ತಿರುಪತಿ: ಆಂಧ್ರಪ್ರದೇಶದ ತಿರುಮಲ ಬೆಟ್ಟದ ತುದಿಯಲ್ಲಿರುವ ಪ್ರಸಿದ್ಧ ಶ್ರೀ ವೆಂಕಟೇಶ್ವರ ದೇಗುಲಕ್ಕೆ ಬ್ರಹ್ಮೋತ್ಸವದ ಸಂದರ್ಭದಲ್ಲಿ 7 ಲಕ್ಷಕ್ಕೂ ಅಧಿಕ ಭಕ್ತಾದಿಗಳು ಆಗಮಿಸಿದ್ದಾರೆ. 9 ದಿನಗಳ ಬ್ರಹ್ಮೋತ್ಸವ ಇದಾಗಿದ್ದು, ಮಂಗಳವಾರ ಸಮಾಪನಗೊಂಡಿದೆ.
ಹಿಂದಿನ ವರ್ಷಕ್ಕಿಂತ ಭಕ್ತರ ಸಂಖ್ಯೆ ಶೇಕಡಾ 20 ರಷ್ಟು ಹೆಚ್ಚಾಗಿದೆ ಎಂದು ದೇಗುಲದ ವ್ಯವಹಾರಗಳನ್ನು ನಿರ್ವಹಿಸುವ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಅಧಿಕಾರಿಗಳು ತಿಳಿಸಿದ್ದಾರೆ. ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಸಿಂಘಾಲ್ ಹೇಳುವಂತೆ, ಕಳೆದ ವರ್ಷ ಉತ್ಸವದಲ್ಲಿ 24 ಲಕ್ಷ ಲಡ್ಡುಗಳು ಮಾರಾಟವಾಗಿತ್ತು, ಈ ಬಾರಿ 31 ಲಕ್ಷ ಲಡ್ಡುಗಳ ಮಾರಾಟವಾಗಿದೆ.
ಹಬ್ಬದ ಅಂತಿಮ ದಿನವಾದ ಮಂಗಳವಾರ ಒಂದು ಲಕ್ಷಕ್ಕೂ ಹೆಚ್ಚು ಯಾತ್ರಿಕರು ದರ್ಶನ ಪಡೆದುಕೊಂಡಿದ್ದಾರೆ. ಬ್ರಹ್ಮೋತ್ಸವದ ಕೊನೆಯ ದಿನದಂದು ಚಕ್ರ ಸ್ನಾನವನ್ನು ಪುರೋಹಿತರು ನಡೆಸಿದರು. ದೇವರ ವಿಗ್ರಹಗಳಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು, ಅದರ ನಂತರ ಅವುಗಳನ್ನು ದೇವಾಲಯದಲ್ಲಿ ನೆಲೆಗೊಂಡಿರುವ ಪುಷ್ಕರಿಣಿ ಎಂಬ ಕೊಳದ ನೀರಿನಲ್ಲಿ ಮುಳುಗಿಸಲಾಯಿತು.
ಉತ್ಸವವು ಸೆಪ್ಟೆಂಬರ್ 30 ರಂದು ದ್ವಾರಜೋಹನಂ (ಧ್ವಜಾರೋಹಣ ಸಮಾರಂಭ) ದೊಂದಿಗೆ ಪ್ರಾರಂಭವಾಯಿತು. ಪದ್ಧತಿಯ ಪ್ರಕಾರ, ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು ರಾಜ್ಯ ಸರ್ಕಾರದ ಪರವಾಗಿ ಒಂದು ಜೋಡಿ ರೇಷ್ಮೆ ವಸ್ತ್ರವನ್ನು ದೇವರಿಗೆ ಅರ್ಪಿಸಿದರು. ವಿವಿಧ ವಿಧಿಗಳನ್ನು ನೆರವೇರಿಸಲಾಯಿತು ಮತ್ತು ಮೆರವಣಿಗೆಗಳನ್ನು ಈ ವೇಳೆ ನಡೆಸಲಾಯಿತು.
ಅಕ್ಟೋಬರ್ 4 ರಂದು ಗರುಡ ಸೇವೆ ಎಂಬ ಅತ್ಯಂತ ಪ್ರಮುಖ ಕಾರ್ಯಕ್ರಮ ನಡೆಯಿತು. ಈ ದಿನ ನಡೆದ ಶ್ರೀ ವೆಂಕಟೇಶ್ವರನ ಪವಿತ್ರ ಮೆರವಣಿಗೆಯ ವೇಳೆ ಸುಮಾರು 85,000 ಭಕ್ತರು ದರ್ಶನ ಪಡೆದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.