಟ ನಡೆಸಲು ಪ್ರಾರಂಭಿಸಿದ್ದ. ಪ್ರಸ್ತುತ ಈತನ ಬಂಧನವು ಒಂದು ಪ್ರಮುಖ ಪ್ರಗತಿಯಾಗಿದೆ” ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಹೇಳಿದ್ದಾರೆ.
ಜೆನಾಬ್ ಸಾಹಿಬ್ ಸೌರಾ ಮತ್ತು ಸುತ್ತಮುತ್ತಲಿನ ದುಷ್ಕರ್ಮಿಗಳನ್ನು ಸಜ್ಜುಗೊಳಿಸಿ ಕಲ್ಲು ತೂರಾಟವನ್ನು ಈತ ವ್ಯವಸ್ಥಿವಾಗಿ ಆಯೋಜನೆಗೊಳಿಸುತ್ತಿದ್ದ ಎಂದು ಅವರು ಹೇಳಿದ್ದಾರೆ. ಈ ಹಿಂದೆ ಅವರು ನಿಷೇಧಿತ ಮುಸ್ಲಿಂ ಲೀಗ್ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದ ಎನ್ನಲಾಗಿದೆ.
ಕಾನೂನು ಮತ್ತು ಸುವ್ಯವಸ್ಥೆಗೆ ಅಡಚಣೆಯನ್ನು ಉಂಟು ಮಾಡಿದ್ದಕ್ಕೆ ಸಂಬಂಧಿಸಿದ 16 ಕ್ಕೂ ಹೆಚ್ಚು ಎಫ್ಐಆರ್ಗಳನ್ನು ಈತನ ಮೇಲೆ ಹಾಕಲಾಗಿದೆ. ಭಾ ಜೆ & ಕೆ ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಈತನ ವಿರುದ್ಧ ಎರಡು ಬಾರಿ ಪ್ರಕರಣ ದಾಖಲಾಗಿದೆ.
2019 ರಲ್ಲಿ, ಯುಎಲ್ಎ (ಪಿ) ಕಾಯ್ದೆಯಡಿ ಮೂರು ಎಫ್ಐಆರ್ಗಳನ್ನು ಈತನ ವಿರುದ್ಧ ಸೌರಾ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.