ನವದೆಹಲಿ: 2014ರಲ್ಲೇ ಅಧಿಕಾರವನ್ನು ಕಳೆದುಕೊಂಡಿರುವ ಕಾಂಗ್ರೆಸ್ ಪಕ್ಷದ ಸ್ಥಿತಿ ಈಗ ಹೀನಾಯ ಮಟ್ಟಕ್ಕಿಳಿದಿದೆ. 24 ಅಕ್ಬರ್ ರೋಡಿನಲ್ಲಿನ ಕಛೇರಿ ಸೇರಿದಂತೆ ಕಾಂಗ್ರೆಸ್ ಪಕ್ಷವು ಲುಟಿಯಾನ್ನಲ್ಲಿನ ನಾಲ್ಕು ಬಂಗಲೆಗಳ ಪೈಕಿ ಮೂರನ್ನು ಕಳೆದುಕೊಳ್ಳುವ ಭೀತಿಯಲ್ಲಿದೆ.
26 ಅಕ್ಬರ್ ರೋಡಿನಲ್ಲಿನ ಸೇವಾ ದಳಿ ಕಛೇರಿ, 5 ರೈಸೀನಾ ರೋಡ್ ಪ್ರಾಪರ್ಟಿ, ಸಿಐಐ/109 ಚಾಣಕ್ಯಪುರಿ ಬಂಗಲೆಗಳನ್ನು ಖಾಲಿ ಮಾಡುವಂತೆ ಕಾಂಗ್ರೆಸ್ ಪಕ್ಷಕ್ಕೆ ಲೋಕಸಭಾ ಕಾರ್ಯದರ್ಶಿ ಪ್ರಕಟನೆಯಲ್ಲಿ ಸೂಚಿಸಿದ್ದಾರೆ ಎಂದು ಹೇಳಲಾಗಿದೆ. ಬಂಗಲೆಗಳನ್ನು ಖಾಲಿ ಮಾಡಲು ಅಕ್ಟೋಬರ್ ತಿಂಗಳವರೆಗೆ ಸಮಯಾವಕಾಶವನ್ನು ನೀಡಲಾಗಿದೆ ಎಂದು ಹೇಳಲಾಗಿದೆ.
2010ರಲ್ಲಿ ಕಾಂಗ್ರೆಸ್ ಪಕ್ಷವು 24 ಅಕ್ಬರ್ ರೋಡಿನಲ್ಲಿಮ 9-ಎ ರೌಸ್ ಅವೆನ್ಯೂ ನಲ್ಲಿ ಪಕ್ಷದ ಕಛೇರಿಯನ್ನು ಮೂರು ವರ್ಷಗಳ ಅವಧಿಗೆ ಸ್ಥಾಪಿಸಲು ಅನುಮತಿಯನ್ನು ಪಡೆದುಕೊಂಡಿತ್ತು, ಮೂರು ವರ್ಷ ಪೂರೈಸಿದ ಬಳಿಕ ಮತ್ತೆ ವಿಸ್ತರಣೆಯನ್ನು ಪಡೆದುಕೊಂಡಿತ್ತು. ಅಲ್ಲಿಂದ ಇಲ್ಲಿವರೆಗೂ ವಿಸ್ತರಣೆಯನ್ನು ಪಡೆದುಕೊಂಡು ಅಲ್ಲಿ ಭದ್ರವಾಗಿ ನೆಲೆಯೂರಿದೆ.
ಆದರೀಗ ಮೋದಿ ಸರ್ಕಾರ ಅವಧಿ ಮುಗಿದ ಬಳಿಕವೂ ಸರ್ಕಾರದ ಬಂಗಲೆಗಳಲ್ಲಿ ಅನಧಿಕೃತವಾಗಿ ನೆಲೆಸಿರುವ ಅಧಿಕಾರಿಗಳು ಮತ್ತು ರಾಜಕಾರಣಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಮುಂದಾಗಿದೆ. ಅಕ್ಟೋಬರ್ ತಿಂಗಳೊಳಗೆ ಜಾಗ ಖಾಲಿ ಮಾಡುವಂತೆ ಆದೇಶಿಸಿದೆ.
ಇನ್ನು ಲೋಕಸಭಾ ಕಾರ್ಯದರ್ಶಿ ಹೊರಡಿಸಿರುವ ಈ ಪ್ರಕಟಣೆಯಲ್ಲಿ 12 ಬಂಗಲೆಗಳನ್ನು ಖಾಲಿ ಮಾಡಿಸುವುದರ ಜೊತೆಗೆ 517 ಬಂಗಲೆಗಳನ್ನು ಹೊಸ ಸಂಸದರಿಗೆ ಹಂಚಿಕೆ ಮಾಡುವ ಪ್ರಸ್ತಾಪ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.