ನವದೆಹಲಿ: ‘ಕ್ಷಯರೋಗ ಮುಕ್ತ ಭಾರತ’ ಕಾರ್ಯಕ್ರಮದ ಗುರಿಯನ್ನು ತ್ವರಿತವಾಗಿ ತಲುಪುವ ಸಲುವಾಗಿ ನೀತಿ, ಯೋಜನೆ ಮತ್ತು ಕಾರ್ಯಕ್ರಮ ಅನುಷ್ಠಾನ ಮಟ್ಟದಲ್ಲಿ ಅಂತರ-ವಲಯ ಒಮ್ಮುಖವನ್ನು ರೂಪಿಸುವ ಒಪ್ಪಂದಕ್ಕೆ ಆಯುಷ್ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಸಹಿ ಹಾಕಿದೆ. ಹೀಗಾಗಿ ಇನ್ನು ಮುಂದೆ ಆಯುಷ್ ಸಚಿವಾಲಯ ಮತ್ತು ಆರೋಗ್ಯ ಸಚಿವಾಲಯ ಟಿಬಿಯನ್ನು ದೇಶದಲ್ಲಿ ನಿರ್ಮೂಲನೆ ಮಾಡಲು ಜಂಟಿಯಾಗಿ ಹೋರಾಡಲಿವೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ಪ್ರೀತಿ ಸುದನ್ ಮತ್ತು ಆಯುಷ್ ಕಾರ್ಯದರ್ಶಿ ವೈದ್ಯ ರಾಜೇಶ್ ಕೋಟೆಚಾ ಅವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಯಲಯ ರಾಜ್ಯ ಖಾತೆ ಸಚಿವ ಅಶ್ವಿನಿ ಚೌಬೆ, ಆಯುಷ್ ರಾಜ್ಯ ಖಾತೆ ಸಚಿವ ಶ್ರೀಪಾದ್ ನಾಯ್ಕ್ ಅವರ ಸಮ್ಮುಖದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಿದರು.
ಆಯುಷ್ನ ಮೂಲಸೌಕರ್ಯ ಮತ್ತು ಸಾಂಸ್ಥಿಕ ನೆಟ್ವರ್ಕ್ನೊಳಗೆ ಟಿಬಿ (ಕ್ಷಯ ರೋಗ) ಆರೈಕೆ ಸೇವೆಗಳ ಏಕೀಕರಣ ಮತ್ತು ಸಂಪರ್ಕಗಳ ಅಭಿವೃದ್ಧಿಯ ಗುರಿಯನ್ನು ಇಟ್ಟುಕೊಂಡು ಈ ಎರಡು ಸಚಿವಾಲಯಗಳು ಸಹಯೋಗವನ್ನು ಸಾಧಿಸಲು ಮುಂದಾಗಿವೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸೆಂಟ್ರಲ್ ಟಿಬಿ ಡಿವಿಷನ್ ಒಪ್ಪಂದವು, ಸಂವೇದನೆ, ಜಾಗೃತಿ , ಆಯುಷ್ ಸಂಸ್ಥೆಗಳ ಸಾಮರ್ಥ್ಯ ವೃದ್ಧಿ ಮತ್ತು ಟಿಬಿಯ ಚಿಕಿತ್ಸೆ, ನಿಯಂತ್ರಣ ಮತ್ತು ನಿರ್ವಹಣೆಗಳಲ್ಲಿ ಆರೋಗ್ಯ ಸೇವಾ ಪೂರೈಕೆದಾರರ ವ್ಯಾಪ್ತಿಯನ್ನು ವಿವರಿಸುವಲ್ಲಿ ಆಯುಷ್ ಪ್ರಾಮುಖ್ಯತೆಯನ್ನು ಪ್ರತಿಪಾದಿಸುತ್ತದೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಒಪ್ಪಂದದ ಅಡಿಯಲ್ಲಿ, ಟಿಬಿ ನಿರ್ಮೂಲನೆಯ ಕೇಂದ್ರೀಕೃತ ಚಟುವಟಿಕೆಗಳು ಆಯುಷ್ ಸಂಸ್ಥೆಗಳು ಮತ್ತು ವೃತ್ತಿಪರ ಸಂಸ್ಥೆಗಳೊಂದಿಗೆ ಜಂಟಿಯಾಗಿ ಕೆಲಸ ಮಾಡುವ ಯೋಜನೆಯನ್ನು ಒಳಗೊಳ್ಳುತ್ತವೆ ಮತ್ತು ಟಿಬಿ ನಿಯಂತ್ರಣ ಮತ್ತು ನಿರ್ವಹಣೆಗೆ ಪುರಾವೆ ಆಧಾರಿತ ಆಯುಷ್ ಮಧ್ಯಸ್ಥಿಕೆಗಳ ಬಳಕೆಯನ್ನು ಉತ್ತೇಜಿಸುತ್ತದೆ.
2025ರ ವೇಳೆಗೆ ಭಾರತದಿಂದ ಟಿಬಿಯನ್ನು ನಿರ್ಮೂಲನೆ ಮಾಡುವ ಗುರಿಯನ್ನು ಭಾರತ ಸರ್ಕಾರ ಹೊಂದಿದೆ.
To strengthen the efforts towards a TB-Free India by 2025, MoUs were signed today at Nirman Bhawan, for multisectoral coordination between @MoHFW_INDIA @moayush@DefenceMinIndia & @RailMinIndia#TBHaregaDeshJeetega #swasthabharat pic.twitter.com/63NHvE4f8Q
— Shripad Y. Naik (@shripadynaik) July 19, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.