ತಿರುವನಂತಪುರಂ: ದೇಶದ ಮೊದಲ ದೃಷ್ಟಿ ವಿಕಲಚೇತನಾ ಐಎಎಸ್ ಅಧಿಕಾರಿ ಕೇರಳದ ತಿರುವನಂತಪುರಂನಲ್ಲಿ ಇಂದು ಸಬ್ ಕಲೆಕ್ಟರ್ ಆಗಿ ಅಧಿಕಾರವನ್ನು ಸ್ವೀಕಾರ ಮಾಡಿದ್ದಾರೆ.
30 ವರ್ಷದ ಪ್ರಾಂಜಲ್ ಪಾಟೀಲ್ ಅವರು ಕೇರಳ ಕೇಡರ್ನ ಐಎಎಸ್ ಅಧಿಕಾರಿಯಾಗಿದ್ದು, ಇಂದು ಅವರು ಸಬ್ ಕಲೆಕ್ಟರ್ ಹುದ್ದೆಗೇರಿದ್ದಾರೆ. ಅವರು ಮಹಾರಾಷ್ಟ್ರದ ಉಲ್ಹಾಸ್ನಗರದವರಾಗಿದ್ದಾರೆ. ಆರು ವರ್ಷದವರಿದ್ದಾಗ ತಮ್ಮ ದೃಷ್ಟಿಯನ್ನು ಇವರು ಕಳೆದುಕೊಂಡಿದ್ದಾರೆ. ಭರವಸೆ ಕಳೆದುಕೊಳ್ಳದ ಅವರು ವಿದ್ಯಾಭ್ಯಾಸವನ್ನು ಮುಂದುವರೆಸಿ, ರಾಜಕೀಯ ಶಾಸ್ತ್ರದಲ್ಲಿ ದೆಹಲಿ ಜವಹಾರ್ ಲಾಲ್ ನೆಹರೂ ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದುಕೊಂಡರು.
ಅವರು 2016 ರಲ್ಲಿ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಪರೀಕ್ಷೆಯನ್ನು 773 ನೇ ರ್ಯಾಂಕ್ ಮೂಲಕ ತೇರ್ಗಡೆಯಾದರು ಮತ್ತು ಅದರ ಮುಂದಿನ ವರ್ಷ 2017ರಲ್ಲಿ ಇನ್ನೊಮ್ಮೆ ಪರೀಕ್ಷೆ ಬರೆದು ತಮ್ಮ ರ್ಯಾಂಕಿಂಗ್ ಅನ್ನು 124 ಕ್ಕೆ ಹೆಚ್ಚಿಸಿಕೊಂಡರು.
ಪಾಟೀಲ್ ಅವರು ತಮ್ಮ ತರಬೇತಿ ಅವಧಿಯಲ್ಲಿ 2018ರಲ್ಲಿ ಎರ್ನಾಕುಲಂ ಸಹಾಯಕ ಕಲೆಕ್ಟರ್ ಆಗಿ ನೇಮಕಗೊಂಡರು.
ಯುವ ಜನತೆಗೆ ಸಂದೇಶವನ್ನು ರವಾನಿಸಿರುವ ಅವರು, “ನಾವೆಂದಿಗೂ ಸೋಲಬಾರದು, ಎಂದಿಗೂ ಕೈಚೆಲ್ಲಬಾರದು. ಪರಿಶ್ರಮದಿಂದ ನಾವಂದುಕೊಂಡ ಗುರಿಯನ್ನು ತಲುಪಲು ಸಾಧ್ಯ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.