ನವದೆಹಲಿ: ವಾಯುಸೇನೆಯ AN-32 ವಿಮಾನ ಪತನಗೊಂಡಿರುವ ಅರುಣಾಚಲ ಪ್ರದೇಶದ ದುರ್ಗಮ ಪ್ರದೇಶಕ್ಕೆ ವಾಯುಸೇನೆ ಮತ್ತು ಭೂಸೇನಾ ಸಿಬ್ಬಂದಿಗಳನ್ನು, ಸ್ಥಳಿಯ ಪರ್ವತಾರೋಹಿಗಳನ್ನು ಇಳಿಸುವಲ್ಲಿ ವಾಯುಪಡೆ ಬುಧವಾರ ಯಶಸ್ವಿಯಾಗಿದೆ. ಈ ಪ್ರದೇಶಕ್ಕೆ ಇವರನ್ನು ಏರ್ಡ್ರಾಪ್ ಮಾಡಲಾಗಿದ್ದು, ಬದುಕುಳಿದವರಿಗಾಗಿ ಶೋಧ ಕಾರ್ಯವನ್ನು ಇವರು ಮಾಡಲಿದ್ದಾರೆ.
ವಿಮಾನದ ಭಗ್ನಾವಶೇಷ ಪತ್ತೆಯಾದ ಸ್ಥಳವು ಕಡಿದಾದ ಪರ್ವತಮಯ ಭೂಪ್ರದೇಶವಾಗಿದ್ದು, ಕಗ್ಗತ್ತಲ ದಟ್ಟಾರಣ್ಯವಾಗಿದೆ. ಭಾರತೀಯ ಸೇನೆಯ MI-17s ಮತ್ತು ALH ಅಡ್ವಾನ್ಸಡ್ ಲೈಟ್ ಹೆಲಿಕಾಪ್ಟರ್ ಗಳನ್ನು ಕಾರ್ಯಾಚರಣೆಗಳಿಗಾಗಿ ಬಳಸಿಕೊಳ್ಳಲಾಗುತ್ತಿದೆ. ಲಭ್ಯವಿರುವ ಎಲ್ಲಾ ಸೌಲಭ್ಯಗಳನ್ನು ಬಳಸಿ ಬದುಕುಳಿದವರಿಗಾಗಿ ಶೋಧ ಕಾರ್ಯವನ್ನು ನಡೆಸಲಾಗುತ್ತಿದೆ.
ಸಿಯಾಂಗ್ ಜಿಲ್ಲೆಯ ಗ್ಯಾಟ್ಟೆ ಗ್ರಾಮದ ಬಳಿ ಪ್ಯಾರೆ ಹಿಲ್ಸ್ ವಿಮಾನ ಪತನಗೊಂಡಿರುವ ನಿಖರವಾದ ಸ್ಥಳವಾಗಿದೆ ಎಂದು ಸಿಯಾಂಗ್ ಜಿಲ್ಲಾ ಉಪ ಆಯುಕ್ತ ರಾಜೀವ್ ತಕುಕ್ ಹೇಳಿದ್ದಾರೆ. ಈ ವಿಮಾನದಲ್ಲಿದ್ದ 13 ಸಿಬ್ಬಂದಿ ಏನಾದರು ಎಂಬ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಜೂನ್ 3ರಂದು ಅಸ್ಸಾಂನ ಜೋರ್ಹತ್ ನಿಂದ ಹೊರಟು ಅರುಣಾಚಲ ಪ್ರದೇಶದ ಸಿ-ಯೋಮಿ ಜಿಲ್ಲೆಯ ಮೆಚುಕಾದಲ್ಲಿ ಹಾರಾಟ ನಡೆಸಿದ ಬಳಿಕ ಈ ವಿಮಾನ ಪತನಕ್ಕೀಡಾಗಿದೆ. 9 ದಿನಗಳ ನಿರಂತರ ಶೋಧ ಕಾರ್ಯಾಚರಣೆಯ ಬಳಿಕ ಇದರ ಅವಶೇಷ ಪತ್ತೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.