ಮುಂಬಯಿ: ಮುಂಬಯಿಯ 36 ವರ್ಷದ ಸುನೀಲ್ ಕಳೆದ 9 ವರ್ಷಗಳಲ್ಲಿ ಬರೋಬ್ಬರಿ ನಾಲ್ಕು ಡಿಗ್ರಿಗಳನ್ನು ಪಡೆದುಕೊಂಡಿದ್ದಾರೆ. ಆದರೆ ಈ ಡಿಗ್ರಿಗಳು ಅವರ ಜೀವನವನ್ನು ಬದಲಿಸಿಲ್ಲ. ಇಂದಿಗೂ ಅವರು ಮುಂಬಯಿ ಬೃಹತ್ ಮಹಾನಗರ ಪಾಲಿಗೆಯಲ್ಲಿ ಕಸ ಸಂಗ್ರಾಹಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬಿ.ಕಾಂ, ಬಿಎ ಇನ್ ಜರ್ನಲಿಸಮ್, ಎಂಎ ಇನ್ ಗ್ಲೋಬಲೈಜೇಶನ್ ಆಂಡ್ ಲೇಬರ್, ಮಾಸ್ಟರ್ ಇನ್ ಸೋಶಲ್ ವರ್ಕ್ ಮಾಡಿರುವ ಸುನೀಲ್. ಇದೀಗ ಪ್ರತಿಷ್ಟಿತ ಟಾಟಾ ಸೋಶಲ್ ಸೈನ್ಸ್ನಲ್ಲಿ ಎಂಫಿಲ್ ಮಾಡುತ್ತಿದ್ದಾರೆ.
ಆದರೆ ಈ ಯಾವ ಡಿಗ್ರಿಗಳಿಗೂ ಅವರು ಕಸ ಹೊರುವುದನ್ನು ನಿಲ್ಲಿಸಲು ಸಾಧ್ಯವಾಗಿಲ್ಲ. ಕುಟುಂಬದ ಹೊಟ್ಟೆ ತುಂಬಿಸಲು ಅವರು ಗಾರ್ಬೆಜ್ ಕಲೆಕ್ಟರ್ ಆಗಿಯೇ ದುಡಿಯಬೇಕಾಗಿದೆ, ನಾಲ್ಕು ತಲೆಮಾರುಗಳಿಂದಲೂ ಅವರ ಕುಟುಂಬ ಇದೇ ಕೆಲಸವನ್ನು ಮಾಡುತ್ತಾ ಬರುತ್ತಿದೆ.
ನಾವು ಕಸ ಗುಡಿಸುವವರಾಗಿಯೇ ಜನಿಸಿದ್ದೇವೆ, ಹುಟ್ಟಿನಿಂದ ಇಲ್ಲಿಯವರೆಗೆ ನಾವು ಜೀತದಾಳುಗಳು, ಇದರಿಂದ ಹೊರ ಬರಲು ಪ್ರಯತ್ನಿಸುತ್ತೇವೆ ಆದರೂ ದಾರಿ ಕಾಣುವುದಿಲ್ಲ.
ಶಿಕ್ಷಣ ಪಡೆದರೆ ನೀವು ಪ್ರಗತಿ ಹೊಂದುತ್ತೀರಿ ಎಂದು ಅಂಬೇಡ್ಕರ್ ಹೇಳಿದ್ದರು, ಆದರೆ ಜನರು ಅದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಎಲ್ಲಾ ದಲಿತರೂ ಗಾರ್ಬೆಜ್ ಕ್ಲೀನರ್ಗಳಲ್ಲ, ಆದರೆ ಗಾರ್ಬೆಜ್ ಕ್ಲೀನರ್ಗಳೆಲ್ಲಾ ದಲಿತರು. ಈ ಉದ್ಯೋಗದಲ್ಲಿ ಅವರಿಗೆ ಶೇ.100ರಷ್ಟು ಮೀಸಲಾತಿ ಇದೆ ಎಂದು ಸುನೀಲ್ ಯಾದವ್ ಅತ್ಯಂತ ಬೇಸರದಿಂದ ಹೇಳಿಕೊಳ್ಳುತ್ತಾರೆ.
ನಮ್ಮ ದೇಶದಲ್ಲಿ ಎರಡನೇ ಕ್ಲಾಸ್ ಓದಿದವರೂ ರಾಜಕಾರಣಿಗಳಾಗಬಹುದು, ಆದರೆ ಉನ್ನತ ವ್ಯಾಸಂಗ ಮಾಡಿದವರು ಗಾರ್ಬೆಜ್ ತೆಗೆಯುತ್ತಿದ್ದಾರೆ. ಇದಕ್ಕಿಂತ ವಿಪರ್ಯಾಸ ಬೇರೆ ಇದೆಯೇ?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.