ಭಾರತದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ಹವಾ ಎಬ್ಬಿಸುತ್ತಿದೆ. ಅತ್ಯುನ್ನತ ಗುಣಮಟ್ಟ, ಸಂಪೂರ್ಣ ಸ್ವದೇಶಿಯತೆ, ತಂತ್ರಜ್ಞಾನ ಕೌಶಲಗಳನ್ನು ಮೈಗೂಡಿಸಿಕೊಂಡು ಸಂಚರಿಸುತ್ತಿರುವ ಈ ರೈಲು ಭಾರತೀಯರ ಮಹತ್ವಾಕಾಂಕ್ಷೆಯ ಪ್ರತಿಫಲವೂ ಹೌದು. ನವದೆಹಲಿಯಿಂದ ವರಣಾಸಿಗೆ ಕಾನ್ಪುರ ಮತ್ತು ಪ್ರಯಾಗ್ರಾಜ್ ಮೂಲಕ ಚಲಿಸುವ ವಂದೇ ಭಾರತ್ ಎಕ್ಸ್ಪ್ರೆಸ್ ಅಥವಾ ಟ್ರೈನ್ 18 ಸೆಮಿ ಹೈಸ್ಪೀಡ್ ರೈಲಿನ ಮೊದಲ ಆವೃತ್ತಿ ಅತ್ಯಂತ ಯಶಸ್ಸು ಕಂಡ ಬಳಿಕ ರೈಲ್ವೆ ಸಚಿವಾಲಯವು ವಂದೇ ಭಾರತ್ ಎಕ್ಸ್ಪ್ರೆಸ್ನ ಎರಡನೇ ಆವೃತ್ತಿಯನ್ನು ಪ್ರಾರಂಭಿಸಿತು. ಅಕ್ಟೋಬರ್ 3 ರಂದು ಗೃಹ ಸಚಿವ ಅಮಿತ್ ಶಾ ಮತ್ತು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ವೈಷ್ಣೋ ದೇವಿ ದೇಗುಲದ ಭಕ್ತರಿಗೆ ವಿಶೇಷ ಉಡುಗೊರೆಯಾಗಿ ಎರಡನೇ ಆವೃತ್ತಿಯ ವಂದೇ ಭಾರತ್ ಎಕ್ಸ್ಪ್ರೆಸ್ ಅನ್ನು ದೆಹಲಿ ಮತ್ತು ಕಾತ್ರಾದ ನಡುವೆ ಸಂಚರಿಸುವುದಕ್ಕೆ ಹಸಿರು ನಿಶಾನೆ ತೋರಿಸಿದರು.
ಈ ರೈಲನ್ನು ಹತ್ತಿದವರಿಗೆ ಭಾರತೀಯ ರೈಲ್ವೆ ಪ್ರಸ್ತುತ ನಡೆಸುತ್ತಿರುವ ಅಗಾಧ ಬದಲಾವಣೆ ನಮ್ಮ ಕಣ್ಣಿಗೆ ಗೋಚರವಾಗುತ್ತಿದೆ. ಪ್ರತಿಯೊದು ಕೋಚುಗಳಲ್ಲೂ ಸಿಸಿಟಿವಿ ಕ್ಯಾಮೆರಾಗಳ ಉಪಸ್ಥಿತಿಯನ್ನು ನಾವಿಲ್ಲಿ ನೋಡಬಹುದು, ಇದು ರೈಲು ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸುತ್ತಿದೆ. ಸಿಸಿಟಿವಿ ಕ್ಯಾಮೆರಾಗಳ ಹೊರತಾಗಿ, ಕಲ್ಲು ತೂರಾಟದಂತಹ ಸಂಭವಿಸಬಹುದಾದ ಹಾನಿಗಳನ್ನು ತಡೆಗಟ್ಟುವ ಸಲುವಾಗಿ ರೈಲಿನ ಪ್ರತಿ ವಿಂಡೋದಲ್ಲಿ ಹೆಚ್ಚುವರಿ ಫಿಲ್ಮ್ ಅನ್ನು ಹಾಕಲಾಗಿದೆ. 2018ರ ಡಿಸೆಂಬರ್ 20 ರಂದು ದೆಹಲಿಯಿಂದ ಆಗ್ರಾಕ್ಕೆ ಮೊದಲ ಆವೃತ್ತಿಯ ಟ್ರೈನ್ 18ನ ಟ್ರಯಲ್ ರನ್ ಸಮಯದಲ್ಲಿ, ದುಷ್ಕರ್ಮಿಗಳು ಕಲ್ಲು ಎಸೆದು ಕಿಟಕಿ ಒಡೆದುಹಾಕಿದ್ದರು, ಗಾಜು ಚೂರುಚೂರಾಗಿತ್ತು. ಹೀಗಾಗಿ ಎರಡನೇಯ ಆವೃತ್ತಿಯಲ್ಲಿ ರಕ್ಷಾ ಕವಚವನ್ನು ದುಪ್ಪಟ್ಟುಗೊಳಿಸಲಾಗಿದೆ.
ವಂದೇ ಭಾರತ್ ಎಕ್ಸ್ಪ್ರೆಸ್ನ ಎರಡನೇ ಆವೃತ್ತಿ ನವದೆಹಲಿ ರೈಲ್ವೆ ನಿಲ್ದಾಣದಿಂದ ಪ್ರಯಾಣವನ್ನು ಆರಂಭಿಸಿ ವೈಷ್ಣೋ ದೇವಿ ಭಕ್ತರ ಮೂಲ ಶಿಬಿರವಾಗಿ ಕಾರ್ಯನಿರ್ವಹಿಸುವ ಪಟ್ಟಣ ಕಾತ್ರದವರೆಗೆ ಚಲಿಸುತ್ತದೆ. ಶ್ರೀ ಮಾತಾ ವೈಷ್ಣೋ ದೇವಿ ಕಾತ್ರ ರೈಲ್ವೆ ನಿಲ್ದಾಣದಲ್ಲಿ ಇದು ನಿಲುಗಡೆಯಾಗುತ್ತದೆ. ನವದೆಹಲಿಯಿಂದ ಕಾತ್ರಗೆ ಇತರ ರೈಲುಗಳ ಮೂಲಕ ಪ್ರಯಾಣಿಸಲು ತೆಗೆದುಕೊಳ್ಳುವ ಸಾಮಾನ್ಯ ಸಮಯ 12 ಗಂಟೆಗಳು, ಆದರೆ ವಂದೇ ಭಾರತ್ ಎಕ್ಸ್ಪ್ರೆಸ್ ನಮ್ಮನ್ನು ನವದೆಹಲಿಯಿಂದ ಕಾತ್ರಗೆ 8 ಗಂಟೆಗಳೊಳಗೆ ಸಾಗಿಸುತ್ತದೆ. ಗಂಟೆಗೆ ಸರಾಸರಿ 110-130 ಕಿ.ಮೀ ವೇಗದಲ್ಲಿ ಇದು ಸಾಗುತ್ತದೆ, ಇದರ ಗರಿಷ್ಠ ವೇಗ ಗಂಟೆಗೆ 160 ಕಿ.ಮೀ.
ಈ ರೈಲು ದೆಹಲಿಯಿಂದ ಕಾತ್ರಗೆ ತಲುಪುವ ನಡುವೆ ಕೇವಲ 3 ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆಯಾಗುತ್ತದೆ. ಅವುಗಳೆಂದರೆ ಹರಿಯಾಣದ ಅಂಬಾಲಾ ಕಂಟೋನ್ಮೆಂಟ್, ಪಂಜಾಬಿನ ಲುಧಿಯಾನ ಜಂಕ್ಷನ್ ಮತ್ತು ಜಮ್ಮು ಮತ್ತು ಕಾಶ್ಮೀರದ ಜಮ್ಮು ತಾವಿ, ಕಾತ್ರಾದ ನಿಲ್ದಾಣ ಇದರ ಗಮ್ಯಸ್ಥಾನವಾಗಿದೆ. ಅಕ್ಟೋಬರ್ 5 ರಿಂದ ಸಾಮಾನ್ಯ ಜನರಿಗಾಗಿ ವಾಣಿಜ್ಯ ಕಾರ್ಯಾಚರಣೆಯನ್ನು ಈ ರೈಲು ಪ್ರಾರಂಭಿಸಿದೆ. ಎಲ್ಲಾ ಶುಲ್ಕಗಳನ್ನು ಒಳಗೊಂಡಂತೆ ಈ ರೈಲಿನ ಸಾಮಾನ್ಯ ಟಿಕೆಟ್ ದರ ರೂ. 1630 ಮತ್ತು ಎಲ್ಲಾ ಶುಲ್ಕಗಳು ಮತ್ತು ತೆರಿಗೆಗಳನ್ನು ಒಳಗೊಂಡಂತೆ ಎಕ್ಸಿಕ್ಯೂಟಿವ್ ಕಾರ್ ಚೇರ್ ಟಿಕೆಟ್ ದರ ರೂ. 3014 ಆಗಿದೆ.
ಈ ರೈಲು ಒಂದು ಅದ್ಭುತವೆಂದರೆ ನಿಜಕ್ಕೂ ತಪ್ಪಲ್ಲ, ಕೆಲವು ಅತ್ಯುತ್ತಮ ವಿಮಾನ ಸೇವೆಗಳಂತ ಸೇವೆಗಳನ್ನು ಈ ರೈಲು ಒದಗಿಸುತ್ತದೆ. ಪ್ರತಿ ಆಸನದ ಕೆಳಗೆ ಚಾರ್ಜಿಂಗ್ ಸಾಕೆಟ್ಗಳಿವೆ, ಬೋಗಿಗಳಲ್ಲಿ ಎಲ್ಲಾ ಸಮಯದಲ್ಲೂ ಕಾರ್ಯನಿರ್ವಹಣೆ ಮಾಡುವ ಸಿಬ್ಬಂದಿಗಳು ಇರುತ್ತಾರೆ. ಇದರಲ್ಲಿನ ಬಯೋ ಟಾಯ್ಲೆಟ್ಗಳು ವಿಮಾನಗಳಲ್ಲಿರುವಂತೆಯೇ ಕಾರ್ಯನಿರ್ವಹಿಸುತ್ತವೆ.
ರೈಲಿನ ಕ್ಯಾಟರಿಂಗ್ ಸೇವೆಯು ಅತ್ಯುನ್ನತ ಸ್ಥಾನದಲ್ಲಿದೆ. ಇತರ ರೈಲುಗಳಿಗಿಂತ ಭಿನ್ನವಾಗಿ, ವಂದೇ ಭಾರತ್ ಎಕ್ಸ್ಪ್ರೆಸ್ನಲ್ಲಿ ಅಡುಗೆ ಸೇವೆಯನ್ನು ಪಿಪಿಪಿ ಮಾದರಿಯಲ್ಲಿ (ಸಾರ್ವಜನಿಕ ಖಾಸಗಿ ಸಹಭಾಗಿತ್ವ ಮಾದರಿ) ನಡೆಸಲಾಗುತ್ತದೆ, ಇದರಲ್ಲಿ ಜನಪ್ರಿಯ ಆಹಾರ ಫ್ರಾಂಚೈಸಿಗಳು ಸಹ ಆನ್ ಬೋರ್ಡ್ ನೀಡಲಾಗುವ ಭಕ್ಷ್ಯಗಳಿಗೆ ಕೊಡುಗೆ ನೀಡಬಹುದು.
ಅಷ್ಟೇ ಅಲ್ಲ, ಹಿಮಾಚಲ ಪ್ರದೇಶದ ತೋಟಗಳಲ್ಲಿ ಬೆಳೆದ ಸೇಬಿನಿಂದ ತಯಾರಿಸಿದ ಜ್ಯೂಸ್ ಕೂಡ ಈ ರೈಲಿನಲ್ಲಿ ಸಿಗುತ್ತಿದೆ. ಇದು ಭಾರತೀಯ ರೈಲ್ವೆ ಸ್ಥಳೀಯ ಉತ್ಪನ್ನಗಳ ಪ್ರಚಾರ ಮಾದರಿಯನ್ನು ಚೆನ್ನಾಗಿ ಅನುಸರಿಸುತ್ತದೆ ಎಂಬುದನ್ನು ಸಾಬೀತುಪಡಿಸುತ್ತದೆ. ಕಾಶ್ಮೀರ ಕಣಿವೆಯಿಂದ ಬರುವ ಸೇಬುಗಳಿಂದಾಗಿ ಹಿಮಾಚಲಪ್ರದೇಶದ ಸೇಬುಗಳು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿವೆ. ವಿವಿಧ ರಾಜ್ಯಗಳ ಸ್ಥಳೀಯ ಉತ್ಪನ್ನಗಳನ್ನು ಉತ್ತೇಜಿಸುವ ದೃಷ್ಟಿಯಿಂದ ಇದು ರೈಲ್ವೆ ಸಚಿವಾಲಯದ ಸ್ವಾಗತಾರ್ಹ ಕ್ರಮವಾಗಿದೆ. ಅಲ್ಲದೆ, ನವರಾತ್ರಿ ಹಬ್ಬದ ಸಮಯದಲ್ಲಿ ಉಪವಾಸ ಮಾಡುವವರಿಗೂ ರೈಲ್ವೇ ವ್ರತ್ ಕಾ ಖಾನಾವನ್ನು ಪರಿಚಯಿಸಿತ್ತು. ಇದು ನಿಜಕ್ಕೂ ಮಹತ್ವದ ಬೆಳಣಿಗೆಯೇ ಸರಿ.
ಈ ರೈಲಿನ ಮತ್ತೊಂದು ಕುತೂಹಲಕಾರಿ ಅಂಶವೆಂದರೆ ಕಲಾ ಸೇವೆಗಳು. ಪರಿಸರ ಸ್ನೇಹಿ ಬಯೋ ಟಾಯ್ಲೆಟ್ ಹೊರತಾಗಿ, ಏಕ ಬಳಕೆಯ ಪ್ಲಾಸ್ಟಿಕ್ನ ಬಳಕೆ ಇಲ್ಲಿ ಅತೀ ಕಡಿಮೆ ಪ್ರಮಾಣದಲ್ಲಿ ಇದೆ. ಕೇಂದ್ರ ಸರ್ಕಾರದ ನೀತಿಗೆ ಅನುಗುಣವಾಗಿ ಸುಧಾರಣೆಗಳನ್ನು ಮಾಡಲಾಗುತ್ತಿದೆ. ಪ್ರತಿ ಕೋಚ್ಗೆ ಸ್ವಯಂಚಾಲಿತ ಸ್ಲೈಡಿಂಗ್ ಬಾಗಿಲುಗಳನ್ನು ಅಳವಡಿಸಲಾಗಿದ್ದು, ಅದು ನಿರ್ದಿಷ್ಟ ನಿಲ್ದಾಣಕ್ಕೆ ರೈಲಿನ ಆಗಮನವಾದ ಮೇಲೆ ಮಾತ್ರ ತೆರೆಯುತ್ತದೆ, ಪ್ರಯಾಣಿಕರು ಚಾಲನೆಯಲ್ಲಿರುವ ರೈಲುಗಳನ್ನು ಹತ್ತಲು ಪ್ರಯತ್ನಿಸಿದಾಗ ಸಂಭವಿಸುವ ಅಪಘಾತಗಳನ್ನು ಇದು ತಡೆಯುತ್ತದೆ. ಇದು ಪ್ರಯಾಣಿಕರ ಸುರಕ್ಷತೆಗಾಗಿ ಭಾರತೀಯ ರೈಲ್ವೆ ಇತ್ತೀಚಿನ ದಿನಗಳಲ್ಲಿ ಎಷ್ಟು ಬದ್ಧವಾಗಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸುತ್ತದೆ. ಸ್ವಯಂಚಾಲಿತ ಸ್ಲೈಡಿಂಗ್ ಬಾಗಿಲುಗಳು ಕೇವಲ ಕೋಚುಗಳಿಗೆ ಮಾತ್ರ ಸೀಮಿತವಾಗಿಲ್ಲ, ಪ್ರತಿ ಕಾಪಾರ್ಟ್ಮೆಂಟ್ ಒಳಗಿನ ಎಂಟ್ರೆನ್ಸ್ನಲ್ಲಿಯೂ ಇದೆ.
ಸ್ವಯಂಚಾಲಿತ ಬಾಗಿಲುಗಳು ಮಾತ್ರವಲ್ಲದೇ, ರೈಲು ಆನ್ ಬೋರ್ಡ್ ವೈಫೈ ಇಂಟರ್ನೆಟ್ ಮತ್ತು ವಿಶೇಷ ಜಿಪಿಎಸ್ ಆಧಾರಿತ ಮಾಹಿತಿ ವ್ಯವಸ್ಥೆಯನ್ನು ಸಹ ಹೊಂದಿದೆ. ಪ್ರತಿ ಕಂಪಾರ್ಟ್ಮೆಂಟಿನ ಸ್ಮಾರ್ಟ್ ಟಿವಿಗೆ ಸಂಪರ್ಕ ಹೊಂದಿದ ಜಿಪಿಎಸ್ ಆಧಾರಿತ ಮಾಹಿತಿ ವ್ಯವಸ್ಥೆಯು ನಾವು ಮುಂದಿನ ನಿಲ್ದಾಣದಿಂದ ಎಷ್ಟು ದೂರದಲ್ಲಿದ್ದೇವೆ ಎಂಬುದರ ಬಗ್ಗೆ ಮಾತ್ರವಲ್ಲದೆ, ರೈಲಿನ ವೇಗದ ಬಗ್ಗೆಯೂ ನಮಗೆ ಮಾಹಿತಿಯನ್ನು ನೀಡುತ್ತವೆ.
ಸಮಗ್ರವಾಗಿ ಹೇಳಬೇಕೆಂದರೆ, ಇದು ಕೇಂದ್ರ ಸರ್ಕಾರ ಮತ್ತು ರೈಲ್ವೆ ಸಚಿವಾಲಯವು ರಾಷ್ಟ್ರಕ್ಕೆ ನೀಡದ ಅತ್ಯುತ್ತಮ ನವರಾತ್ರಿ ಉಡುಗೊರೆಗಳಲ್ಲಿ ಒಂದಾಗಿದೆ. ನವದೆಹಲಿಯಿಂದ ಕಾತ್ರಗೆ ವಂದೇ ಭಾರತ್ ಎಕ್ಸ್ಪ್ರೆಸ್ ಪರಿಚಯ ಸಮಯ ಉಳಿತಾಯ ಮಾತ್ರವಲ್ಲ, ಇದು ಪರಿಸರ ಸ್ನೇಹಿ, ಟೆಕ್ ಬುದ್ಧಿಮತ್ತೆ ಮತ್ತು ಪ್ರತಿಯೊಂದು ವಿಷಯದಲ್ಲೂ ಐಷಾರಾಮಿಯಾಗಿದೆ. ಈ ರೈಲಿನೊಂದಿಗೆ ಮಾತಾ ವೈಷ್ಣೋ ದೇವಿಯ ಪವಿತ್ರ ಕ್ಷೇತ್ರಕ್ಕೆ ಸುಲಭವಾಗಿ ಪ್ರಯಾಣಿಸಬಹುದು. ಹೀಗೆ ಪ್ರಯಾಣಿಸಿದ ಪ್ರತಿಯೊಬ್ಬ ಯಾತ್ರಿಕನ ಮುಖದಲ್ಲೂ ಒಂದು ವಿಶೇಷ ಅನುಭವ ಪಡೆದ ಮಂದಹಾಸ ಮೂಡುವುದು ಖಚಿತ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.