ನವದೆಹಲಿ: ಸಮಸ್ತ ಭಾರತೀಯರಿಗೆ 24×7 ನಿರಂತರ ವಿದ್ಯುತ್ ಪೂರೈಸುವ ಗುರಿಯನ್ನು ಹೊಂದಿರುವ ದೇಶದ ಮೊದಲ ವಿದ್ಯುತ್ ವಿತರಣಾ ಯೋಜನೆಯಾದ ‘ಕರಡು ವಿತರಣಾ ದೃಷ್ಟಿಕೋನ ಯೋಜನೆ’ (Draft Distribution Perspective Plan)ಯನ್ನು ವಿದ್ಯುತ್ ಖಾತೆ ರಾಜ್ಯ ಸಚಿವ ರಾಜ್ ಕುಮಾರ್ ಸಿಂಗ್ ಅವರು ಪರಿಶೀಲನೆಗೊಳಪಡಿಸಿದ್ದಾರೆ.
ಇದಕ್ಕೂ ಮುನ್ನ, ಸರ್ಕಾರವು ರಾಷ್ಟ್ರೀಯ ವಿದ್ಯುತ್ ನೀತಿಯಡಿಯಲ್ಲಿ ಉತ್ಪಾದನೆ ಮತ್ತು ಪ್ರಸರಣ ಕ್ಷೇತ್ರಗಳಿಗೆ ದೃಷ್ಟಿಕೋನ ಯೋಜನೆಗಳನ್ನು ಸಿದ್ಧಪಡಿಸಿವೆ. ವಿದ್ಯುತ್ ವಿತರಣೆಯ ಕುರಿತು ದೃಷ್ಟಿಕೋನ ಯೋಜನೆಯ ಅಭಿವೃದ್ಧಿಯನ್ನು ಕೇಂದ್ರ ಸರ್ಕಾರ ಕೈಗೆತ್ತಿಕೊಳ್ಳುವುದು ಇದೇ ಮೊದಲು.
ಎಲ್ಲಾ ಗ್ರಾಹಕರಿಗೆ ಶೇ.100 ರಷ್ಟು ಮೀಟರಿಂಗ್ ಮತ್ತು ಬೇಡಿಕೆಯ ಮೇಲೆ ವಿದ್ಯುತ್ ಸಂಪರ್ಕವನ್ನು ಒದಗಿಸುವ ಮಹತ್ವವನ್ನು ಈ ಯೋಜನೆ ಸಾರುತ್ತದೆ. ಇದಲ್ಲದೆ, ಮುಂದಿನ ಮೂರು ವರ್ಷಗಳಲ್ಲಿ ಅಸ್ತಿತ್ವದಲ್ಲಿರುವ ಎಲ್ಲಾ ವಿದ್ಯುತ್ ಮೀಟರ್ಗಳನ್ನು ಪ್ರಿಪೇಯ್ಡ್ ಮೋಡ್ನಲ್ಲಿ ಸ್ಮಾರ್ಟ್ ಮೀಟರ್ಗಳಾಗಿ ಪರಿವರ್ತಿಸುವ ಅಗತ್ಯತೆಯ ಬಗ್ಗೆಯೂ ಈ ಯೋಜನೆ ಒತ್ತಿಹೇಳುತ್ತದೆ.
ಕೊಅಪರೇಟಿವ್ ಮತ್ತು ಕಾಂಪಿಟೇಟಿವ್ ಫೆಡರಲಿಸಂನ ಸ್ಪೂರ್ತಿಯೊಂದಿಗೆ ರಾಜ್ಯಗಳು ಮತ್ತು ಅವುಗಳ ವಿತರಣಾ ಕಂಪನಿಗಳೊಂದಿಗೆ (ಡಿಸ್ಕಾಮ್) ಈ ಯೋಜನೆಯನ್ನು ಕಾರ್ಯಗತಗೊಳಿಸಲು ನಿರ್ಧರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.