ನವದೆಹಲಿ: ಬೆಂಗಳೂರಿನಲ್ಲಿ ಹಿಂದೆ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿಯೊಬ್ಬರು ಈಗ ಕೋಟ್ಯಾಧಿಪತಿಯಾಗಿ ಹೊರಹೊಮ್ಮಿದ್ದಾರೆ. ಕೇರಳದ ಕಣ್ಣೂರು ಜಿಲ್ಲೆಯ ಆಜಿಕೋಡ್ನವರಾದ ಬೈಜು ರವೀಂದ್ರನ್ ಕೆಲ ವರ್ಷಗಳ ಹಿಂದೆ ಸ್ಥಾಪನೆ ಮಾಡಿರುವ ‘ಬೈಜೂಸ್-ಲರ್ನಿಂಗ್ ಆ್ಯಪ್’ ಎಂಬ ಶೈಕ್ಷಣಿಕ ವಲಯದ ಸ್ಟಾರ್ಟ್ಅಪ್ ಈಗ ಅಂದಾಜು 37,000 ಕೋಟಿ ರೂ. ಮೌಲ್ಯದ ದಿಗ್ಗಜ ಕಂಪನಿಯಾಗಿ ಬೆಳೆದಿದೆ.
37 ವರ್ಷದ ಬೈಜು ರವಿಂದ್ರನ್ ಬ್ರಿಟನ್ ಮೂಲದ ಶಿಪ್ಪಿಂಗ್ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿದ್ದರು. ನಂತರ ವಿದ್ಯಾರ್ಥಿಗಳಿಗೆ ಟ್ಯೂಷನ್ ಹೇಳಿ ಕೊಡುತ್ತಿದ್ದರು. ಬೆಂಗಳೂರಿನಲ್ಲಿ 2015ರಲ್ಲಿ ಬೈಜೂಸ್ ಆ್ಯಪ್ ಅನ್ನು ಇವರು ಸ್ಥಾಪನೆ ಮಾಡಿದ್ದಾರೆ. ಇದು ಅವರಿಗೆ ಭಾರಿ ಯಶಸ್ಸು ತಂದುಕೊಟ್ಟಿದ್ದು, ಅವರನ್ನು ಭಾರತದ ಹೊಸ ಬಿಲಿಯನೇರ್ ಆಗಿ ರೂಪಿಸಿದೆ.
ಬೈಜೂಸ್ ಲರ್ನಿಂಗ್ ಆ್ಯಪ್ ಶೈಕ್ಷಣಿಕ ವಲಯದ ಸ್ಟಾರ್ಟ್ಅಪ್ ಆಗಿದ್ದು, ದೇಶದಾದ್ಯಂತ ಭಾರೀ ಸದ್ದು ಮಾಡುತ್ತಿದೆ. 2019 ರಲ್ಲಿ ಭಾರತ ಕ್ರಿಕೆಟ್ ತಂಡದ ಜೆರ್ಸಿ ಹಕ್ಕುಗಳನ್ನು ಬೈಜೂಸ್ ಖರೀದಿಸಿದೆ. ಇದೇ ವರ್ಷದ ಸೆ. 5 ರಿಂದ 2022ರ ಮಾ. 31 ರ ವರೆಗೆ ಕ್ರಿಕೆಟ್ ಆಟಗಾರರು ಬೈಜೂಸ್ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ ನಟ ಶಾರುಖ್ ಖಾನ್ ಬೈಜೂಸ್ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಬೆಂಗಳೂರಿನಲ್ಲಿ ಈ ಕಂಪನಿಯ ಪ್ರಧಾನ ಕಚೇರಿಯನ್ನು ಇದೆ.
ಚೀನಾದ ಮೊಬೈಲ್ ತಯಾರಕ ಸಂಸ್ಥೆ ಒಪ್ಪೋ ತನ್ನ ಪ್ರಾಯೋಜಕತ್ವದ ಹಕ್ಕನ್ನು ಬೈಜೂಸ್ಗೆ 2 ದಿನಗಳ ಹಿಂದಷ್ಟೇ ಹಸ್ತಾಂತರಿಸಿದೆ.
1 ರಿಂದ 12 ನೇ ತರಗತಿಯವರೆಗಿನ ಮಕ್ಕಳು, ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಆಕಾಂಕ್ಷಿಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. 3.5 ಕೋಟಿ ವಿದ್ಯಾರ್ಥಿಗಳನ್ನು, 24 ಲಕ್ಷ ಮಂದಿ ಚಂದಾದಾರರನ್ನು ಈ ಕಂಪನಿ ಹೊಂದಿದೆ.
ಸಿಇಒ ಹಾಗೂ ಸಂಸ್ಥಾಪಕರು ಆಗಿರುವ ಬೈಜು ರವೀಂದ್ರನ್ ಅವರು ಕಂಪನಿಯಲ್ಲಿ ಶೇ. 21ಕ್ಕಿಂತ ಹೆಚ್ಚು ಮೌಲ್ಯ ಹೊಂದಿದ್ದಾರೆ. ಬೈಜುಸ್ ತನ್ನ ಸೇವೆಯನ್ನು 2020 ರ ಹೊತ್ತಿಗೆ ಅಮೆರಿಕಾಗೆ ವಿಸ್ತರಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.