ನವದೆಹಲಿ: ರೈತರ ಕಲ್ಯಾಣಕ್ಕಾಗಿ ಭಾರತ ಸರ್ಕಾರ ಅನೇಕ ನವೀನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಭಾರತೀಯ ರೈತರ ಆದಾಯವನ್ನು ದ್ವಿಗುಣಗೊಳಿಸಲು ನೆರವಾಗುವ ಸಲುವಾಗಿ ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ಪಂಚಾಯತ್ ರಾಜ್ (ಎನ್ಐಆರ್ಡಿಪಿಆರ್) ಆ್ಯಕ್ವಾಕಲ್ಚರ್ನಲ್ಲಿ ಹೊಸ ತಂತ್ರಜ್ಞಾನವನ್ನು ರೂಪಿಸುತ್ತಿದೆ.
ಎನ್ಐಆರ್ಡಿಪಿಆರ್ ಇತ್ತೀಚೆಗೆ ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯವು ಅಭಿವೃದ್ಧಿಪಡಿಸಿದ ”Backyard Recirculatory Aquaculture System’ ಅನ್ನು ಅನುಷ್ಠಾನಗೊಳಿಸಿದೆ.
ವರದಿಯ ಪ್ರಕಾರ, ಈ ವ್ಯವಸ್ಥೆಯು ಮೀನು ಬೆಳೆಯುವ ಕೊಳವಾಗಿದ್ದು, ಇದು ಕೇಜ್ಗಳಲ್ಲಿ ಮೀನುಗಳನ್ನು ಹೆಚ್ಚು ಸಾಂದ್ರವಾಗಿ ಸಂಗ್ರಹಿಸಲು ಅನುವು ಮಾಡಿಕೊಡುತ್ತದೆ. ಈ ಕೊಳದ ಸಣ್ಣ ಕೇಜ್ಗಳಲ್ಲಿ ವಿವಿಧ ಪ್ರಭೇದಗಳು ಮತ್ತು ಗಾತ್ರದ ಮೀನುಗಳನ್ನು ಸಂಗ್ರಹಿಸುವ ಮೂಲಕ ಲೋಡ್ ಅನ್ನು ಹೊಂದಿಸಲು ಅನುವು ಮಾಡಿಕೊಡುತ್ತದೆ. ಈ ವ್ಯವಸ್ಥೆಗೆ ನೀರಿನ ಅವಶ್ಯಕತೆ ಸಾಕಷ್ಟು ಕಡಿಮೆ ಇರುವುದರಿಂದ, ವಿವಿಧ ಕೇಜ್ಗಳಲ್ಲಿನ ಹೆಚ್ಚಿನ ಸಾಂದ್ರತೆಯ ಮೀನು ಸಂಗ್ರಹದ ಫಿಶ್ಪಾಂಡ್ ಅನ್ನು ನಿರ್ವಹಿಸುವುದನ್ನು ಸರಳಗೊಳಿಸುತ್ತದೆ.
ಎನ್ಐಆರ್ಡಿಪಿಆರ್ನ ಮಹಾನಿರ್ದೇಶಕ ಡಬ್ಲ್ಯು.ಆರ್. ರೆಡ್ಡಿ ಅವರ ಪ್ರಕಾರ, “ನಾವು ಸಮಗ್ರ ಕೃಷಿ ಪದ್ಧತಿಗಳನ್ನು ಉತ್ತೇಜಿಸುವ ಮೂಲಕ ರೈತರ ಆದಾಯವನ್ನು ದ್ವಿಗುಣಗೊಳಿಸಬಹುದು. ಇಂತಹ ತಂತ್ರಜ್ಞಾನ ಬೆಂಬಲಿತ ಸ್ಮಾರ್ಟ್ ಫಾರ್ಮಿಂಗ್ ಪರಿಹಾರಗಳು ಯುವಕರಿಗೆ ಕೃಷಿಯನ್ನು ವೃತ್ತಿಯಾಗಿ ಕೈಗೆತ್ತಿಕೊಳ್ಳಲು ಪ್ರೋತ್ಸಾಹಿಸುತ್ತದೆ ” ಎಂದಿದ್ದಾರೆ.
ಇನ್ಸ್ಟಿಟ್ಯೂಟಿನ ಗ್ರಾಮೀಣ ತಂತ್ರಜ್ಞಾನ ಉದ್ಯಾನದಲ್ಲಿ ಈ ವ್ಯವಸ್ಥೆಯನ್ನು ಉದ್ಘಾಟಿಸಲಾಗಿದೆ, ಇದು ಸರ್ಕಾರದ ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿಯ ಧನಸಹಾಯದೊಂದಿಗೆ ಸ್ಥಾಪಿಸಲ್ಪಟ್ಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.